Saturday, April 26, 2025
Homeರಾಷ್ಟ್ರೀಯ | Nationalಯುಪಿ : ಅಕ್ಕಿ ಗಿರಣಿಯೊಂದರಲ್ಲಿ ಡೈಯರ್ ಹೊಗೆ ಸೇವಿಸಿ ಐವರ ದುರ್ಮರಣ

ಯುಪಿ : ಅಕ್ಕಿ ಗಿರಣಿಯೊಂದರಲ್ಲಿ ಡೈಯರ್ ಹೊಗೆ ಸೇವಿಸಿ ಐವರ ದುರ್ಮರಣ

5 Killed As Fire Breaks Out At Bahraich Rice Mill In UP,

ಬಹೇಚ್. ಏ. 25: ಇಲ್ಲಿನ ಅಕ್ಕಿ ಗಿರಣಿಯೊಂದರಲ್ಲಿ ಡೈಯರ್ ನಿಂದ ಹೊರಸೂಸುವ ಹೊಗೆಯನ್ನು ಉಸಿರಾಡಿ ಐವರು ಕಾರ್ಮಿಕರು ಮೃತಪಟ್ಟಿರುವ ಘಟನ ನಡೆದಿದೆ. ಹೊಗೆಯನ್ನು ಉಸಿರಾಡಿದ ನಂತರ ಮೂರ್ಭೆ ಹೋದ ಇತರ ಮೂವರು ಕಾರ್ಮಿಕರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮಾನಂದ ಪ್ರಸಾದ್ ಕುಶ್ವಾಹ ಪಿಟಿಐಗೆ ತಿಳಿಸಿದ್ದಾರೆ.

ರಾಜ್‌ಗರ್ಹಿಯಾ ರೈಸ್ ಮಿಲ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಹಲವಾರು ಕಾರ್ಮಿಕರು ಇಂದು ಬೆಳಿಗ್ಗೆ ಗಿರಣಿಗೆ ಬಂದು ಡೈಯರ್‌ನಿಂದ ಹೊರಹೊಮ್ಮುವ ಹೊಗೆಯನ್ನು ಪರಿಶೀಲಿಸಲು ಹೋದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಹೊಗೆಯು ತುಂಬಾ ಹೆಚ್ಚಾಗಿತ್ತು, ಅಲ್ಲಿದ್ದ ಎಲ್ಲಾ ಕಾರ್ಮಿಕರು ಘಟನಾ ಸ್ಥಳದಲ್ಲಿ ಮೂರ್ಛ ಹೋದರು. ಮಾಹಿತಿ ಪಡೆದ ನಂತರ, ಅಗ್ನಿಶಾಮಕ ಸೇವಾ ತಂಡವು ಸ್ಥಳಕ್ಕೆ ತಲುಪಿ ಪೀಡಿತ ವ್ಯಕ್ತಿಗಳನ್ನು ಸ್ಥಳಾಂತರಿಸಿತು. ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆಗಮಿಸಿದಾಗ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಗಾಯಗೊಂಡ ಉಳಿದ ಮೂವರು ಕಾರ್ಮಿಕರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.ಘಟನೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.

RELATED ARTICLES

Latest News