ನವದೆಹಲಿ,ಮೇ.4- ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಹದಗೆಡುತ್ತಿದ್ದು, ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಏತನಧ್ಯೆ ಆಕ್ರಮಿತ ಪಿಒಕೆ ಪ್ರದೇಶದಲ್ಲಿದ್ದ 450 ಮದರಸಾಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಏ.22 ರಂದು ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ 26 ಮಂದಿ ಅಮಾಯಕ ಭಾರತೀಯ ಪ್ರವಾಸಿಗರ ಹತ್ಯೆಯಾದ ಬಳಿಕ ಯಾವುದೇ ಕ್ಷಣದಲ್ಲಿ ಪ್ರತಿಕಾರದ ಕಾರ್ಯಾಚರಣೆಗಳ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಏಷ್ಯಾ ಖಂಡದಲ್ಲಿ ಶಾಂತಿ ಸುವ್ಯವಸ್ಥೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಆತಂಕ ವ್ಯಕ್ತಪಡಿಸಿದೆ.
ದಾಳಿಗೆ ಪಾಕಿಸ್ತಾನ ಕಾರಣ ಎಂದು ಪರೋಕ್ಷವಾಗಿ ಭಾರತೀಯ ಪ್ರಧಾನಿ ಸೇರಿದಂತೆ ಎಲ್ಲರೂ ವಾಗ್ದಾಳಿ ನಡೆಸುತ್ತಿದ್ದಾರೆ. ಅತ್ತ ಪಾಕಿಸ್ತಾನದ ಪ್ರಧಾನಿ ದಾಳಿಗೆ ನಮ ದೇಶ ಕಾರಣ ಎಂಬುದಕ್ಕೆ ಸೂಕ್ತ ಸಾಕ್ಷ್ಯ ಒದಗಿಸಿ ಎಂದು ಕೇಳುತ್ತಿದ್ದಾರೆ.
ಇದರ ನಡುವೆ ರಕ್ಷಣಾ ಸಚಿವ ರಾಜನಾಥಸಿಂಗ್ ಸೇನಾಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ನಡೆಸಿ ಸೇನೆಯನ್ನು ಸನ್ನದ್ಧುಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ನೀಡಿದ್ದಾರೆ. ನಿನ್ನೆ ಸಂಜೆ ಜಮು-ಕಾಶೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರಧಾನಿಯವರನ್ನು ಭೇಟಿ ಮಾಡಿ ಸ್ಥಳೀಯ ಸನ್ನಿವೇಶಗಳ ಬಗ್ಗೆ ವಿವರಣೆ ನೀಡಿದ್ದಾರೆ.
ದಿನೇದಿನೇ ವಾತಾವರಣ ಬಿಗಡಾಯಿಸುತ್ತಿರುವುದರಿಂದಾಗಿ ಪಾಕ್ ಆಕ್ರಮಿತ ಕಾಶೀರ ಭಾಗದಲ್ಲಿನ 450 ಮದರಸಾಗಳನ್ನು ಮುಚ್ಚಲಾಗಿದ್ದು, 40 ಸಾವಿರ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.
ಭಾರತ, ಪಾಕಿಸ್ತಾನದಿಂದ ಎಲ್ಲಾ ಸರಕುಸೇವೆಗಳ ಆಮದು ಅಥವಾ ರಫ್ತನ್ನು ನಿಷೇಧಿಸಿದೆ. ವಾಯುಸಂಚಾರ ಮತ್ತು ಸಮುದ್ರಯಾನಗಳನ್ನೂ ಸ್ಥಗಿತಗೊಳಿಸಲಾಗಿದೆ. ಭಾರತದ ಈ ಕ್ರಮ ಪಾಕಿಸ್ತಾನದ ಆರ್ಥಿಕತೆಗೆ ಭಾರೀ ಪೆಟ್ಟು ನೀಡಿದ್ದು, ಜೀವನಾವಶ್ಯಕ ವಸ್ತುಗಳ ಕೊರತೆಯುಂಟಾಗುವ ಸಾಧ್ಯತೆಯಿದೆ. ಭಾರತ ಅತ್ಯಂತ ಎಚ್ಚರಿಕೆ ಹಾಗೂ ಜಾಣೆಯಿಂದ ರಾಜತಾಂತ್ರಿಕ ನಿಲುವುಗಳನ್ನು ಅನುಸರಿಸುತ್ತಿದ್ದು, ಹಂತಹಂತವಾಗಿ ಪಾಕಿಸ್ತಾನದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.
ಒಂದು ವೇಳೆ ಭಾರತದಿಂದ ಪ್ರತೀಕಾರದ ದಾಳಿ ನಡೆದರೆ ನಾವು ನಮ ದೇಶವನ್ನು ಸಮರ್ಥಿಸಿಕೊಳ್ಳಲು ಮಿಲಿಟರಿಯ ಸಂಪೂರ್ಣ ಬಲ, ಅಣುಬಾಂಬ್ ಹಾಗೂ ಜನಸಾಮಾನ್ಯರ ಸಾಮರ್ಥ್ಯವನ್ನು ಬಳಸಿಕೊಳ್ಳುವುದಾಗಿ ಪಾಕಿಸ್ತಾನದ ಸಚಿವ ಹೇಳುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.
ಭಾರತ ಎಲ್ಲವನ್ನೂ ಕಾದು ನೋಡುತ್ತಿದ್ದು, ಹಂತಹಂತವಾಗಿ ಪ್ರತ್ಯುತ್ತರ ನೀಡಲಾರಂಭಿಸಿದೆ.ಪಹಲ್ಗಾಮ್ ದಾಳಿಯ ಬಳಿಕ ಗಡಿಯಲ್ಲಿ ಅಪ್ರಚೋದಿತ ಗುಂಡಿನ ಚಕಮಕಿ ಸಂಭವಿಸುತ್ತಲೇ ಇದೆ. ಜಮು-ಕಾಶೀರ ಭಾಗದ ಕುಪ್ವಾರ, ಬಾರಮುಲ್ಲಾ, ಪೂಂಚ್, ರಚೌರಿ, ಮೆಹಂದಾರ್, ನೌಶೇರ, ಸುಂದೇರ್ಭಾನ್ವಿ, ಆಖ್ನೂರ್ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿಯಾಗುತ್ತಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ಪಾಕಿಸ್ತಾನ ಬ್ಯಾಲೆಸ್ಟಿಕ್ ಮಿಸ್ಸೇಲ್ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದಕ್ಕೆ ಕಿಡಿಕಾರಿರುವ ಭಾರತ ಪ್ರತಿಯಾಗಿ 450 ಕಿ.ಮೀ. ಅಂತರದ ಅಬ್ದಾಲಿ ಮೇಲೈ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆಗೊಳಪಡಿಸಿದೆ.