Tuesday, May 6, 2025
Homeಬೆಂಗಳೂರುಪ್ರಕರಣದ ಇತ್ಯರ್ಥಕ್ಕೆ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್‌, ಸಬ್‌ಇನ್ಸ್ ಪೆಕ್ಟರ್‌ ಲೋಕಾಯುಕ್ತ ಬಲೆಗೆ

ಪ್ರಕರಣದ ಇತ್ಯರ್ಥಕ್ಕೆ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್‌, ಸಬ್‌ಇನ್ಸ್ ಪೆಕ್ಟರ್‌ ಲೋಕಾಯುಕ್ತ ಬಲೆಗೆ

Inspector, Sub-Inspector caught in Lokayukta trap

ಬೆಂಗಳೂರು,ಮೇ.6-ಪ್ರಕರಣವೊಂದರ ಇತ್ಯಾರ್ಥಕ್ಕಾಗಿ ಲಂಚ ಪಡೆಯುತ್ತಿದ್ದ ಕೆಜಿ ನಗರ ಪೊಲೀಸ್‌‍ ಠಾಣೆ ಇನ್ಸ್ ಪೆಕ್ಟರ್‌ ಹಾಗೂ ಸಬ್‌ ಇನ್ಸ್ ಪೆಕ್ಟರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್ಸ್ ಪೆಕ್ಟರ್‌ ಶಿವಾಜಿ ರಾವ್‌ ಹಾಗೂ ಪಿಎಸ್‌‍ಐ ಶಿವಾನಂದ ಅವರು ಒಂದು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಡಿವೈಎಸ್‌‍ಪಿ ಗಿರೀಶ್‌ ಅವರ ತಂಡಕ್ಕೆ ಸಿಕ್ಕಿಬಿದ್ದಾರೆ.

ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಸಂಬಂಧಿಸಿದಂತೆ ಆರೋಪಿತ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಲು ಇವರು ಒಟ್ಟು 6ಲಕ್ಷ ರೂ.ಗಳ ಲಂಚ ಕೇಳಿದ್ದು, ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು.

ಗಿರೀಶ್‌ ಅವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್‌ ಗಳಾದ ಆನಂದ್‌, ಶಿವಕುಮಾರ್‌ ಅವರ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳು ಒಂದು ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಲಂಚದ ಹಣ ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News