Thursday, May 8, 2025
Homeರಾಷ್ಟ್ರೀಯ | Nationalಗುಡುಗು ಸಹಿತ ಮಳೆ : ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವು

ಗುಡುಗು ಸಹಿತ ಮಳೆ : ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವು

UP Thunderstorm Deaths: 2 Killed as Tree Falls on Moving Car in Sultanpur

ಸುಲ್ತಾನಪುರ, ಮೇ 8-ಗುಡುಗು ಸಹಿತ ಮಳೆಯ ಸಮಯದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಲಕ್ಷ್ಮೀ-ಬಲ್ಲಿಯಾ ಹೆದ್ದಾರಿಯ ರಾಂಪುರ ಪ್ರದೇಶದ ಧಾಬಾ ಬಳಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದ್ದು, ಬಿರುಗಾಳಿಯಿಂದಾಗಿ ಮರ ಬಿದ್ದು ಆ ಪ್ರದೇಶದಲ್ಲಿ ಹಾದುಹೋಗುತ್ತಿದ್ದ ಕಾರು ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರನ್ನು ಚಲಾಯಿಸುತ್ತಿದ್ದ ಜಿತೇಂದ್ರ ವರ್ಮಾ (42) ಮತ್ತು ಜೊತೆಗಿದ್ದ ಓಂ ಪ್ರಕಾಶ್ ವರ್ಮಾ (45) ಸ್ಥಳದಲ್ಲೇ ಸಾವನ್ನಪ್ಪಿದರು. ಸ್ಥಳಕ್ಕೆ ಧಾವಿಸಿ ಬುಲ್ಲೋಜ‌ರ್ ಸಹಾಯದಿಂದ ಮರವನ್ನು ತೆಗೆಯಲಾಗಿದೆ.ಶವಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News