ಬೆಂಗಳೂರು, ಮೇ 13- ಕೆಲಸ ನೀಡಿದ ಮಾಲೀಕರ ನಂಬಿಕೆಗೆ ದ್ರೋಹ ಬಗೆದು 1.51 ಕೋಟಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದ ಕಾರು ಚಾಲಕನನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆಂಧ್ರಪ್ರದೇಶ ಮೂಲದ ರಾಜೇಶ್ (45) ಬಂಧಿತ ಕಾರು ಚಾಲಕ.
ಈತನಿಂದ 1,48,36,500 ರೂ. ನಗದು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಕೋದಂಡರಾಯಪುರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ರೊಬ್ಬರು ಆಫೀಸ್ ಇಟ್ಟುಕೊಂಡಿದ್ದಾರೆ. ಇವರ ಬಳಿ 10 ವರ್ಷಗಳಿಂದ ರಾಜೇಶ್ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಮಾಲೀಕರ ನಂಬಿಕೆಗಳಿಸಿದ್ದನು.
ಇತ್ತೀಚೆಗೆ ತಮ ಗ್ರಾಹಕರ ಟ್ಯಾಕ್್ಸ ತುಂಬುವ ಸಲುವಾಗಿ 1.51 ಕೋಟಿ ಹಣವನ್ನು ಬ್ಯಾಂಕಿಗೆ ಸಂದಾಯ ಮಾಡುವ ಸಲುವಾಗಿ ಕಾರಿನಲ್ಲಿಡಲು ಚಾಲಕನಿಗೆ ನೀಡಿದ್ದರು.ಆದರೆ ಕಾರು ಚಾಲಕನು ಹಣವನ್ನು ಕಾರಿನಲ್ಲಿಡದೇ, ತನ್ನ ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಪರಾರಿಯಾಗಿದ್ದನು. ನಂತರ ಹಣವನ್ನು ಕೋದಂಡರಾಮಪುರದಲ್ಲಿರುವ ತನ್ನ ಮನೆಯಲ್ಲಿಟ್ಟು 2 ಲಕ್ಷ ಹಣವನ್ನು ಮಾತ್ರ ತೆಗೆದುಕೊಂಡು ಪತ್ನಿಯೊಂದಿಗೆ ವಿವಿಧ ದೇವಾಲಯಗಳ ದರ್ಶನಕ್ಕೆ ಪ್ರವಾಸಕ್ಕೆ ಹೋಗಿದ್ದಾನೆ.
ಚಾರ್ಟೆಡ್ ಅಕೌಂಟೆಂಟ್ ಬ್ಯಾಂಕಿನ ಬಳಿ ಹೋಗಿ ಹಣ ನೋಡಿಕೊಂಡಾಗ ಕಾರಿನಲ್ಲಿ ಹಣ ಇರಲಿಲ್ಲ. ತಮ ಕಾರು ಚಾಲಕನನ್ನು ದೂರವಾಣಿ ಮೂಲಕ ಸಂಪರ್ಕಿಸಿದರಾದರೂ ಅದು ಸಾಧ್ಯವಾಗದಿದ್ದಾಗ ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಕಾರು ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾರು ಚಾಲಕನು ಠಾಣೆಗೆ ಹಾಜರಾಗಿದ್ದು ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಹಣ ಕಳುವು ಮಾಡಿರುವುದಾಗಿ ಹೇಳಿದ್ದಾನೆ. ಕಳುವು ಮಾಡಿದ್ದ ಹಣವನ್ನು ಟಿ.ಟಿ.ಡಿ ದೇವಸ್ಥಾನದ ಬಳಿ ಇರುವ ತನ್ನ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದಾನೆ.
ಈತನ ಮಾಹಿತಿಯಂತೆ ಪೊಲೀಸರು ಆತನ ಮನೆಗೆ ತೆರಳಿ ಪರಿಶೀಲಿಸಿ 1.48 ಕೋಟಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್ ಶಂಕರಗೌಡ ಬಸನಗೌಡರ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.ಆಂಧ್ರಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು ನೆಮದಿ ಜೀವನ ನಡೆಸಲು ಈ ಹಣವನ್ನು ತೆಗೆದುಕೊಂಡು ಬಂದಿದ್ದಾಗಿ ವಿಚಾರಣೆ ವೇಳೆ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.