Wednesday, May 21, 2025
Homeರಾಷ್ಟ್ರೀಯ | Nationalಮತ್ತೆ ಶುರುವಾಯ್ತಾ ಕೊರೋನಾ ಕೇಡುಗಾಲ..? ಮುಂಬೈನಲ್ಲಿ ಇಬ್ಬರ ಸಾವು, ಸರ್ಕಾರ ಅಲರ್ಟ್

ಮತ್ತೆ ಶುರುವಾಯ್ತಾ ಕೊರೋನಾ ಕೇಡುಗಾಲ..? ಮುಂಬೈನಲ್ಲಿ ಇಬ್ಬರ ಸಾವು, ಸರ್ಕಾರ ಅಲರ್ಟ್

Two Covid-19 patients, including a minor, die of comorbidities at Mumbai's KEM hospital

ನವದೆಹಲಿ,ಮೇ20- ಮೂರು ವರ್ಷಗಳ ಹಿಂದೆ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳನ್ನು ಬೆಚ್ಚಿ ಬೀಳಿಸಿದ್ದ ಮಹಾಮಾರಿ ಕೋವಿಡ್ – 19 ಮತ್ತೊಮ್ಮೆ ತಲೆ ಎತ್ತಿದೆ.
ಮುಂಬೈನ ಕಿಂಗ್ ಎಡ್ವರ್ಡ್ ಮೆಮೊರಿಯಲ್ (ಎಇಒ) ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ಎರಡು ಕೋವಿಡ್ ಸಂಬಂಧಿತ ಸಾವು ಪ್ರಕರಣಗಳು ವರದಿಯಾಗಿದೆ. ಕೊರೋನಾದಿಂದಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಎಚ್ಚರಿಕೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದ್ದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮೃತರಲ್ಲಿ ಒಬ್ಬ 14 ವರ್ಷದ ಬಾಲಕನಾಗಿದ್ದು, ನೆಪ್ರೋಟಿಕ್ ಸಿಂಡೋಮ್‌ನಿಂದ ಉಂಟಾದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಮತ್ತೊಬ್ಬ ವ್ಯಕ್ತಿ 54 ವರ್ಷದ ಕ್ಯಾನ್ಸರ್ ರೋಗಿಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಈ ಇಬ್ಬರ ಸಾವಿಗೂ ಕೋವಿಡ್ ಮಾತ್ರ ಕಾರಣವಾಗಿಲ್ಲ. ಇತರ ಆರೋಗ್ಯ ಸಮಸ್ಯೆಗಳ ಜೊತೆಗೆ ಸಂಬಂಧಿಸಿದ್ದಾಗಿವೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಹೆಚ್ಚಳದ ಕುರಿತು ಬ್ರಿಹನ್ ಮುಂಬೈ ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಆತಂಕದ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಈ ವರ್ಷದ ಮೇ ತಿಂಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಖ್ಯಾತ ನಟಿ ಶಿಲ್ಪಾ ಶಿರೋಡ್ಕರ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಕೋವಿಡ್ -19 ಅಲೆಯು ಏಷ್ಯಾದ ದೇಶಗಳಾದ ಚೀನಾ, ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್‌ಗೆ ಅಪ್ಪಳಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದು ವಿಶ್ವಾದ್ಯಂತ ಆತಂಕ ಹೆಚ್ಚಿಸಿದೆ.

ಈಗಾಗಲೇ ಏಷ್ಯಾದ ದೇಶಗಳಾದ ಸಿಂಗಾಪುರ, ಹಾಂಗ್‌ಕಾಂಗ್ ಮತ್ತು ಥೈಲ್ಯಾಂಡ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಈ ಮಧ್ಯೆ, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್ -ಪಾಸಿಟಿವ್ ರೋಗಿಗಳು ಸಾವನ್ನಪ್ಪಿದ್ದಾರೆ. ಕೋವಿಡ್ -19 ರೋಗಿಗಳಲ್ಲಿ ಈ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ವೇಗವಾಗಿ ಬೆಳೆಯುತ್ತಿರುವ ಓಮಿಕ್ರಾನ್‌ನ ಹೊಸ ರೂಪಾಂತರ, ಜೆಎನ್1 ಮತ್ತು ಎಲ್‌.ಎಪ್ 7 ರೂಪಾಂತರಗಳಿವೆ ಎಂದು ವರದಿಯಾಗಿದೆ.
ಸಿಂಗಾಪುರದಲ್ಲಿ, ಈ ಸೋಂಕಿನಿಂದ ಸೋಂಕಿತ ರೋಗಿಗಳ ಸಂಖ್ಯೆ 2025 ರ ಮೇ ಆರಂಭದ ವೇಳೆಗೆ 14,000 ಕ್ಕಿಂತ ಹೆಚ್ಚಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ, ಈ ಸಂಖ್ಯೆ 11,100 ಆಗಿತ್ತು.

ಏಷ್ಯಾದ ದೇಶಗಳಲ್ಲಿ ಕೊರೊನಾದಿಂದ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ರೋಗಿಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಪ್ರಸ್ತುತ ತಳಿಗಳು ಹಿಂದಿನವುಗಳಿಗಿಂತ ಹೆಚ್ಚು ಸಾಂಕ್ರಾಮಿಕ ಅಥವಾ ತೀವ್ರವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಹೆಚ್ಚಳಕ್ಕೆ ಕಾರಣ ಜನರ ರೋಗನಿರೋಧಕ ಶಕ್ತಿ ಕಡಿಮೆಯಾಗಿರಬಹುದು. ಪ್ರಸ್ತುತ ಪ್ರಮುಖ ರೂಪಾಂತರಗಳು ಎಲ್ ಎಪ್ 7 ಮತ್ತು ಎನ್‌ಬಿ1.8 ಆಗಿದ್ದು, ಇವು ಜೆಎನ್ 1ರ ಉಪವಿಭಾಗಗಳಾಗಿವೆ.

ಜೆನ್ 1 ತಳಿ ಎಂದರೇನು?:
ಜೆಎನ್1 ಆಗಸ್ಟ್ 2023ರಲ್ಲಿ ಗುರುತಿಸಲಾದ ಓಮಿಕ್ರಾನ್ ಬಿ 2.86ರ ವಂಶಸ್ಥರು, ಡಿಸೆಂಬರ್ 2023ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಆಸಕ್ತಿಯ ರೂಪಾಂತರ ಎಂದು ವರ್ಗೀಕರಿಸಿತ್ತು. ಈ ತಳಿಯು ಸುಮಾರು 30 ರೂಪಾಂತರಗಳನ್ನು ಹೊಂದಿದ್ದು, ಅವು ರೋಗನಿರೋಧಕ ವ್ಯವಸ್ಥೆಯನ್ನು ತಪ್ಪಿಸಲು ವಿಕಸನಗೊಂಡಿವೆ. ಆ ಸಮಯದಲ್ಲಿ ಯಾವುದೇ ಇತರ ತಳಿಗಳಿಗಿಂತ ಹೆಚ್ಚು, ಅದಾಗ್ಯೂ, 2023 ರ ಅಂತ್ಯದ ವೇಳೆಗೆ ಬಿ.ಎ.2.86 ಸಾರಸ್ ಕೋವಿಡ್ ಜೆಎನ್ 2 ನ ಪ್ರಬಲ ತಳಿಯಾಗಿ ಹೊರಹೊಮ್ಮಲಿಲ್ಲ. ಬಿಎ 2.86ರ ವಂಶಸ್ಥರಾದ ಜೆಎನ್ ಈಗ ಒಂದು ಅಥವಾ ಎರಡು ಹೆಚ್ಚುವರಿ ರೂಪಾಂತ ಆದರೂ, ಅದು ತನ್ನ ಪೂರ್ವಜರಂತೆಯೇ ರೋಗನಿರೋಧಕ ಶಕ್ತಿಯನ್ನು ತಪ್ಪಿಸಿಕೊಳ್ಳುವ ಲಕ್ಷಣ ಉಳಿಸಿಕೊಂಡಿದೆ.

ಜಾನ್ಸ್ ಹಾಪ್ಟಿನ್ ವಿಶ್ವವಿದ್ಯಾಲಯವು ಜೆಎನ್ ಈಗ ಹೆಚ್ಚು ಪರಿಣಾಮಕಾರಿಯಾಗಿ ಹರಡಲು ವಿಕಸನಗೊಂಡಿದೆ ಎಂದು ಹೇಳುತ್ತದೆ. ಸಿಂಗಾಪುರದ ಒಳಚರಂಡಿಯಲ್ಲೂ ಕೋವಿಡ್ -19 ವೈರಸ್ ಕಂಡುಬಂದಿದೆ. ಆದಾಗ್ಯೂ ಈ ಹೊಸ ರೂಪಾಂತರವು ಹಿಂದಿನದಕ್ಕಿಂತ ವೇಗವಾಗಿ ಹರಡುತ್ತಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಪ್ರಸ್ತುತ ಕೋವಿಡ್ -19 ಲಸಿಕೆಗಳು ಜೆಎನ್. ತಳಿಯ ಮೇಲೆ ಕಾರ್ಯನಿರ್ವಹಿಸುತ್ತವೆಯೇ? ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಜೆಎನ್.1 ರೂಪಾಂತರವನ್ನು ತಟಸ್ಥಗೊಳಿಸುವುದು ಕಷ್ಟ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಜೀವಂತ ವೈರಸ್ಕಳು ಮತ್ತು ಪ್ರಯೋಗಾಲಯದಲ್ಲಿ ನಿರ್ಮಿತ ಹುಸಿ ವೈರಸ್ಥಳ ಮೇಲಿನ ಸಂಶೋಧನೆಯು ಲಸಿಕೆ ಅಥವಾ ಹಿಂದಿನ ಸೋಂಕಿನಿಂದ ಪಡೆದ ಪ್ರತಿಕಾಯಗಳು ಜೆಎನ್.1 ಅನ್ನು ಹಿಂದಿನ ತಳಿಗಳಿಗಿಂತ ಕಡಿಮೆ ಪರಿಣಾಮಕಾರಿಯಾಗಿ ನಿರ್ಬಂಧಿಸುತ್ತವೆ ಎಂದು ಕಂಡುಹಿಡಿದಿದೆ.

ಇದರರ್ಥ ಜೆಎನ್.1 ದೇಹದ ಅಸ್ತಿತ್ವದಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಭಾಗಶಃ ತಪ್ಪಿಸಬಹುದು.ಜೆಎನ್ 1.5 ಮೊನೊವೆಲೆಂಟ್ ಬೂಸ್ಟರ್, ಇದು ಓಮಿಕ್ರಾನ್‌ನ ಎಕ್ಸ್‌ ಬಿಬಿ .1.5 ಉಪವಿಭಾಗವನ್ನು ಗುರಿಯಾಗಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಎಕ್ಸ್ ಬಿಬಿ -19 ಲಸಿಕೆಯಾಗಿದ್ದು, ಬಹು ಅಧ್ಯಯನಗಳಲ್ಲಿ ಜೆಎನ್ 1 ರೂಪಾಂತರದ ವಿರುದ್ಧ ರಕ್ಷಣೆ ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಕಂಡುಬಂದಿದೆ. |

RELATED ARTICLES

Latest News