Tuesday, June 17, 2025
Homeರಾಜ್ಯBREAKING : 2025-26ನೇ ಸಾಲಿನ KCET ಪರೀಕ್ಷೆ ಫಲಿತಾಂಶ ಪ್ರಕಟ

BREAKING : 2025-26ನೇ ಸಾಲಿನ KCET ಪರೀಕ್ಷೆ ಫಲಿತಾಂಶ ಪ್ರಕಟ

KCET Exam Results Announced

ಬೆಂಗಳೂರು,ಮೇ 24- ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ -2025-26ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್ ಕೋರ್ಸ್‌ಗೆ 2,62,195 ರ್ಯಾಂಕಿಂಗ್ ಪ್ರಕಟಿಸಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇಂದು ಕೆಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು.

ಬ್ಯಾಚುಲ‌ರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ (ಬಿಎನ್‌ವೈಎಸ್)ಗೆ 1,98,679, ಬಿಎಸ್ಪಿ ಆಗ್ರಿ ಕಲ್ವುರಲ್‌ಗೆ 2,14,588, ಬಿವಿಎಸ್‌ಸಿಗೆ 2,18,282, ಬಿ ಫಾರ್ಮಗೆ 2,66,256, ಫಾರ್ಮ ಡಿಗೆ 2,66,757, ಬಿಎಸ್‌ಸಿ ನರ್ಸಿಂಗ್‌ಗೆ 2,08,171 ರ್ಯಾಂಕಿಂಗ್ ಘೋಷಿಸಲಾಗಿದೆ ಎಂದರು.

ಸಿಇಟಿ ಪರೀಕ್ಷೆಗೆ 3.30 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 3,11,991 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಭೌತಶಾಸ್ತ್ರಕ್ಕೆ 3,11,691, ರಸಾಯನಶಾಸ್ತ್ರಕ್ಕೆ 3,11,760) ಗಣಿತಕ್ಕೆ 3.04,170, ಜೀವಶಾಸ್ತ್ರಕ್ಕೆ 2,39,459 ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ವಿವರಿಸಿದರು.

ಈ ಬಾರಿ ಪರೀಕ್ಷಾ ವ್ಯವಸ್ಥೆಗಳಲ್ಲಿ ಸಾಕಷ್ಟು ಸುಧಾರಣೆ ತರಲಾಗಿತ್ತು. ಮೊಬೈಲ್ ಆ್ಯಪ್‌ನಲ್ಲೇ ಮುಖ ಗುರುತಿಸುವ ವ್ಯವಸ್ಥೆ ಅಳವಡಿಸಿದ್ದರಿಂದ ಬದಲಿ ವ್ಯಕ್ತಿಗಳು ಪರೀಕ್ಷೆ ಬರೆಯಲು ಅವಕಾಶವಿರಲಿಲ್ಲ ಮತ್ತು ಜಿಲ್ಲಾ ಕೇಂದ್ರಗಳಿಂದಲೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿತ್ತು ಎಂದು ಹೇಳಿದರು.

ಭೌತಶಾಸ್ತ್ರಕ್ಕೆ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದೆ. ರಸಾಯನಶಾಸ್ತ್ರದಲ್ಲಿ ಎರಡು ಪ್ರಶ್ನೆಗೆ ಎರಡು ಸರಿ ಉತ್ತರಗಳನ್ನು ಹಾಗೂ ಜೀವಶಾಸ್ತ್ರದಲ್ಲಿ ಒಂದು ಪ್ರಶ್ನೆಗೆ ಎರಡು ಸರಿ ಉತ್ತರಗಳು ಎಂದು ತಜ್ಞರು ಸಲಹೆ ನೀಡಿದ್ದು, ಅದನ್ನು ಮೌಲ್ಯ ಮಾಪನದಲ್ಲಿ ಅಳವಡಿಸಿಕೊಳ್ಳಲಾಗಿದೆ.
11,67,086 ಓಎಂಆರ್ ಶೀಟ್‌ಗಳನ್ನು ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎಲ್ಲಾ ಓಎಂಆರ್ ಶೀಟ್‌ ಗಳು ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಖುದ್ದು ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಪರೀಕ್ಷೆ ಫಲಿತಾಂಶ ಪ್ರಕಟಕ್ಕೂ ಮುನ್ನವೇ ನಾವು ಆನ್‌ಲೈನ್‌ನಲ್ಲಿ ದಾಖಲೆಗಳ ಪರಿಶೀಲನೆಯನ್ನು ಪೂರ್ಣಗೊಳಿಸಿದ್ದೇವೆ. ಸ್ಯಾಟ್ ಹಾಗೂ ಆರ್‌ಡಿ ದಾಖಲೆಗಳ ಪರಿಶೀಲನೆ ಮುಗಿದಿದೆ. ಅದರಲ್ಲೂ ಪಿಯುಸಿ ಕಾಲೇಜುಗಳಲ್ಲೇ ದಾಖಲಾತಿಗಳನ್ನು ಪರಿಶೀಲಿಸುವ ಸರಳ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಸಹಾಯವಾಣಿಯ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದವು. ಅದನ್ನು ಮೇಲ್ದರ್ಜೆಗೇರಿಸಲಾಗಿದೆ. ಐದರ ಬದಲು ಹತ್ತು ಸಿಸ್ಟಮ್ಗಳನ್ನು ಅಳವಡಿಸಲಾಗಿದೆ. ಬೆಳಿಗ್ಗೆ 5 ರಿಂದ ರಾತ್ರಿ 8 ಗಂಟೆವರೆಗೂ ಯಾವುದೇ ರಜೆಯಿಲ್ಲದೆ ವಾರಪೂರ್ತಿ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಮೊದಲ ಬ್ಯಾಂಕ್‌ನ ವಿದ್ಯಾರ್ಥಿಗಳನ್ನು ಪ್ರಕಟಿಸುವಾಗ ಒಂದಿಷ್ಟು ಗೊಂದಲವಾಗಿತ್ತು. ಅರ್ಹತಾ ಪರೀಕ್ಷೆ ಮತ್ತು ಪಿಯುಸಿ ಪಿಸಿಎಂ ಪರೀಕ್ಷೆಗಳ ಅಂಕಗಳನ್ನು ಸಮೀಕರಿಸುವಾಗಗೊಂದಲವಾಗಿದ್ದರಿಂದ ಮೊದಲ ರ್ಯಾಂಕ್ ಬಂದ ವಿದ್ಯಾರ್ಥಿ ಹೆಸರು ಪ್ರಕಟಿಸುವಾಗ ಗೊಂದಲವಾಗಿತ್ತು. ಅಧಿಕಾರಿಗಳು ಕೆಲ ಸಮಯದ ನಂತರ ಸ್ಪಷ್ಟನೆ ಕೊಡಿಸಿದರು. ಭವೇಶ್ ಜಯಂತಿ ಮೊದಲ ರ್ಯಾಂಕ್ ಪಡೆದಿದ್ದಾರೆ ಎಂದು ಸಚಿವರು ಪ್ರಕಟಿಸಿದರು.

ವಿವಿಧ ವಿಭಾಗದ ರ್ಯಾಂಕ್‌ ವಿಜೇತ ವಿದ್ಯಾರ್ಥಿಗಳು
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ವಿದ್ಯಾರ್ಥಿ(ಬಾಲಕರು)ಗಳೇ ಮೇಲುಗೈ ಸಾಧಿಸಿದ್ದಾರೆ.
ಎಂಜಿನಿಯರ್‌ ಸೇರಿದಂತೆ ಬಹುತೇಕ ವಿಭಾಗಗಳಲ್ಲಿ ಬಾಲಕರೇ ಮೊದಲ 5 ರ್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ಎಂಜಿನಿಯರಿಂಗ್‌
ಮಾರತಹಳ್ಳಿ ಚೈತನ್ಯ ಟೆಕ್ನೋ ಶಾಲೆಯ ಭವೇಶ್‌ ಜಯಂತಿ (ಶೇ.99.06) ಪ್ರಥಮ, ಉತ್ತರಹಳ್ಳಿ ಚೈತನ್ಯ ಟೆಕ್ನೋ ಶಾಲೆಯ ಸಾತ್ವಿಕ್‌ .ಬಿ ಬಿರಾದರ್‌ (ಶೇ.98.83) ದ್ವಿತೀಯ, ಮಾರತಹಳ್ಳಿ ಚೈತನ್ಯ ಟೆಕ್ನೋ ಶಾಲೆಯ ದಿನೇಶ್‌ ಗೋಮತಿ ಶಂಕರ್‌ ಅರುಣಾಚಲಂ (ಶೇ.98.67) ತೃತೀಯ, ಮಂಗಳೂರಿನ ಎಕ್ಸಲೆಂಟ್‌ ಪಿಯು ಕಾಲೇಜಿನ ಶಿಸಿರ್‌.ಎಚ್‌ ಶೆಟ್ಟಿ (ಶೇ.98.61) 4ನೇ ಹಾಗೂ ವೈಟ್‌ಫೀಲ್ಡ್ ನಾರಾಯಣ ಇ-ಟೆಕ್ನೋ ಶಾಲೆಯ ದಿವೇಶ ಅಗರ್‌ವಾಲ್‌ (ಶೇ.98.56) 5ನೇ ರ್ಯಾಂಕ್‌ ಪಡೆದ್ದಿರೆ.

ಬಿಎನ್‌ವೈಎಸ್‌‍
ಯಲಹಂಕದ ನಾರಾಯಣ ಇ-ಟೆಕ್ನೋ ಶಾಲೆಯ ಹರೀಶ್‌ ರಾಜ್‌.ಡಿ.ವಿ (ಶೇ.99.39) ಪ್ರಥಮ, ಎಚ್‌ಎಸ್‌‍ಆರ್‌ ಲೇಔಟ್‌ನ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಆತ್ರೇಯ ವೆಂಕಟಾಚಲಂ (ಶೇ.99.39) ದ್ವಿತೀಯ, ಮಂಗಳೂರಿನ ಎಕ್‌್ಸಪರ್ಟ್‌ ಕಾಲೇಜಿನ ಸಫಲ್‌.ಎಸ್‌‍ ಶೆಟ್ಟಿ (ಶೇ.99.28) ತೃತೀಯ ಹಾಗೂ ನುತಾನ್‌ ಕೃಷ್ಣ ಭೈರವೇಶ್‌.ಡಿ (ಶೇ.98.94) 4ನೇ ಹಾಗೂ ಬೆಂಗಳೂರಿನ ನಾರಾಯಣ ಕಾಲೇಜಿನ ಮನೀಶ್‌.ಎಚ್‌ (ಶೇ.98.83)

ಕೃಷಿ
ಮೂಡಬಿದರೆಯ ಆಳ್ವಾಸ್‌‍ ಪದವಿಪೂರ್ವ ಕಾಲೇಜಿನ ಅಕ್ಷಯ್‌ .ಎಂ ಹೆಗ್ಡೆ(ಶೇ.98.08) ಪ್ರಥಮ, ಮಂಗಳೂರಿನ ಎಕ್ಸ್ ಪರ್ಟ್‌ ಕಾಲೇಜಿನ ಸಾಯಿಶರಣ್‌ ಪಂಡಿತ್‌ (ಶೇ.97.92) ದ್ವೀತಿಯ, ಸುಚಿತ್‌.ಪಿ ಪ್ರಸಾದ್‌ (ಶೇ.97.92) ತೃತೀಯ, ಉಡುಪಿಯ ಕ್ರಿಯೇಟಿವ್‌ ಕಾಲೇಜಿನ ಸುಮಂತ ಗೌಡ.ಎಸ್‌‍, ದಾನಪ್ಪ ಗೌಡ.ಆರ್‌ (ಶೇ.97.58) ನಾಲ್ಕನೇ ಹಾಗೂ ಎಕ್‌್ಸಪರ್ಟ್‌ ಕಾಲೇಜಿನ ವಿದ್ಯಾರ್ಥಿನಿ ಸ್ನೇಹ.ಐ ಎರಗಾನವಿ 5ನೇ ರ್ಯಾಂಕ್‌ ಪಡೆದಿದ್ದಾರೆ.

ಅಗ್ರಿಕಲ್ಚರ್‌
ತುಮಕೂರಿನ ಶಾರದಾಂಬ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕೀರ್ತನ.ಎಂ.ಎಲ್‌ ಪ್ರಥಮ, ಕಲ್ಯಾಣ್‌ ನಗರದ ಎಚ್‌ಎಂಆರ್‌ ನ್ಯಾಷನಲ್‌ ಪದವಿಪೂರ್ವ ಕಾಲೇಜಿನ ರಕ್ಷಿತಾ.ವಿ.ಪಿ ದ್ವಿತೀಯ, ವಿಜಯಪುರದ ಎಕ್ಸಲೆನ್ಸ್ ಸೈನ್ಸ್ ಕಾಲೇಜಿನ ಅಶ್ವಿನಿ ಎಕ್ಕುಂಡಿ ತೃತೀಯ, ಹಾವೇರಿ ಕಣ್ಣೂರು ವಿದ್ಯಾನಿಕೇತನ್‌ ಕಾಲೇಜಿನ ನವ್ಯಾ ಕೊಟೆಣ್ಣವರ್‌ 4ನೇ ಹಾಗೂ ಬಿಜಾಪುರದ ಎಕ್ಸಲೆಂಟ್‌ ವಿಜ್ಞಾನ ಕಾಲೇಜಿನ ಕಾವ್ಯ ಶಿವಾಜಿ ಶಿಂಧೆ ಅವರು 5ನೇ ರ್ಯಾಂಕ್‌ ಪಡೆದಿದ್ದಾರೆ.

ನರ್ಸಿಂಗ್‌
ಯಲಹಂಕದ ನಾರಾಯಣ ಇ-ಟೆಕ್ನೋ ಶಾಲೆಯ ಹರೀಶ್‌ರಾಜು.ಡಿ.ವಿ ಮೊದಲ ರ್ಯಾಂಕ್‌, ಎಚ್‌ಎಸ್‌‍ಆರ್‌ ಲೇಔಟ್‌ನ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಆತ್ರೇಯ ವೆಂಕಟಾಚಲಂ ದ್ವಿತೀಯ, ಮಂಗಳೂರಿನ ಎಕ್‌್ಸಪರ್ಟ್‌ ಕಾಲೇಜಿನ ಸಫಲ್‌.ಎಸ್‌‍ ಶೆಟ್ಟಿ ತೃತೀಯ, ಕೂಡ್ಲುವಿನ ನಾರಾಯಣ ಟೆಕ್ನೋ ಶಾಲೆ ವಿಶ್ವಾರಾಧ್ಯ ರಾಮಣ್ಣ ಗೌಡರ್‌ 4ನೇ ಹಾಗೂ ಕೆಆರ್‌ಪುರಂನ ಚೈತನ್ಯ ಟೆಕ್ನೋ ಶಾಲೆ ತೇಜಸ್‌‍ ಶೈಲೇಶ್‌ ಗೋಟಾಲ್ಕರ್‌ 5ನೇ ಸ್ಥಾನ ಪಡೆದಿದ್ದಾರೆ.

ಪಶುವೈದ್ಯಕೀಯ
ಯಲಹಂಕದ ನಾರಾಯಣ ಇ-ಟೆಕ್ನೋ ಶಾಲೆಯ ಹರೀಶ್‌ರಾಜ್‌.ಡಿ.ವಿ ಪ್ರಥಮ, ಎಚ್‌ಎಸ್‌‍ಆರ್‌ ಲೌಟ್‌ನ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಅತ್ರೇಯ ವೆಂಕಟಾಚಲಂ ದ್ವಿತೀಯ, ಮಂಗಳೂರಿನ ಎಕ್‌್ಸಪರ್ಟ್‌ ಕಾಲೇಜಿನ ಸಫಲ್‌.ಎಸ್‌‍ ಶೆಟ್ಟಿ ತೃತೀಯ, ಕೂಡ್ಲುವಿನ ಚೈಟನ್ಯ ಟೆಕ್ನೋ ಶಾಲೆಯ್ಯ ವಿಶ್ವಾರಾಧ್ಯ ರಾಮಣ್ಣ ಗೌಡರ್‌ 4ನೇ ಹಾಗೂ ಕೆಆರ್‌ಪುರಂನ ಚೈತನ್ಯ ಟೆಕ್ನೋ ಶಾಲೆಯ ತೇಜಸ್‌‍ ಶೈಲೇಶ್‌ ಗೋಟಾಲ್ಕರ್‌ 5ನೇ ಸ್ಥಾನ ಪಡೆದಿದ್ದಾರೆ.

ವೆಟನರಿ ಪ್ರಾಕ್ಟಿಕಲ್‌
ಕಲ್ಯಾಣನಗರದ ಎಚ್‌ಎಂಆರ್‌ ನ್ಯಾಷನಲ್‌ ಕಾಲೇಜಿನ ರಕ್ಷಿತಾ.ವಿ.ಪಿ ಪ್ರಥಮ, ಚಿಂತಾಮಣಿ ಆರ್‌.ಕೆ.ವಿಷನ್‌ನ ನಂದನ್‌.ಟಿ.ಎಸ್‌‍ ದ್ವಿತೀಯ, ರಾಯಚೂರಿನ ಉಮಾಮಹೇಶ್ವರಿ ಕಾಲೇಜಿನ ಭುವನೇಶ್ವರಿ ತೃತೀಯ, ತುಮಕೂರಿನ ಶಾರದಾಂಬ ಕಾಲೇಜಿನ ಕೀರ್ತನ.ಎಂ.ಎಲ್‌ 4ನೇ ಹಾಗೂ ದಾವಣಗೆರೆಯ ಡಾ.ಟಿ.ಎಫ್‌ ಬಾಲಕರ ಕಾಲೇಜಿನ ಕಾರ್ತಿಕ್‌ ಶಂಕರಪ್ಪ,ಬಿಲಿಮಗ್ಗದ್‌ ಅವರು 5ನೇ ರ್ಯಾಂಕ್‌ ಪಡೆದಿದ್ದಾರೆ.

RELATED ARTICLES

Latest News