Friday, June 6, 2025
Homeಬೆಂಗಳೂರುನೇಪಾಳಿಗಳನ್ನು ಮನೆ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಹುಷಾರ್‌..!

ನೇಪಾಳಿಗಳನ್ನು ಮನೆ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಹುಷಾರ್‌..!

Be careful before hiring Nepalis for housework

ಬೆಂಗಳೂರು, ಜೂ. 2– ಕುಲ-ಗೋತ್ರ, ಗೊತ್ತು ಗುರಿ ಇಲ್ಲದೆ ಸಿಕ್ಕ ಸಿಕ್ಕವರನ್ನು ಮನೆಗೆಲಸಕ್ಕೆ ಸೇರಿಸಿಕೊಂಡರೆ ಏನಾಗುತ್ತದೆ ಎಂಬುವುದಕ್ಕೆ ರಾಜಕೀಯ ಮುಖಂಡ ರಮೇಶ್‌ ಅವರ ಮನೆಯಲ್ಲಿ ನಡೆದಿರುವ ಕಳ್ಳತನವೇ ಸಾಕ್ಷಿ.

ಪರಿಚಯಸ್ಥರೊಬ್ಬರು ನೇಪಾಳಿ ಮೂಲದ ದಂಪತಿಯನ್ನು ರಮೇಶ್‌ ಅವರ ಮನೆಯಲ್ಲಿ ಕೆಲಸ ಮಾಡಲು ಕರೆ ತಂದಿದ್ದಾರೆ. ಆದರೆ ರಮೇಶ್‌ ಅವರು ಅವರ ಪೂರ್ವಾಪರ ತಿಳಿದುಕೊಳ್ಳದೇ ಅವರ ಬಗ್ಗೆ ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳದೆ ಯಾರದೋ ಮೇಲಿನ ನಂಬಿಕೆಯಿಂದ ದಂಪತಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರಿಂದ ಅವರೇ ಮನೆ ದೋಚಿ ಪರಾರಿಯಾಗಿದ್ದಾರೆ.

ಸೆಕ್ಯೂರಿಟಿಗಾರ್ಡ್‌ ಕೆಲಸಕ್ಕೆ ಸೇರಿಕೊಳ್ಳುವಾಗ ನೇಪಾಳಿ ತನ್ನ ಹಾಗೂ ನಿಜವಾದ ಹೆಸರನ್ನು ಹೇಳದೆ ತಪ್ಪಾಗಿ ಹೇಳಿದ್ದಾನೆ. ಆತನ ಊರಿನ ಬಗ್ಗೆಯಾಗಲಿ, ಗುರುತಿನ ಚೀಟಿಯಾಗಲಿ, ಮೊಬೈಲ್‌ ನಂಬರ್‌ ಪಡೆದುಕೊಳ್ಳದೇ ಇದ್ದುದರಿಂದಲೇ ಸಲೀಸಾಗಿ ಹಣ, ಆಭರಣ ಕಳ್ಳತನ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ನಗರದಲ್ಲಿ ಮನೆಗೆಲಸದವರಿಂದಲೇ ನಡೆಯುತ್ತಿರುವ ಮನೆಗಳ್ಳತನದ ಬಗ್ಗೆ ನಗರ ಪೊಲೀಸ್‌‍ ಆಯುಕ್ತ ದಯಾನಂದ ಅವರು ಪ್ರತಿ ಮಂಗಳವಾರ, ಶುಕ್ರವಾರ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಪದೇ ಪದೇ ಸಾರ್ವಜನಿಕರಿಗೆ ಎಚ್ಚರಿಸುತ್ತಲೇ ಇರುತ್ತಾರೆ. ಆದರೆ ತಿಳಿದವರು, ಬುದ್ಧಿವಂತರು, ರಾಜಕಾರಣಿಗಳು ಅವರ ಸಲಹೆಗಳನ್ನು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಮನೆ ಗೆಲಸದವರಿಂದಲೇ ಮನೆ ಕಳ್ಳತನಗಳು ನಡೆಯುತ್ತಿರುವುದು ಬೇಜವಾಬ್ದಾರಿತನಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ಘಟನೆ ಹಿನ್ನಲೆ: ಹೆಚ್‌ಎಎಲ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯ ಎಲ್‌ಬಿ ಶಾಸ್ತ್ರಿನಗರದಲ್ಲಿ ವಾಸವಿರುವ ರಾಜಕೀಯ ಮುಖಂಡರಾದ ರಮೇಶ್‌ ಎಂಬುವರ ಮನೆಯಲ್ಲಿ ಮೂರು ತಿಂಗಳಿಂದ ನೇಪಾಳಿ ಮೂಲದ ರಾಜು ದಂಪತಿ ಕೆಲಸ ಮಾಡಿಕೊಂಡು ಔಟ್‌ಹೌಸ್‌‍ನಲ್ಲಿ ಉಳಿದುಕೊಳ್ಳುತ್ತಿದ್ದರು.

ಮೇ 27ರಂದು ರಮೇಶ್‌ ಅವರು ಕುಟುಂಬ ಸಮೇತ ತಿರುಪತಿಗೆ ಹೋಗಿದ್ದರು. ಆ ವೇಳೆ ಈ ದಂಪತಿ ಸಂಬಂಧಿಕರನ್ನು ಕರೆಸಿಕೊಂಡು ಮನೆಯ ಬಾಗಿಲು ಒಡೆದು ಒಳನುಗ್ಗಿ ಬೆಡ್‌ರೂಮ್‌ಗೆ ಹೋಗಿ ಲಾಕರ್‌ ಮೀಟಿ ಅದರಲ್ಲಿದ್ದ 10 ಲಕ್ಷ ಹಣ ಸೇರಿದಂತೆ 1.70 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಅತ್ತ ತಿರುಪತಿಗೆ ಹೋಗಿದ್ದ ರಮೇಶ್‌ ಅವರು ತಮ ಮೊಬೈಲ್‌ನಲ್ಲೇ ಮನೆಯ ಬಗ್ಗೆ ನೋಡಲು ಯತ್ನಿಸಿದಾಗ ಸಿಸಿಟಿವಿ ಕನೆಕ್ಟ್‌ ಆಗಿಲ್ಲ. ಕರೆಂಟ್‌ ಹೋಗಿರಬಹುದೆಂದು ಸುಮನಾಗಿದ್ದಾರೆ. ಕೆಲ ಸಮಯದ ಬಳಿಕ ಮತ್ತೆ ನೋಡಲು ಯತ್ನಿಸಿದಾಗ ಆಗಲೂ ಸಿಸಿಟಿವಿಯ ದೃಶ್ಯಾವಳಿ ಮೊಬೈಲ್‌ನಲ್ಲಿ ಕಾಣಿಸಿಲ್ಲ.

ತಕ್ಷಣ ಅನುಮಾನಗೊಂಡು ಪಕ್ಕದ ಮನೆಯವರಿಗೆ ಕರೆ ಮಾಡಿ ತಮ ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದಾರೆ. ಅವರು ಹೋಗಿ ನೋಡಿ ಔಟ್‌ಹೌಸ್‌‍ನಲ್ಲಿ ಸೆಕ್ಯೂರಿಟಿಗಾರ್ಡ್‌ ದಂಪತಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

ತಕ್ಷಣ ಅವರು ಸಂಬಂಧಿಕರಿಗೆ ಮನೆ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಅವರು ಹೋಗಿ ನೋಡಿದಾಗ ಮನೆ ಬಾಗಿಲು ತೆರೆದುಕೊಂಡಿರುವುದು ಕಂಡು ಬಂದಿದೆ. ಕಳ್ಳತನವಾಗಿದೆ ಎಂದು ರಮೇಶ್‌ ಅವರಿಗೆ ಮಾಹಿತಿ ನೀಡಿದ್ದಾರೆ. ತಿರುಪತಿಯಿಂದ ವಾಪಾಸ್‌‍ ಬಂದ ರಮೇಶ್‌ ಅವರು ಹೆಚ್‌ಎಎಲ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಲಸಕ್ಕೆ ಇದ್ದ ಸೆಕ್ಯೂರಿಟಿಗಾರ್ಡ್‌ ದಂಪತಿ ಬಗ್ಗೆ ವಿಚಾರಿಸಿದಾಗ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೆಚ್‌ಎಎಲ್‌ ಠಾಣೆ ಪೊಲೀಸರು ಘಟನಾಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಆರು ತಂಡ ರಚನೆ: ಹಣ ಆಭರಣ ದೋಚಿ ಪರಾರಿಯಾಗಿರುವ ನೇಪಾಳಿಗಳ ಬಂಧನಕ್ಕಾಗಿ ವೈಟ್‌ಫೀಲ್‌್ಡ ವಿಭಾಗದ ಡಿಸಿಪಿ ಅವರು ಆರು ತಂಡಗಳನ್ನು ರಚಿಸಿದ್ದಾರೆ. ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

RELATED ARTICLES

Latest News