ಬೆಂಗಳೂರು,ಜೂ.5- ಗೃಹಸಚಿವ ಡಾ.ಜಿ.ಪರ ಮೇಶ್ವರ್ ಕಾಲ್ತುಳಿತ ಸಂಭವಿಸಿದ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪ್ರತಿಯೊಂದು ಗೇಟ್ಗಳನ್ನು ಖುದ್ದು ಪರಿಶೀಲನೆ ನಡೆಸಿದರು. ಕ್ರೀಡಾಂಗಣದ ಗೇಟ್ಗಳ ಮುಂದೆ ಕಾಲ್ತುಳಿತವಾದಾಗ ಆತಂಕಗೊಳಗಾದ ಜನ ಬಿಟ್ಟು ಹೋದ ಚಪ್ಪಲಿಗಳ ರಾಶಿ ಕಂಡು ಸಚಿವರು ಆಶ್ಚರ್ಯಚಕಿತರಾದರು. ಅಭಿಮಾನಿಗಳಿಂದ ಹಾನಿಗೊಳಗಾದ ಗೇಟ್ ಅನ್ನು ಖುದ್ದು ಅಲುಗಾಡಿಸಿ ಪರಿಶೀಲಿಸಿದರು.
ಸ್ಥಳೀಯ ಪೊಲೀಸ್ ಇನ್್ಸಪೆಕ್ಟರ್ ಜೊತೆ ಸಮಾಲೋಚನೆ ನಡೆಸಿ ಮಾಹಿತಿ ಕಲೆ ಹಾಕಿದರು. ಪ್ರತಿಯೊಂದು ಗೇಟ್ಗೂ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಜೊತೆ ಭೇಟಿ ನೀಡಿದ ಗೃಹಸಚಿವರು, ಎಲ್ಲೆಲ್ಲಿ, ಯಾವ ರೀತಿಯ ಘಟನೆಗಳಾದವು, ಉಚಿತ ಟಿಕೆಟ್ ಘೋಷಣೆ ಮಾಡಿದ ಸಮಯ ಏನು, ಅಲ್ಲಿಂದ ದುರಂತ ನಡೆದ ಗೇಟ್ಗೆ ಇರುವ ಅಂತರವೆಷ್ಟು ಎಂಬೆಲ್ಲಾ ಮಾಹಿತಿಗಳನ್ನು ಪರಿಶೀಲಿಸಿದರು.
ಗೇಟ್ಗಳ ಬಳಿ ಕಾವಲಿಗೆ ನಿಂತಿದ್ದ ಅಧಿಕಾರಿಗಳ್ಯಾರು?, ಯಾವ ರೀತಿ ದುರಂತ ಸಂಭವಿಸಿತು? ಎಂಬ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.ಎತ್ತರದ ಗೇಟ್ಗಳನ್ನು ಜನ ಹತ್ತಿ ಬಂದಿದ್ದಾರೂ ಹೇಗೆ?, ಆ ವೇಳೆ ಪೊಲೀಸರು ಸ್ಥಳದಲ್ಲಿರಲಿಲ್ಲವೇ? ಎಂಬ ಪ್ರಶ್ನೆಗಳನ್ನು ಗೃಹಸಚಿವರು ಕೇಳಿದ್ದಾರೆ.
ಕ್ರೀಡಾಂಗಣದ ಒಳಗೂ ಭೇಟಿ ನೀಡಿ ಆಸನದ ವ್ಯವಸ್ಥೆಗಳು, ಜನಸಂಖ್ಯೆ ಎಷ್ಟಿತ್ತು ಎಂಬೆಲ್ಲಾ ವಿಚಾರಗಳನ್ನು ತಿಳಿದುಕೊಂಡಿದ್ದಾರೆ.ಸ್ಥಳ ಪರಿಶೀಲನೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕರ್ನಾಟಕ ಕ್ರಿಕೆಟ್ ಮಂಡಳಿ ಹಾಗೂ ರಾಯಲ್ ಚಾಲೆಂಜರ್ರಸ ತಂಡದ ಪ್ರಾಂಚಸಿಯ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ ವಿವರಣೆ ಪಡೆದುಕೊಂಡಿದ್ದಾರೆ.ನಿನ್ನೆ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಗೃಹಸಚಿವರು ಮತ್ತು ಮುಖ್ಯಮಂತ್ರಿ ಕಾರ್ಯಕ್ರಮದಿಂದ ದೂರ ಇದ್ದರು.