ಬೆಂಗಳೂರು, ಜೂ.6- ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ದುರಂತದ ಹಿನ್ನೆಲೆಯಲ್ಲಿ ಅಮಾನತು ಮಾಡಬೇಕಾಗಿದ್ದು, ಪ್ರತಿದಿನ ಬೆಂಗಳೂರು ನಗರವನ್ನು ರಕ್ಷಿಸುವ ಪೋಲಿಸ್ ರನ್ನಲ್ಲ, ಯೋಜನೆ ನಿರುಪಿಸುವಲ್ಲಿ ವಿಫಲರಾದ ನಿಮ ಸರ್ಕಾರದ ಸಚಿವರನ್ನ ಸಚಿವ ಸಂಪುಟದಿಂದ ಅಮಾನತುಗೊಳಿಸಬೇಕಿತ್ತು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರ ವಿಜಯೋತ್ಸವಕ್ಕೆ ಅನುಮತಿ ನೀಡಿತ್ತು. ಮುಖ್ಯಮಂತ್ರಿ ಜನರನ್ನು ಆಹ್ವಾನಿಸಿದರು. ಈ ಕಾರ್ಯಕ್ರಮವನ್ನು ಡಿಪಿಎಆರ್ ಇಲಾಖೆಯಿಂದ ಆಯೋಜಿಸಲಾಗಿತ್ತು. ಈ ದುರ್ಘಟನೆಯ ಜವಾಬ್ದಾರಿಯನ್ನು ತಮ ಮೇಲೆ ಹೊರಿಸಿಕೊಳ್ಳುವ ಬದಲು ಬಾಕಿ ಎಲ್ಲಾ ಕಡೆ ಬೆರಳು ತೋರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರತಿಯೊಂದು ಐಪಿಎಲ್ ಪಂದ್ಯವನ್ನು ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಿದ ಬೆಂಗಳೂರು ನಗರ ಪೊಲೀಸರು ಈಗ ಬಲಿಪಶುವೇ? ನಿಜವಾಗಿಯೂ? ಎಂದು ಹೇಳಿದ್ದಾರೆ.
ಡಿಸಿಎಂ ರೀಲ್ಸ್ಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾಗ, ಸಚಿವರು ತಮ ಪುತ್ರರು, ಪುತ್ರಿಯರು ಮತ್ತು ಮೊಮಕ್ಕಳನ್ನು ಸಹ ಆರ್ಸಿಬಿ ಆಟಗಾರರೊಂದಿಗೆ ವಿಐಪಿ ಸೆಲ್ಫಿಗಾಗಿ ಕರೆದೊಯ್ಯುತ್ತಿದ್ದರು. ಜನಸಂದಣಿ ನಿಯಂತ್ರಣ ಅವರ ಗಮನದಲ್ಲಿಯೂ ಇರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನೀವು ಜವಾಬ್ದಾರಿಯ ಬಗ್ಗೆ ಗಂಭೀರವಾಗಿದ್ದರೇ, ನಿಮ ಪಕ್ಕದಲ್ಲಿ ಕುಳಿತಿರುವ ಗೃಹ ಸಚಿವರು ಮತ್ತು ರೀಲ್ಸ್ ಸಚಿವರನ್ನು ಮೊದಲು ಈ ಘಟನೆಗೆ ಜವಾಬ್ದಾರಿ ಮಾಡಬೇಕಿತ್ತು ಎಂದು ಅವರು ಆಗ್ರಹಿಸಿದ್ದಾರೆ.