Sunday, June 8, 2025
Homeರಾಜ್ಯಸಿದ್ದರಾಮಯ್ಯ-ಶಿವಕುಮಾರ್‌ ಬಂಧನ ಯಾಕಿಲ್ಲ..? : ಜೆಡಿಎಸ್‌‍

ಸಿದ್ದರಾಮಯ್ಯ-ಶಿವಕುಮಾರ್‌ ಬಂಧನ ಯಾಕಿಲ್ಲ..? : ಜೆಡಿಎಸ್‌‍

Why were Siddaramaiah-Shivakumar not arrested?

ಬೆಂಗಳೂರು, ಜೂ.7- ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ದುರಂತವು ಕಾಂಗ್ರೆಸ್‌‍ ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಆರೋಪಿಸಿರುವ ಜೆಡಿಎಸ್‌‍ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಂಧನ ಯಾಕಿಲ್ಲ? ಎಂದು ಪ್ರಶ್ನಿಸಿದೆ.

ಈ ಸಂಬಂಧ ತನ್ನ ಎಕ್‌್ಸ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌‍, ಆರ್‌ಸಿಬಿ ವಿಜಯೋತ್ಸವದಲ್ಲಿ ಪ್ರಚಾರ ಪಡೆಯಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವಿನ ಪೈಪೋಟಿಯೇ ಈ ಮಹಾದುರಂತಕ್ಕೆ ಕಾರಣ ಎಂದು ಆರೋಪಿಸಿದೆ.

ವಿಧಾನಸೌಧದ ಮುಂಭಾಗ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮುಖ್ಯ ಅತಿಥಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಮುಖ್ಯ ಅತಿಥಿ. ಇವರಿಬ್ಬರ ರಾಜಕೀಯ ಪ್ರತಿಷ್ಠೆ. ನಾನೇ ಎಂಬ ಅಹಂಗೆ ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡಿದ್ದಾಗಿದೆ ಎಂದು ಹೇಳಿದೆ.

ಕಾಲ್ತುಳಿತ ದುರಂತದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಾಂಗ್ರೆಸ್‌‍ ಸರ್ಕಾರ ಆರ್‌ಸಿಬಿ ಮತ್ತು ಕೆಎಸ್‌‍ಸಿಎ ವಿರುದ್ಧ ದೂರು ದಾಖಲಿಸಿದೆ ಎಂದು ಆರೋಪಿಸಿದೆ. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವೈಫಲ್ಯದ ಬಗ್ಗೆ ಎದ್ದಿರುವ ಜನಾಕ್ರೋಶದ ಗಮನವನ್ನು ಬೇರೆಡೆ ಸೆಳೆಯಲು ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿಯನ್ನೂ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಜೆಡಿಎಸ್‌‍ ಆಪಾದಿಸಿದೆ.

ನಗರದಲ್ಲಿ ಎರಡು ಕಡೆ ಏಕಕಾಲದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಭದ್ರತೆ ಹಾಗೂ ಜನದಟ್ಟಣೆ ನಿಯಂತ್ರಣ ಮಾಡುವುದು ಕಷ್ಟ ಎಂಬ ಪೊಲೀಸರ ಎಚ್ಚರಿಕೆಯ ಮಾತುಗಳನ್ನು ಧಿಕ್ಕರಿಸಿ, ಆರ್‌ಸಿಬಿ ದಿಗ್ವಿಜಯದ ಕ್ರೆಡಿಟ್‌ ಪಡೆಯಲು ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಸಮಾರಂಭ ನಡೆಸಿ 11 ಮುಗ್ಧ ಜೀವಗಳನ್ನು ಬಲಿ ಪಡೆದಿದೆ ಎಂದು ದೂರಿದೆ.

ಕಾಲ್ತುಳಿತ ಮಹಾದುರಂತದ ಬಗ್ಗೆ ದೇಶಾದ್ಯಂತ ಕಾಂಗ್ರೆಸ್‌‍ ಸರ್ಕಾರದ ವೈಫಲ್ಯಗಳು, ಭದ್ರತಾ ಎಡವಟ್ಟುಗಳು ಜಗಜ್ಜಾಹೀರಾಗಿ ಸುದ್ದಿಯಾಗುತ್ತಿದೆ. ಹೊಣೆಗೇಡಿ ಕಾಂಗ್ರೆಸ್‌‍ ಸರ್ಕಾರ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ. ಮತ್ತೊಂದೆೆಡೆ ಕುತಂತ್ರದಿಂದ ವಿರಾಟ್‌ ಕೊಹ್ಲಿ ವಿರುದ್ಧವೂ ದೂರು ನೀಡಲಾಗಿದೆ ಎಂದು ಆರೋಪಿಸಿದೆ.

RELATED ARTICLES

Latest News