Sunday, June 8, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಕಾಲ್ತುಳಿತದಲ್ಲಿ ಎದೆ ಎತ್ತರಕ್ಕೆ ಬೆಳೆದ ಮಗನ ಸಾವು, ಸಮಾಧಿ ಬಳಿ ಗೋಳಾಡಿ ಅತ್ತ ತಂದೆ

ಕಾಲ್ತುಳಿತದಲ್ಲಿ ಎದೆ ಎತ್ತರಕ್ಕೆ ಬೆಳೆದ ಮಗನ ಸಾವು, ಸಮಾಧಿ ಬಳಿ ಗೋಳಾಡಿ ಅತ್ತ ತಂದೆ

Father cries at grave after son's death in stampede

ಬೇಲೂರು, ಜೂ.8: ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನ ಸಾವೀಗಿಡಾಗಿದ್ದು, ಮೃತ ಕುಟುಂಬ ಸದಸ್ಯರ ಗೋಳು ಹೇಳತೀರಾದಾಗಿದೆ.

ತಾಲ್ಲೂಕಿನ ಕುಪ್ಪಗೋಡುಗ್ರಾಮದ ಲಕ್ಷ್ಮಣ್, ತನ್ನ ಮಗ ಭೂಮಿಕ್‌ಸಮಾಧಿ ಮುಂದೆ ಗೋಳಾಡುತ್ತಿರುವ ದೃಶ್ಯ ಮನಕಲಕುವಂತಿದೆ.ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಸಾಕಷ್ಟು ಸಂಪಾದನೆ ಮಾಡಿದೊಡ್ಡ ಮಟ್ಟಕ್ಕೆ ಬಂದಿದ್ದ ಲಕ್ಷ್ಮಣ್ ಗನಿಗಾಗಿ ಸಾಕಷ್ಟು ಕನಸುಕಂಡಿದ್ದರು, ಮಗನೂ ಕೂಡ ಎಂದೂ ತಂದೆ ಮಾತಿಗೆ ವಿರುದ್ದವಾಗಿ ಮಾತನಾಡದೆ, ತಂದೆಯ ಮಾರ್ಗದರ್ಶನದಂತೆ ನಡೆಯುತ್ತಿದ್ದ.

2ನೇ ವರ್ಷದ ಇಂಜಿನಿಯರಿಗ್ ಓದುತ್ತಿದ್ದ ಭೂಮಿಕ್, ಜೂ. 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ತಂಡದ ಆಟಗಾರರ ಸಂಭ್ರಮಾಚರಣೆ ನೋಡಲುಸ್ನೇಹಿತರೊಂದಿಗೆ ತೆರಳಿದ್ದ ಆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ ಭೂಮಿಕ್‌ಸಾವನ್ನಪ್ಪಿದ್ದಾನೆ. ಈ ಕ್ಷಣದವರೆಗೂ ಇದ್ದಒಬ್ಬನೇಮಗ ಈಗಇಲ್ಲದನ್ನುನೆನೆದುಕಣ್ಣೀ ರಿಡುತ್ತಿರುವಭೂಮಿಕ್‌ತಂದೆ-ತಾಯಿ, ಮಗನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ನಿತ್ಯ ಕಣ್ಣೀರುಡುತ್ತಿದ್ದಾರೆ. ತಮ್ಮ ತೋಟದಲ್ಲಿರುವ ಮಗನ ಸಮಾಧಿಯ ಮೇಲೆಬಿದ್ದು ಹೊರಳಾಡುತ್ತಿರುವ ದೃಶ್ಯ ಕರಳು ಹಿಂಡುವಂತಿದೆ.

ಈ ಪರಿಸ್ಥಿತಿ ಯಾವ ತಂದೆಗೂ ಬರಬಾರದು ಎಂದು ಗೋಳಾಡಿದ್ದಾರೆ. ಎಂತಹ ತಂದೆ-ತಾಯಿಗೂ ಇಂತಹ ಸ್ಥಿತಿ ಬರಬಾರದು.ನಮ್ಮತೋಟದಲ್ಲೆ ಮಗನನನ್ನು ಮಲಗಿಸಿದ್ದೇನೆ. ನನ್ನ ಮಗನಿಗಾಗಿಯೇ ಈ ಜಾಗವನ್ನು ಮಾಡಿದ್ದರಿಂದ ಇಲ್ಲಿಯೇ ಮಲಗಿಸಿದ್ದೇನೆ. ನಾನೂ ಇಲ್ಲಿಯೇ ಮಲಗುತ್ತೇನೆ. ಅವನಿಲ್ಲದೆ ನಾನು ಹೇಗೆ ಇರಲಿ ಎಂದು ಸಮಾ ಮೇಲೆಯೇ ಹೊರಳಾಡಿದ್ದಾರೆ.ಇನ್ನೂ ಬಾಳಿ ಬದುಕ ಬೇಕಿದ್ದ ಭೂಮಿಕ್‌ನನ್ನು ನೆನೆದುಅವರತಂದೆತಾಯಿ ಮತ್ತು ಕುಟುಂಬದವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.

ಮೃತ ಭೂಮಿಕ್‌ತಂದೆ ಲಕ್ಷ್ಮಣ್, ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭ ಬಿಕ್ಕಿ ಬಿಕ್ಕಿ ಅಳುತ್ತಲೇ ನಾನು ಏನನ್ನು ಮಾತನಾಡಲಿ. ಮಾತನಾಡಲು ಏನೂ ಉಳಿದಿಲ್ಲ. ಒಂದು ಕಾರ್ಯಕ್ರಮ ವ್ಯವಸ್ಥೆ ಮಾಡಲು ಸಾಧ್ಯವಾಗದ ಸರ್ಕಾರಕ್ಕೆ ಸತ್ಕಾರಕೂಟ ಬೇಕಿತ್ತಾ? ಆಟಗಾರರೊಂದಿಗೆ ತಮ್ಮ ಮಕ್ಕಳು ಮೊಮ್ಮಕ್ಕಳ ಫೋಟೋ ತೆಗೆಸಿಕೊಳ್ಳುವುದಕೆ ಸ್ಕರ ಮಂತ್ರಿಗಳು ನಮ್ಮ ಮಕ್ಕಳನ್ನು ಬಲಿ ಕೊಟ್ಟರು.ಮಕ್ಕಳ ಸಾವಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಇತರರು ಕಾರಣರಾಗಿದ್ದಾರೆಯೇ ಹೊರತು ಪೊಲೀಸರಲ್ಲ ಎಂದುತಮ್ಮ ಅಳಲು ತೋಡಿಕೊಂಡರು.

RELATED ARTICLES

Latest News