ಶಿಲ್ಲಾಂಗ್, ಜೂ.13- ಬೇರೊಬ್ಬ ಮಹಿಳೆಯನ್ನು ಕೊಲೆ ಮಾಡಿ ಆಕೆಯನ್ನು ಸೋನಮ್ ಎಂದು ನಂಬಿಸಲು ಕೊಲೆಗಾರರು ಸಂಚು ರೂಪಿಸಿದ್ದರು ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿಯ ಕೊಲೆಗಾರರು ಅನಾಮಿಕ ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಸುಟ್ಟು ರಘುವಂಶಿ ಪತ್ನಿ ಸೋನಮ್ ಅವರ ಶವ ಎಂದು ಬಿಂಬಿಸುವ ಯೋಜನೆಯನ್ನು ಹೊಂದಿದ್ದರು ಎನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಹೀಗಾಗಿಯೇ ಸೋನಮ್ ಕೆಲ ದಿನಗಳ ಕಾಲ ತಲೆಮರೆಸಿಕೊಳ್ಳಲು ಮುಂದಾಗಿದ್ದರು ಎಂದು ಮೇಘಾಲಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋನಮ್ ಅವರ ಶಂಕಿತ ಗೆಳೆಯ ರಾಜ್ ಕುಶ್ವಾಹ ಕೊಲೆ ಸಂಚಿನ ಮುಖ್ಯ ರೂವಾರಿ ಮತ್ತು ಆಕೆ ಸಹ-ಸಂಚುಕೋರ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ರಾಜಾ ರಘುವಂಶಿಯ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ರಾಜ್ ಮತ್ತು ಇತರ ಮೂವರ ವಿಚಾರಣೆಯ ಮೊದಲ ದಿನದಂದು, ಸೋನಮ್ ಮೇಘಾಲಯದಿಂದ ಬುರ್ಖಾ ಧರಿಸಿ ಪರಾರಿಯಾಗಿ ಟ್ಯಾಕ್ಸಿ, ಬಸ್ ಮತ್ತು ರೈಲಿನಂತಹ ವಿವಿಧ ಸಾರಿಗೆ ವಿಧಾನಗಳನ್ನು ಬಳಸಿಕೊಂಡು ಮಧ್ಯಪ್ರದೇಶ ನಗರವನ್ನು ತಲುಪಿದ್ದಾಳೆ ಎಂದು ಬಹಿರಂಗಪಡಿಸಿದ್ದಾರೆ.
ರಾಜಾನನ್ನು ಕೊಲ್ಲುವ ಸಂಚು ಮೇ 11 ರಂದು ಸೋನಮ್ ಜೊತೆಗಿನ ಅವನ ವಿವಾಹಕ್ಕೆ ಸ್ವಲ್ಪ ಮೊದಲು ಇಂದೋರ್ನಲ್ಲಿ ರೂಪಿಸಲಾಗಿತ್ತು, ಮತ್ತು ಮಾಸ್ಟರ್ ಮೈಂಡ್ ರಾಜ್ ಆಗಿದ್ದನು ಮತ್ತು ಮಹಿಳೆ ಈ ಸಂಚಿಗೆ ಒಪ್ಪಿಕೊಂಡಿದ್ದಳು ಎಂದು ಪೂರ್ವ ಖಾಸಿ ಹಿಲ್್ಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಮ್ ಪಿಟಿಐಗೆ ತಿಳಿಸಿದ್ದಾರೆ. ಮದುವೆಯ ಕೆಲವು ದಿನಗಳ ನಂತರ, ರಾಜಾ (29) ಮತ್ತು ಸೋನಮ್ (24) ಮೇಘಾಲಯದ ಪೂರ್ವ ಖಾಸಿ ಹಿಲ್್ಸ ಜಿಲ್ಲೆಯ ಸುಂದರವಾದ ಸೊಹ್ರಾಕ್ಕೆ ಬಂದು ಮೇ 23 ರಂದು ನಾಪತ್ತೆಯಾಗಿದ್ದರು.