ಚಂಡೀಗಡ,ಜೂ.17-ಹರಿಯಾಣದ ಕಾಲುವೆಯೊಂದರಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಮಾಡೆಲ್ ಒಬ್ಬಳ ಮೃತದೇಹ ಪತ್ತೆಯಾಗಿದ ಒಂದು ದಿನದ ನಂತರ, ಇಬ್ಬರು ಮಕ್ಕಳಿರುವ ವಿವಾಹಿತ ವ್ಯಕ್ತಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಸುನಿಲ್ ಮತ್ತು ಮಾಡೆಲ್ ಶೀತಲ್ ಚೌಧರಿ ನಡುವೆ ಶನಿವಾರ ರಾತ್ರಿ ಜಗಳ ನಡೆದಿದ್ದು, ಅದು ದೈಹಿಕ ಕಿರುಕುಳಕ್ಕೆ ತಿರುಗಿ, ಸುನಿಲ್ ಆಕೆಯನ್ನು ಹಲವಾರು ಬಾರಿ ಹೊಡೆದು, ಇರಿದು, ನಂತರ ಆಕೆಯ ದೇಹವನ್ನು ಕಾಲುವೆಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಣಿಪತ್ನ ಆಸ್ಪತ್ರೆಯಲ್ಲಿ ಸುನಿಲ್ ಪತ್ತೆಯಾಗಿದ್ದು, ಅಲ್ಲಿ ಸಿಮಿ ಎಂದೂ ಕರೆಯಲ್ಪಡುವ ಶೀತಲ್ಳನ್ನು ಕೊಂದಿದ್ದಾಗಿ ಅವನು ಒಪ್ಪಿಕೊಂಡಿದ್ದಾನೆ. ಆದರೆ ಇದಕ್ಕೂ ಮೊದಲು, ಕೊಲೆಯನ್ನು ಕಾರು ಅಪಘಾತ ಎಂದು ಬಿಂಬಿಸಲು ಅವನು ಪ್ರಯತ್ನಿಸಿದ್ದ. ಶೀತಲ್ ಆಲ್ಬಮ್ ಚಿತ್ರೆಕರಣಕ್ಕಾಗಿ ಪಾಣಿಪತ್ನ ಅಹರ್ ಗ್ರಾಮಕ್ಕೆ ಬಂದಿದ್ದರು. ರಾತ್ರಿ 10.30 ಕ್ಕೆ ಸುನಿಲ್ ತನ್ನ ಗೆಳತಿಯನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು. ಬಳಿಕ ಆಕೆಯನ್ನು ತನ್ನ ಕಾರಿನ ಬಳಿಗೆ ಕರೆದೊಯ್ದನು, ಅಲ್ಲಿ ಅವರು ಒಂದೆರಡು ಬಾರಿ ಮದ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ. ನಂತರ ಜಗಳ ಪ್ರಾರಂಭವಾಗಿದೆ.
ಬೆಳಗಿನ ಜಾವ 1.30 ರ ಸುಮಾರಿಗೆ ಶೀತಲ್ ಪಾಣಿಪತ್ನಲ್ಲಿರುವ ತನ್ನ ಸಹೋದರಿ ನೇಹಾಗೆ ವಿಡಿಯೋ ಕರೆ ಮಾಡಿ ಸುನಿಲ್ ತನ್ನನ್ನು ಹೊಡೆಯುತ್ತಿದ್ದಾನೆಂದು ತಿಳಿಸಿದಳು. ಸ್ವಲ್ಪ ಸಮಯದ ನಂತರ, ನೇಹಾಳ ೇನ್ ಸ್ವಿಚ್ ಆ್ ಆಗಿದ್ದರಿಂದ ಅವಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಸುನಿಲ್ ಶೀತಲ್ ಳನ್ನು ಕೊಂದು, ಕಾರನ್ನು ಶೀತಲ್ ದೇಹದ ಜೊತೆಗೆ ಕಾಲುವೆಗೆ ಎಸೆದಿದ್ದಾನೆ. ಜೂನ್ 15 – ಪೊಲೀಸರು ಕಾಲುವೆಯಲ್ಲಿ ಕಾರನ್ನು ಪತ್ತೆ ಮಾಡಿದ್ದರು.
ಹರಿಯಾಣ ಪೊಲೀಸರು ಭಾನುವಾರ ಪಾಣಿಪತ್ ಬಳಿಯ ಕಾಲುವೆಯಲ್ಲಿ ಸುನಿಲ್ ಅವರ ಕಾರನ್ನು ಪತ್ತೆ ಮಾಡಿದ್ದರೂ ಆದರೆ ಶೀತಲ್ ಪತ್ತೆಯಾಗಿರಲಿಲ್ಲ. ಏತನಧ್ಯೆ, ಸುನಿಲ್ ಆಸ್ಪತ್ರೆಗೆ ತಲುಪಿ ತನ್ನ ಕಾರು ಕಾಲುವೆಗೆ ಬಿದ್ದಿದೆ ಎಂದು ಹೇಳಿಕೊಂಡನು. ಶೀತಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರೂ, ಈಜುವಲ್ಲಿ ಯಶಸ್ವಿಯಾದನು. ಅವನು ಆಸ್ಪತ್ರೆಗೆ ದಾಖಲಾಗಿದ್ದನು. ಸೋಮವಾರ, ಸೋನಿಪತ್ ಬಳಿಯ ಖಾರ್ಖೋಡಾದ ಕಾಲುವೆಯಿಂದ ಗಂಟಲು ಸೀಳಿದ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡರು. ಶೀತಲ್ ಅವರ ಕೈ ಮತ್ತು ಎದೆಯ ಮೇಲಿನ ಹಚ್ಚೆಗಳಿಂದ ಅವರ ಮೃತದೇಹವನ್ನು ಗುರುತಿಸಲಾಗಿದೆ. ಶೀತಲ್ ಅವರ ದೇಹದ ಮೇಲೆ ಹಲವಾರು ಇರಿತದ ಗುರುತುಗಳು ಸಹ ಪೊಲೀಸರಿಗೆ ಕಂಡುಬಂದಿವೆ.ಪೊಲೀಸರ ಪ್ರಕಾರ, ಶವವು ಪಾಣಿಪತ್ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಖಾರ್ಖೋಡಾಗೆ ತೇಲಿತ್ತು. ತನಿಖೆಯ ನಂತರ, ಸುನಿಲ್ ಶೀತಲ್ ಅವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಬಳಿಕ ಆತನನ್ನು ಬಂಸಲಾಯಿತು. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಶೀತಲ್ ಕರ್ನಾಲ್ನಲ್ಲಿರುವ ಸುನಿಲ್ನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು.ಇಬ್ಬರೂ ಸುಮಾರು ಆರು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು ಎಂದು ವರದಿಯಾಗಿದೆ. ಸುನಿಲ್ ಶೀತಲ್ಗೆ ಮದುವೆಯ ಪ್ರಸ್ತಾಪವನ್ನು ಮಾಡಿದ್ದ; ಆದರೆ, ಅವರು ಇಬ್ಬರು ಮಕ್ಕಳ ತಂದೆ ಎಂದು ತಿಳಿದ ನಂತರ, ಮಾಡೆಲ್ ಆ ಪ್ರಸ್ತಾಪವನ್ನು ತಿರಸ್ಕರಿಸಿದರು. ಹರಿಯಾಣ ಸಂಗೀತ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಶೀತಲ್ ಕೂಡ ವಿವಾಹಿತರಾಗಿದ್ದು, ಐದು ತಿಂಗಳ ಮಗುವನ್ನು ಹೊಂದಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.