ಬೆಂಗಳೂರು, ಜೂ.19- ತ್ವರಿತವಾಗಿ ಮತ್ತು ಕರಾರುವಕ್ತಾಗಿ ಜಾತಿ ಗಣತಿ ನಡೆಯಲು ಅನುಕೂಲವಾಗುವಂತೆ ಎಲ್ಲಾ ಗ್ರಾಪಂ ಅಧಿಕಾರಿ ಸಿಬ್ಬಂಗಳನ್ನು ಬಳಸಿಕೊಳ್ಳಬೇಕೆಂದು ವಿಧಾನ ಪರಿಷತ್ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗ್ರಾಮೀಣ ಅಭಿವೃದ್ಧಿ ಪ್ರಿಯಾಂಕ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜಿನೀಶ್ ಅವರಿಗೆ ಪತ್ರ ಬರೆದಿರುವ ಅವರು ಕರ್ನಾಟಕದ ಜನತೆಯ ಸಾಮಾಜಿಕ-ಶೈಕ್ಷಣಿಕ ಸ್ಥಾನಮಾನಗಳ ಕುರಿತು ಮರು ಸಮೀಕ್ಷೆ ಮಾಡುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ.
ಕರ್ನಾಟಕದಲ್ಲಿ ನಡೆಸಲು ಉದ್ದೇಶಿಸಿರುವ ಸಾಮಾಜಿಕ-ಶೈಕ್ಷಣಿಕ ಗಣತಿಯ ನಿಖರತೆ ಹಾಗೂ ತ್ವರಿತ ಪ್ರಕ್ರಿಯೆಗಾಗಿ ರಾಜ್ಯದ 5950 ಗ್ರಾಮ ಪಂಚಾಯ್ತಿಗಳ 92.000 ಸದಸ್ಯರನ್ನು ಜನರಿಗೆ ಅರಿವು ಮೂಡಿಸಲು ಬಳಸಿಕೊಳ್ಳುವುದು ಮತ್ತು ಗ್ರಾಪಂನ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ಗಳು, ಕಾರ್ಯದರ್ಶಿಗಳು ಹಾಗೂ ಪಿಡಿಒಗಳನ್ನು ಸಮೀಕ್ಷೆಯಲ್ಲಿ ತೊಡಗಿಸಿಕೊಂಡರೇ ತ್ವರಿತವಾಗಿ ಮುಗಿಸಬಹುದೆಂದು ಹೇಳಿದ್ದಾರೆ.
ರಾಜ್ಯದ ಜಾತಿ-ಸಮುದಾಯಗಳ ನಿಜವಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯುವುದು ಈ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಇದರಿಂದ ಮೀಸಲಾತಿ ನೀತಿಗಳನ್ನು ವೈಜ್ಞಾನಿಕವಾಗಿ ಪರಿಷ್ಕರಿಸಲು ಹಾಗೂ ಕಲ್ಯಾಣ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸಹಾಯವಾಗುತ್ತದೆ. ಇದು ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸಲು ಅನುಕೂಲವಾಗುತ್ತದೆ.
ಈಗ ನಿಗದಿತ ಕಾಲಮಾನದಲ್ಲಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು, ರಾಜ್ಯದಲ್ಲಿರುವ 5950 ಗ್ರಾಮ ಪಂಚಾಯಿತಿಗಳ 92.000 ಸದಸ್ಯರನ್ನು ಸಮೀಕ್ಷೆಯ ಕುರಿತು ಜನರಿಗೆ ಅರಿವು ಮೂಡಿಸಲು ಮತ್ತು ಸಹಕಾರ ಒದಗಿಸಲು ಬಳಸಿಕೊಳ್ಳುವುದು ಸೂಕ್ತವಾಗಿದೆ. ಅವರ ಸ್ಥಳೀಯ ಪರಿಚಯ ಮತ್ತು ಪ್ರಭಾವದಿಂದ ಜನರಲ್ಲಿ ಸಮೀಕ್ಷೆಯ ಬಗ್ಗೆ ವಿಶ್ವಾಸ ಹೆಚ್ಚುತ್ತದೆ.
ಈ ಸಿಬ್ಬಂದಿಯು ತಮ್ಮ ಕರ್ತವ್ಯದ ಭಾಗವಾಗಿ ತಮ್ಮ ವ್ಯಾಪ್ತಿಯ ಸುಮಾರು 200ರಿಂದ 500 ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೆ, ಇವರ ಜತೆ ಆಯಾ ವಾರ್ಡ್ ಸದಸ್ಯರೂ ಭೇಟಿ ನೀಡುವಂತೆ ಮಾಡಿದಲ್ಲಿ ಸಮೀಕ್ಷೆಯು ಹೆಚ್ಚು ಪಾರದರ್ಶಕತೆ ಮತ್ತು ನಿಖರ-ವಸ್ತುನಿಷ್ಠ ದತ್ತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ.
ಸಮೀಕ್ಷೆ ಯಾವ ರೀತಿ ಇರಬೇಕು, ಯಾವೆಲ್ಲ ಮಾಹಿತಿಗಳನ್ನು ಸಂಗ್ರಹಿಸಬೇಕು ಮತ್ತು ಹೇಗೆ ಮಾಡಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಈ ಗ್ರಾಪಂ ಸಿಬ್ಬಂದಿಗೆ ಸೂಕ್ತ ತರಬೇತಿಯ ಮೂಲಕ ಸ್ಪಷ್ಟಪಡಿಸಬೇಕು. ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮತ್ತು ಸಮರ್ಪಕವಾಗಿ ಜಾರಿಗೆ ತರುವ ಹೊಣೆಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳಿಗೆ ವಹಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
- ಒಂದೇ ಗಂಟೆಯಲ್ಲಿ ಡಿಸಿಇಟಿ ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟ
- ವಿಮಾನ ನಿಲ್ದಾಣಗಳ ಸುತ್ತಮುತ್ತ ಪ್ರದೇಶಗಳಿಗೆ ಬರಲಿದೆ ಹೊಸ ರೂಲ್ಸ್
- ಅಮೆರಿಕ ಕನ್ನಡ ಒಕ್ಕೂಟಗಳಿಂದ ಕಮಲ್ ಹಾಸನ್ ಚಿತ್ರಗಳಿಗೆ ಬಹಿಷ್ಕಾರ
- ಗೊಂದಲದ ಗೂಡಾದ ಬಿಜೆಪಿ- ಜೆಡಿಎಸ್ ಮೈತ್ರಿ
- ದೊಡ್ಡ ವರ್ಗವನ್ನು ಅಂಚಿನಲ್ಲಿಡುವ ಅಸಮಾನತೆ ಪರಿಹರಿಸದಿರುವ ರಾಷ್ಟ್ರ ಪ್ರಗತಿಪರ ಅಲ್ಲ ; ಸಿಜೆಐ