ಚಿಕ್ಕಬಳ್ಳಾಪುರ, ಜೂ.19- ಕ್ಷೇತ್ರ ಸ್ಥಳೀಯ ಶಾಸಕನ ಡ್ರಾಮಾ ಏನೆಂಬುದು ಕ್ಷೇತ್ರದ ಜನತೆಗೆ ಈಗಾಗಲೇ ಗೊತ್ತಾಗಿದೆ. ಅವರ ಜೊತೆಗಿರುವ ಕಾರ್ಯಕರ್ತರಿಗೂ ಹೈಡ್ರಾಮಾ ಅರ್ಥವಾಗಿದೆ ಎಂದು ಮಾರ್ಮಿಕವಾಗಿ ಪ್ರದೀಪ್ ಈಶ್ವರ್ ವಿರುದ್ಧ ಸಂಸದ ಡಾ. ಕೆ ಸುಧಾಕರ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಇದುವರೆಗೂ ಕ್ಷೇತ್ರದಲ್ಲಿ ಒಬ್ಬರಿಗೆ ಒಂದು ಮನೆ ಕೊಟ್ಟಿಲ್ಲ, ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ ಇವರು ಹೋಗುವ ರಸ್ತೆಗಳೆಲ್ಲ ಗುಂಡಿ ಬಿದ್ದು ಹಾಳಾಗಿವೆ. ಈವರೆವಿಗೂ ಇವರು ಏನು ಕಡೆದು ಕಟ್ಟೆ ಹಾಕಿದ್ದಾರೋ ಸಿಡಿಮಿಡಿಗೊಂಡರು. ಹೋದಬಂದ ಕಡೆಗಳಲ್ಲೆಲ್ಲಾ ಹಾರತುರಾಯಿಗಳನ್ನು ಹಾಕಿಸಿಕೊಳ್ಳುವುದು ಹಾಸಿದ ಚಾಪೆ ಮೇಲೆ ಕುಳಿತುಕೊಳ್ಳುವುದು ಇದೇನಾ ಅವರ ಅಭಿವೃದ್ಧಿ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಬಿಟ್ಟರೆ ಈ ಕ್ಷೇತ್ರದಲ್ಲಿ ಈವರೆಗೂ ಒಂದು ಅಭಿವೃದ್ಧಿಯಾಗಿಲ್ಲ. ಬಯಲುಸೀಮೆ ಜಿಲ್ಲೆಗಳನ್ನು ರಾಜ್ಯ ಸರ್ಕಾರ ಭೂಪಟದಿಂದಲೇ ತೆಗೆದು ಹಾಕಿದಂತಿದೆ. ಕಾಂಗ್ರೆಸ್ ಸರ್ಕಾರ ಬಯಲು ಸೀಮೆಯ ಜಿಲ್ಲೆಗಳನ್ನು ಕಡೆಗಣಿಸಿದೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ನಿರ್ಲಕ್ಷ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎರಡೂವರೆ ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಚ್.ಎನ್ ವ್ಯಾಲಿ 210 ಎಂಎಲ್ಡಿಗೆ ಮೂರನೇ ಹಂತದ ಶುದ್ದೀಕರಣ ಮಾಡಲು ಆಗಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಘೋಷಿಸಿದ್ದರು. ಆದರೆ ಇನ್ನೂ ಅದು ಜಾರಿಯಾಗಿಲ್ಲ ನೂರಹತ್ತರ ಬದಲು 148 ಎಂಎಲ್ಡಿ ನೀರು ಮಾತ್ರ ಬರುವಂತಾಗಿದೆ .ಇನ್ನು ಎಸ್ ಟಿಪಿ ನೀರಿನಿಂದ ಬೆಳೆದ ತರಕಾರಿಯನ್ನೇ ಬೆಂಗಳೂರಿನ ಜನರು ಬಳಸುತ್ತಿದ್ದಾರೆ. ಸುಮಾರು ಎರಡು ಕೋಟಿ ಜನರು ಈ ನೀರನ್ನ ಬಳಸುತ್ತಿದ್ದಾರೆ ಆದ್ದರಿಂದ ಈ ನೀರಿನ ಮೂರನೇ ಹಂತದ ಶುದ್ದೀಕರಣ ಮಾಡಲೇಬೇಕಿದೆ ಎಂದು ಒತ್ತಾಯಿಸಿದರು.
ಕೃಷ್ಣ ಕಾವೇರಿ ತುಂಗಭದ್ರಾದಿಂದ ನೀರು ಸಿಗುವುದಿಲ್ಲ ಎತ್ತಿನಹೊಳೆಯಿಂದ ನೀರು ಬರಲಿದೆ ಎಂದು 12 ವರ್ಷದ ಹಿಂದೆಯೇ ಸಿಎಂ ಸಿದ್ದರಾಮಯ್ಯ ಹೇಳಿದರು ಹಿಂದಿನ ಬಿಜೆಪಿ ಸರ್ಕಾರ 2 ರಿಂದ 4 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ನೀಡಿ ಕಾಮಗಾರಿ ಮಾಡಿಸಿತ್ತು ಕಾಂಗ್ರೆಸ್ ಸರ್ಕಾರ ಬಂದ ನಂತರ ಸರಿಯಾದ ಅನುದಾನ ಭೂ ಪರಿಹಾರ ನೀಡಿಲ್ಲ ಎತ್ತಿನ ಹೊಳೆ ನೀರು ಇನ್ನೂ ಸಕಲೇಶಪುರದ ಬಳಿಯೇ ಇದೆ ಬಯಲುಸೀಮೆ ಪ್ರದೇಶಗಳ ಈ ಭಾಗದತ್ತ ಹರಿಯಲೇ ಇಲ್ಲ ಎಂದರು.
ಮೆಡಿಕಲ್ ಕಾಲೇಜನ್ನು ಬಿಜೆಪಿ ಅವಧಿಯಲ್ಲಿ ನಿರ್ಮಿಸಲಾಗಿದೆ 810 ಕೊಟ್ಟರು ಖರ್ಚು ಮಾಡಿದ್ದರು. ಆಸ್ಪತ್ರೆ ಆರಂಭ ಆಗಿಲ್ಲ ಕ್ಷೇತ್ರದಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ನಾನು ನಿರ್ಮಿಸಿದ್ದೇನೆ ಆದರೆ ಇನ್ನೂ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡಿಲ್ಲ. ಉನ್ನತ ಶಿಕ್ಷಣ ಸಚಿವರು ನಮ್ಮ ಜಿಲ್ಲೆಗೆ ವಿಶ್ವವಿದ್ಯಾಲಯ ತರುತ್ತಾರೆ ಎಂಬ ಆಶಾ ಭಾವನೆ ಇತ್ತು ಆದರೆ ರಾಜ್ಯದ ಒಂಬತ್ತು ವಿವಿಗಳನ್ನ ಮುಚ್ಚಿ ಹಾಕಿದ್ದಾರೆ ಬಿಜೆಪಿ ಕಾಲದ ಬಜೆಟ್ ನಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣವನ್ನ ಘೋಷಿಸಲಾಗಿತ್ತು ಇದ್ಯಾವುದೂ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
- ಒಂದೇ ಗಂಟೆಯಲ್ಲಿ ಡಿಸಿಇಟಿ ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟ
- ವಿಮಾನ ನಿಲ್ದಾಣಗಳ ಸುತ್ತಮುತ್ತ ಪ್ರದೇಶಗಳಿಗೆ ಬರಲಿದೆ ಹೊಸ ರೂಲ್ಸ್
- ಅಮೆರಿಕ ಕನ್ನಡ ಒಕ್ಕೂಟಗಳಿಂದ ಕಮಲ್ ಹಾಸನ್ ಚಿತ್ರಗಳಿಗೆ ಬಹಿಷ್ಕಾರ
- ಗೊಂದಲದ ಗೂಡಾದ ಬಿಜೆಪಿ- ಜೆಡಿಎಸ್ ಮೈತ್ರಿ
- ದೊಡ್ಡ ವರ್ಗವನ್ನು ಅಂಚಿನಲ್ಲಿಡುವ ಅಸಮಾನತೆ ಪರಿಹರಿಸದಿರುವ ರಾಷ್ಟ್ರ ಪ್ರಗತಿಪರ ಅಲ್ಲ ; ಸಿಜೆಐ