ಬೆಂಗಳೂರು, ಜೂ.19– ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ವಿವಿಧೆಡೆ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಮೊದಲ ಆದ್ಯತೆ ನಮ ನಂದಿನಿ ಉತ್ಪನ್ನಗಳಿಗೆ ಕೊಡಬೇಕು ಎಂದರು.
ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಮಳಿಗೆ ಪ್ರಾರಂಭ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಮೊದಲು ನಂದಿನಿ ಮಳಿಗೆಗಳಿಗೆ ಅವಕಾಶ ಕೊಟ್ಟು ಆ ನಂತರ ಅಮೂಲ್ಗೆ ನೀಡಬೇಕಿತ್ತು. ಇನ್ನು ಮುಂದೆ ಯಾವುದೇ ರೈಲು ನಿಲ್ದಾಣಗಳಿರಲಿ ಮೊದಲು ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, 8-9 ಕಡೆ ನಂದಿನಿ ಮಳಿಗೆಗೆ ಅವಕಾಶ ಕೊಡುತ್ತೇವೆ ಎಂದಿದ್ದರು. ಬೆಂಗಳೂರಿನ ಉಸ್ತುವಾರಿ ಸಚಿವರು ಅವರೇ ಇದ್ದಾರೆ. ಅಮೂಲ್ಗೆ ಅವಕಾಶ ಮಾಡಿಕೊಟ್ಟಿರುವುದನ್ನು ಮುಖ್ಯಮಂತ್ರಿ ಅವರು ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಈ ಬಾರಿ ಮಾವಿನ ಫಸಲು ಹೆಚ್ಚಾದ ಹಿನ್ನೆಲೆಯಲ್ಲಿ ಮಾವಿನ ಹಣ್ಣಿನ ಬೆಲೆ ಕಡಿಮೆಯಾಗಿದೆ.
ಹಾಪ್ಕಾಮ್ಸೌನಲ್ಲಿ ಉತ್ತಮ ಬೆಲೆಯಿತ್ತು. ಫಸಲು ಹೆಚ್ಚಾದರಿಂದ ಬೆಲೆ ಕುಸಿತವಾಗಿದೆ. ಕೋಲಾರ ಜಿಲ್ಲೆಯ ಮಾವಿನಹಣ್ಣು ನೆರೆಯ ಆಂಧ್ರಪ್ರದೇಶಕ್ಕೆ ಹೋಗುತ್ತಿತ್ತು. ಆಂಧ್ರದವರು ನಮ ರಾಜ್ಯದ ಮಾವಿನ ಹಣ್ಣಿಗೆ ನಿರ್ಬಂಧ ಏರಿರುವುದರಿಂದ ನಷ್ಟವಾಗಿದೆ. ಕಳೆದ ಸಂಪುಟ ಸಭೆಯಲ್ಲೂ ಈ ವಿಚಾರದ ಬಗ್ಗೆ ಚರ್ಚೆಯಾಗಿತ್ತು. ಈ ಸಂಬಂಧ ನಾನು ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ತಿಳಿಸಿದರು.
- ಒಂದೇ ಗಂಟೆಯಲ್ಲಿ ಡಿಸಿಇಟಿ ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟ
- ವಿಮಾನ ನಿಲ್ದಾಣಗಳ ಸುತ್ತಮುತ್ತ ಪ್ರದೇಶಗಳಿಗೆ ಬರಲಿದೆ ಹೊಸ ರೂಲ್ಸ್
- ಅಮೆರಿಕ ಕನ್ನಡ ಒಕ್ಕೂಟಗಳಿಂದ ಕಮಲ್ ಹಾಸನ್ ಚಿತ್ರಗಳಿಗೆ ಬಹಿಷ್ಕಾರ
- ಗೊಂದಲದ ಗೂಡಾದ ಬಿಜೆಪಿ- ಜೆಡಿಎಸ್ ಮೈತ್ರಿ
- ದೊಡ್ಡ ವರ್ಗವನ್ನು ಅಂಚಿನಲ್ಲಿಡುವ ಅಸಮಾನತೆ ಪರಿಹರಿಸದಿರುವ ರಾಷ್ಟ್ರ ಪ್ರಗತಿಪರ ಅಲ್ಲ ; ಸಿಜೆಐ