ಬೆಂಗಳೂರು, ಯೋಗ ವಿಶ್ವದಲ್ಲೇ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಯೋಗಪಟುಗಳನ್ನು ಅಂತರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿ ಅವರಿಗೆ ಸಿಗಬೇಕಾದ ಅವಕಾಶಗಳನ್ನು ಕಲ್ಪಿಸಿಕೊಡಲು ವರ್ಲ್ಡ್ ಫಿಟ್ನೆಸ್ ಫೆಡರೇಶನ್ ಶ್ರಮಿಸುತ್ತಿದೆ ಎಂದು ಡಬ್ಲ್ಯೂ ಎಫ್ ಎಫ್ ನ ಅಧ್ಯಕ್ಷ ಶಿವಂ ಭದೌರಿಯಾ ಹೇಳಿದರು. ಸುರಾನ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಶಿಪ್ 2025 ಯನ್ನು ಉದ್ಘಾಟಿಸಿ ಮಾನತಾಡಿದವರು, ಕಳೆದ 5 ವರ್ಷಗಳಿಂದ ಡಬ್ಲ್ಯೂ ಎಫ್ ಎಫ್ ಯೋಗ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಇತರೆ ಕ್ರೀಡಾಪಟುಗಳಿಗೆ ಸಿಗುವ ಗೌರವ ಯೋಗಾಪಟುಗಳಿಗೂ ಸಿಗಬೇಕು ಎಂಬುವುದೇ ನಮ್ಮ ಬಯಕೆಯಾಗಿದೆ.
ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಯೋಗ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಿದ್ದೇವೆ. ರಾಜ್ಯ ಪಟ್ಟದಲ್ಲಿ ಗೆದ್ದವರನ್ನು ರಾಷ್ಟ್ರ – ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಮಲೇಷಿಯಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಫರ್ದೆಯನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಾಗುತ್ತಿದೆ. ಯೋಗಪಟುಗಳ ಜೊತೆಗೆ ಯೋಗ ಶಿಕ್ಷಕರನ್ನು ಬೆಂಬಲಿಸಲು ರಾಷ್ಟ್ರ ಪಟ್ಟದಲ್ಲಿ ಗೆದ್ದ ತಂಡದ ಶಿಕ್ಷಕರಿಗೆ ಡಬ್ಲ್ಯೂ ಎಫ್ ಎಫ್ ವತಿಯಿಂದ ಯೋಗ ಕೇಂದ್ರ ವನ್ನು ಸ್ಥಾಪಿಸಿಕೊಡುವ ಉದ್ದೇಶವೊಂದಿದೆ ಎಂದು ತಿಳಿಸಿದರು.
ಡಬ್ಲ್ಯೂ ಎಫ್ ಎಫ್ ನ ರಾಜ್ಯ ಘಟಕದ ಉಪಾಧ್ಯಕ್ಷ ಅವಿನಾಶ್ ಮಾತನಾಡಿ, ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 400 ಕ್ಕೂ ಹೆಚ್ಚು ಯೋಗಪಟುಗಳು ಭಾಗವಿಹಿಸಿದ್ದಾರೆ. ಮಕ್ಕಳಲ್ಲಿ ಶಿಕ್ಷಣದ ಕುರಿತು ಹೆಚ್ಚು ಒತ್ತಡ ಹೇರಲಾಗಿತ್ತಿದೆ, ಆದರೆ ಮಕ್ಕಳ ಉತ್ತಮ ಆರೋಗ್ಯಕ್ಕೆ ಕ್ರೀಡೆ ಅಗತ್ಯ. ಶಿಕ್ಷಣದ ಜೊತೆ ಯೋಗಾಭ್ಯಾಸ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಹೆಚ್ಚು ಮಕ್ಕಳು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಯೋಗಾಸನ, ಕಲಾತ್ಮಕ ಏಕವ್ಯಕ್ತಿ, ಕಲಾತ್ಮಕ ಜೋಡಿ ಮತ್ತು ಲಯಬದ್ಧ ಜೋಡಿ ಯೋಗಾಸನ ಪದಕಗಳು ಮತ್ತು ಟ್ರೋಫಿಗಳನ್ನು ಗೆದ್ದಿದ್ದಾರೆ. – ಎಲ್ಲಾ ಪದಕ ವಿಜೇತರನ್ನು ಆಗಸ್ಟ್ 13 ಮತ್ತು 14, 2025 ರಂದು ಕೇರಳದ ಕೊಚ್ಚಿಯಲ್ಲಿ ನಡೆಯುವ WFFYS ಪ್ರೊ-ಆಮ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ 2025 ಕ್ಕೆ ಆಯ್ಕೆ ಮಾಡಲಾಗಿದೆ
ಚಾಂಪಿಯನ್ಗಳು:
- ಯಶಿಕಾ ಬಂಡಿತಾ (18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿ)
- ಅಚಲ್ ಎನ್ (18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗ)
- ರಾಕೇಶ್ (18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು)
- ನಯನಾ (18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು)

ಈ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಯೋಗ ಯೋಜನೆ ನಿರ್ದೇಶಕರಾದ ಡಾ. ಐ ಶಶಿಕಾಂತ್ ಜೈನ್, ಕರ್ನಾಟಕ ರಾಜ್ಯ ಯೋಗಸನ ಸ್ಪೋರ್ಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ನಾಗರಾಜಪ್ಪ, ಡಬ್ಲ್ಯೂ ಅಫ್ ಅಫ್ ನ ಅಧ್ಯಕ್ಷ ರಾದ ಮನ್ಸೂರ್ ಪಾಷಾ, ಉಪಾಧ್ಯಕ್ಷರಾದ ಚಂದ್ರು, ವೆಂಕಟೇಶ ಆಚಾರ್ಯ, ತಾಂತ್ರಿಕ ನಿರ್ದೇಶಕ ರಾಜೇಶ್ ಆಚಾರಿ, ವಿದ್ಯಾ, ಸುರಾನಾ ಕಾಲೇಜ್ ದೈಹಿಕ ಶಿಕ್ಷಣ ನಿರ್ದೇಶಕ ಮಂಜಣ್ಣ ಹಾಗೂ ಸುರಾನಾ ಕಾಲೇಜ್ ನ ಆಡಳಿತ ವರ್ಗದವರು ಹಾಜರಿದ್ದರು.