ಬೆಂಗಳೂರು, ಜೂ. 23- ಸಿಲಿಕಾನ್ ಸಿಟಿಯಲ್ಲಿ ಟನಲ್ ರಸ್ತೆ ನಿರ್ಮಾಣದ ಕಾರ್ಯ ಚುರುಕುಪಡೆದುಕೊಂಡಿದೆ.ಬಹು ನಿರೀಕ್ಷಿತ ಟನಲ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ನಾಳೆ ಟನಲ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುತ್ತಿದೆ. ಸುಮಾರು 19 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಲಿದ್ದು, ನಗರದ ಹೆಬ್ಬಾಳ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ 17 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ ಸ್ಟೈಲ್ ಸಂಸ್ಥೆ ಮುಖ್ಯಸ್ಥ ಪ್ರಹ್ಲಾದ್ ತಿಳಿಸಿದ್ದಾರೆ.
ಉದ್ದೇಶಿತ ಟನಲ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಫಿಕ್ಸ್ ಮಾಡಲು ತೀರ್ಮಾನಿಸಲಾಗಿದೆ. ಟನಲ್ ರಸ್ತೆಯ ಟೋಲ್ ವಸೂಲಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಪ್ರತೀ ಕಿ.ಮೀಗೆ 19 ರೂಪಾಯಿ ಟೋಲ್ ವಿಧಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಂಬೈ ಮಾದರಿಯಲ್ಲಿ ಇಲ್ಲಿಯೂ ಟೋಲ್ ವಿಧಿಸಲು ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ನಾಲ್ಕು ಚಕ್ರದ ವಾಹನಗಳಿಗೆ ಏಕ ಸಂಚಾರದ ಪೂರ್ಣ ಉದ್ದದ ಸುರಂಗ ಮಾರ್ಗ ಬಳಕೆಗೆ, ಪ್ರತಿ ಕಿ.ಮೀಗೆ ಕನಿಷ್ಠ 19 ರೂಪಾಯಿ ಟೋಲ್ ವಿಧಿಸುವ ಸಾಧ್ಯತೆಗಳಿವೆ.

ಉದ್ದೇಶಿತ ಟನಲ್ ರಸ್ತೆ 2029ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ದಿದ್ದು, 2029 ರಿಂದ 2030ರ ಅವಧಿಗೆ 19 ರೂಪಾಯಿ ಪ್ರತಿ ಕಿ.ಮೀಗೆ ವಿಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸಮಸ್ಯೆಗಳ ಸರಮಾಲೆ: ಜನ ನಿಬಿಡ ಪ್ರದೇಶದಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡುವುದರಿಂದ ಸಮಸ್ಯೆಗಳ ಸರಮಾಲೆಯೇ ಎದುರಾಗಲಿದೆ.
ನಗರದ ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಈ ಯೋಜನೆಯಿಂದ ಭಾರಿ ಸಮಸ್ಯೆ ಎದುರಾಗಲಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರಿನ ಅಭಾವ ಸೃಷ್ಟಿಯಾಗಲಿದೆ. ಬೃಹತ್ ಕಟ್ಟಡಗಳ ಅಡಿಪಾಯ ಕ್ಕೆ ತೊಂದರೆಯಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಟನಲ್ ರಸ್ತೆ ನಿರ್ಮಾಣ ದಿಂದ ಮನೆಗಳ ಬೋರ್ವೆಲ್ ಗಳಿಗೆ ಸಂಚಕಾರ ಕಾಣಿಸಿಕೊಳ್ಳಲಿದೆ. ಟನಲ್ ರಸ್ತೆ ನಿರ್ಮಾಣಕ್ಕೆ ಅಂತ ಸುಮಾರು ಒಂದು ಸಾವಿರ ಅಡಿ ಅಳಕ್ಕೆ ರಸ್ತೆ ಅಗೆಯಬೇಕು ಇದರಿಂದ ಹೀಗಾಗಿ 800ರಿಂದ 1100 ಅಡಿಗಳಷ್ಟು ಭೂಮಿ ಕೋರೆಸಿ ಬೋರ್ವೆಲ್ ಹಾಕಿಸಿಕೊಂಡಿರುವ ಸಾವಿರಾರು ಮನೆಗಳು ನೀರಿನ ಸಂಪರ್ಕ ಕಡಿದುಕೊ ಳ್ಳಬೇಕಾಗುತ್ತದೆ.
ಇದರ ಜೊತೆಗೆ ಸಾವಿರಾರು ಮನೆಗಳ ಅಡಿಪಾಯಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ ಆಗಿರುವುದರಿಂದ ಉದ್ದೇಶಿತ ಟನಲ್ ರಸ್ತೆ ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.ಆದರೂ ಸರ್ಕಾರ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ ಎಂದು ಸಾಮಾನ್ಯ ಜನರು ಪ್ರಶ್ನಿಸುತ್ತಿದ್ದಾರೆ.
- ಬಂಜೆತನ ಸಮಸ್ಯೆಗಳಿಗೆ ಉಚಿತ ಮಾರ್ಗದರ್ಶನ ನೀಡಲು ಬಂತು ಟೋಲ್-ಫ್ರೀ ಸಂಖ್ಯೆ
- ರಾಜ್ಯದಲ್ಲಿ ಶೀಘ್ರವೇ ಜಲಾಶಯಗಳು ಭರ್ತಿ.!
- ಇರಾನ್-ಇಸ್ರೇಲ್ ಯುದ್ಧಕ್ಕೆ ಅಮೆರಿಕ ರಂಗಪ್ರವೇಶ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ
- ಶಾಸಕರ ಅಸಮಾಧಾನ ಬಗೆಹರಿಸುವೆ:ಸಿಎಂ
- ಗುಜರಾತ್ ವಿಧಾನಸಭೆಉಪಚುನಾವಣೆ ಫಲಿತಾಂಶ : ಬಿಜೆಪಿ,ಎಎಪಿ ಸಮಬಲ