ಚನ್ನೈ,ಜೂ.27- 2026 ರ ವಿಧಾನಸಭಾ ಚುನಾವಣೆಯ ನಂತರ ತಮಿಳುನಾಡಿನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸರ್ಕಾರ ರಚಿಸಲಿದ್ದು, ಅದರಲ್ಲಿ ಬಿಜೆಪಿ ಕೂಡ ಸೇರಿರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೊಂದಲಗಳಿಗೆ ತೆರೆಎಳೆಯುವ ಪ್ರಯತ್ನ ಮಾಡಿದ್ದಾರೆ.
ಬಿಜೆಪಿ ಮತ್ತು ಎಐಎಡಿಎಂಕೆಯ ಎನ್ಡಿಎ ಮೈತ್ರಿಕೂಟ ಮುಂದಿನ ವರ್ಷ ತಮಿಳುನಾಡಿನಲ್ಲಿ ಸರ್ಕಾರ ರಚಿಸಲಿದೆ. ಮುಖ್ಯಮಂತ್ರಿ ಅಭ್ಯರ್ಥಿ ಎಐಎಡಿಎಂಕೆ ಪಕ್ಷದವರಾಗಿರುತ್ತಾರೆ. ಆದಾಗ್ಯೂ, ಪಕ್ಷದ ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಅವರ ಹೆಸರನ್ನು ಅವರಿನ್ನೂ ಪ್ರಸ್ತಾಪ ಮಾಡದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ತಮಿಳುನಾಡಿನ ಸ್ಥಳೀಯ ಪತ್ರಿಕೆಗೆ ನೀಡಿರುವ ಸಂದರ್ಶನಲ್ಲಿ 1967 ರಿಂದ ಯಾವುದೇ ದ್ರಾವಿಡ ಪಕ್ಷವು ತಮಿಳುನಾಡಿನಲ್ಲಿ ಮಿತ್ರ ಪಕ್ಷಗಳೊಂದಿಗೆ ಅಧಿಕಾರವನ್ನು ಹಂಚಿಕೊಂಡಿಲ್ಲವಾದ್ದರಿಂದ ಈ ಹೇಳಿಕೆ ಮಹತ್ವದ್ದಾಗಿದೆ. ಮೈತ್ರಿಕೂಟವು ಗೆಲುವು ಸಾಧಿಸಿದರೆ ರಾಷ್ಟ್ರೀಯ ಪಕ್ಷವಾದ – ಈ ಸಂದರ್ಭದಲ್ಲಿ ಬಿಜೆಪಿ – ರಾಜ್ಯ ಆಡಳಿತದಲ್ಲಿ ಪಾಲನ್ನು ಪಡೆಯುವ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ನಟ ವಿಜಯ್ ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎನ್ನಿವ ಸೇರುತ್ತದೆಯೇ ಎಂದು ಕೇಳಿದಾಗ, ಚುನಾವಣೆಗೆ ಇನ್ನೂ ಸಮಯವಿದೆ ಎಂದು ಶಾ ಹಾರಿಕೆ ಉತ್ತರ ನೀಡುವ ಮೂಲಕ ಸಾಧ್ಯತೆಯನ್ನು ಮುಕ್ತವಾಗಿಟ್ಟಿದ್ದಾರೆ.
ಜೂನ್ 8 ರಂದು ಮಧುರೈನಲ್ಲಿ ನಡೆದ ರ್ಯಾಲಿಯಲ್ಲಿ ಆಡಳಿತಾರೂಢ ಡಿಎಂಕೆಯನ್ನು ತೀವ್ರವಾಗಿ ಟೀಕಿಸಿದ ವಾರಗಳ ನಂತರ ಶಾ ಈ ಹೇಳಿಕೆ ನೀಡಿದ್ದಾರೆ.ತಮಿಳುನಾಡಿನ ಡಿಎಂಕೆ ಸರ್ಕಾರ ಭ್ರಷ್ಟಾಚಾರದ ಎಲ್ಲಾ ಮಿತಿಗಳನ್ನು ಮೀರಿದೆ ಕೇಂದ್ರವು ಒದಗಿಸಿದ 450 ಕೋಟಿ ರೂ. ಮೌಲ್ಯದ ಪೌಷ್ಟಿಕಾಂಶ ಕಿಟ್ಗಳನ್ನು ರಾಜ್ಯ ಸರ್ಕಾರವು ಖಾಸಗಿ ಕಂಪನಿಗೆ ಹಸ್ತಾಂತರಿಸುತ್ತಿದೆ, ಇದು ಬಡವರಿಗೆ ಆಹಾರವನ್ನು ವಂಚಿಸಿದ್ದು, 4,600 ಕೋಟಿ ರೂಪಾಯಿಗಳ ಮರಳು ಗಣಿಗಾರಿಕೆ ಹಗರಣವು ಬಡವರನ್ನು ಹೆಚ್ಚಿನ ದರಗಳನ್ನು ಪಾವತಿಸುವಂತೆ ಮಾಡಿತು ಮತ್ತು ಆಡಳಿತ ಪಕ್ಷವನ್ನು ಶ್ರೀಮಂತಗೊಳಿಸಿತು ಎಂದು ಅವರು ಆರೋಪಿಸಿದರು.
ಬಿಜೆಪಿಯ ಮಹತ್ವಾಕಾಂಕ್ಷೆಗಳನ್ನು ಪುನರುಚ್ಚರಿಸುತ್ತಾ, ಜನರ ನಾಡಿಮಿಡಿತವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಮುಂದಿನ ಚುನಾವಣೆಯಲ್ಲಿ ತಮಿಳುನಾಡಿನ ಜನರು ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಹೇಳಬಲ್ಲೆ ಎಂದು ಭವಿಷ್ಯ ನುಡಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆಯನ್ನು ಸೋಲಿಸಲು ಶಾ ಸೈಲೆಂಟ್ ಆಪರೇಷನ್ ನಡೆಸಲಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸ್ಟಾಲಿನ್ ಅವರ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ ಅಮಿತ್ ಷಾ, ಮುಖ್ಯಮಂತ್ರಿ ಸ್ಟಾಲಿನ್ ಆ ಶಾ ಯಾರು? ಎಂದು ಕೇಳುತ್ತಿದ್ದಾರೆ. ನಾನು ಅವರಿಗೆ ಹೇಳುತ್ತೇನೆ: ಹರಿಯಾಣ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದ ಅದೇ ಶಾ. ಇದೇ ಡಿಎಂಕೆ ಅವರಿಗೆ ಹೆದರುತ್ತದೆ ಎಂದು ಟೀಕಾ ಪ್ರಹಾರ ನಡೆಸಿದರು.
- ಬೆಂಗಳೂರು : ಕಾರು ಡಿಕ್ಕಿಯಾಗಿ ಏರೋನಾಟಿಕಲ್ ಎಂಜಿನಿಯರ್ ದುರಂತ ಸಾವು
- ಬಸವರಾಜ ಬೊಮಾಯಿ ವಿರುದ್ಧದ ಎಫ್ಐಆರ್ ರದ್ದು
- ಸಾರ್ವಜನಿಕರ ಸುರಕ್ಷತೆಗಾಗಿ ಮನೆ-ಮನೆಗೆ ಬರಲಿದ್ದಾರೆ ಪೊಲೀಸರು
- ಮೈದುಂಬಿದ ಕೆಆರ್ಎಸ್ ಜಲಾಶಯ, ನಾಳೆ ಸಿಎಂ ಬಾಗಿನ ಅರ್ಪಣೆ
- ಚಾಮುಂಡಿ ಬೆಟ್ಟದಲ್ಲಿ ಆಷಾಢ ಸಂಭ್ರಮ, ಅವ್ಯವಸ್ಥೆಗೆ ಭಕ್ತರ ಆಕ್ರೋಶ