Saturday, June 28, 2025
Homeಸಂಪಾದಕೀಯ-ಲೇಖನಗಳುಧರ್ಮಪ್ರಭು ಕೆಂಪೇಗೌಡರು

ಧರ್ಮಪ್ರಭು ಕೆಂಪೇಗೌಡರು

Dharmaprabhu Kempegowda

*ಪರಮಪೂಜ್ಯ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಸ್ವಾವಿು ವಿವೇಕಾನಂದರು ಇಫ್‌ ಇಂಡಿಯಾ ಲೈವ್ಸ್ ಹೂ, ಡೈಸ್‌‍ ಅಂಡ್‌ ಇಂಡಿಯಾ ಡೈಸ್‌‍ ಹೂ ಲೈವ್ಸ್ ( ಭಾರತ ಬದುಕಿದರೆ ಯಾರು ಸಾಯುತ್ತಾರೆ ಮತ್ತು ಭಾರತ ಸತ್ತರೆ ಯಾರು ಬದುಕುತ್ತಾರೆ) ಎಂದು ಆಗಾಗ ಹೇಳುತ್ತಿದ್ದರು.

ಇದು ಭಾರತೀಯ ಜ್ಞಾನ ಪರಂಪರೆಯ ಉಳಿವು ಮತ್ತು ಮುಂದುವರಿಕೆಯ ದೃಷ್ಟಿಯಿಂದ ಹೇಳಿದ ಮಾತು. ಈ ಮಾತು ತಮ ಆಳ್ವಿಕೆಯ ನಾಡಿನ ಧರ್ಮ ಮತ್ತು ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ನಾಡನ್ನು ಪ್ರವರ್ಧಮಾನಕ್ಕೆ ತಂದ ನಾಡಪ್ರಭು ಕೆಂಪೇಗೌಡರ ಸಂದರ್ಭದಲ್ಲಿ ಅರ್ಥಪೂರ್ಣವೆನಿಸುತ್ತದೆ. ಅಪೂರ್ವ ಸಾಹಸಿ, ಕನಸುಗಾರ ಕೆಂಪೇಗೌಡರು ನಾಡಪ್ರಭು ಮಾತ್ರವಲ್ಲ ಧರ್ಮಪ್ರಭುಗಳೂ ಆಗಿದ್ದವರು.

ಅಂತಹ ಧರ್ಮಪ್ರಭು ಕೆಂಪೇಗೌಡರು ಮಾನವ ಸಂಪನೂಲವೇ ಒಂದು ನಾಡಿನ ಅತ್ಯಮೂಲ್ಯ ಸಂಪನೂಲ, ಆ ಸಂಪನೂಲವನ್ನು, ಆ ನಾಡಿನ ಕುಶಲಕರ್ಮಿಗಳ ಕೌಶಲ್ಯವನ್ನು ದೇಶದ ಒಳಿತಿಗೆ ಹಾಗು ಪ್ರಗತಿಗೆ ಬಳಸಿದಾಗ ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತದೆ ಎಂಬುದನ್ನು ಚೆನ್ನಾಗಿ ಅರಿತಿದ್ದರು. ತಮ ಕಾಲಮಾನದ ಎಲ್ಲ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಆಶ್ರಯ ನೀಡಿದವರು ಅವರು. ಅವರ ಆ ದೂರದೃಷ್ಟಿಯ ಫಲವೇ ಇಂದಿನ ಜಾಗತಿಕ ಮಟ್ಟದಲ್ಲಿ ಸಿಲಿಕಾನ್‌ ಸಿಟಿ ಎಂಬ ಅಭಿಧಾನಕ್ಕೆ ಪಾತ್ರವಾಗಿರುವ ಬೆಂಗಳೂರು.

ಈ ಪ್ರದೇಶವು ಅಂದಿನ ಕಾಲಕ್ಕೆ ಅನೇಕ ಪ್ರಮುಖ ವಾಣಿಜ್ಯಪಥಗಳ ಸಂಗಮಸ್ಥಾನವಾಗುವ ಆಯಕಟ್ಟಿನ ಸ್ಥಳವಾಗಿತ್ತು. ಇದನ್ನು ಮನಗಂಡು ಕ್ರಿ.ಶ.1537ರಲ್ಲಿ ಕೆಂಪೇಗೌಡರು ೞದೇವರಾಯಪಟ್ಟಣೞ ಎಂಬ ಹೆಸರಿನಲ್ಲಿ ತಮ ಹೊಸ ರಾಜಧಾನಿ ಹಾಗೂ ಉತ್ಪಾದನೆ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಂಗಳೂರು ಎಂಬ ನವ ನಗರವನ್ನು ಕಟ್ಟಿ, ಅದಕ್ಕೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಗಡಿಗೋಪುರಗಳನ್ನು ನಿರ್ಮಿಸಿದರು. ನಗರದ ಸುತ್ತ ಕಂದಕವುಳ್ಳ ಮಣ್ಣಿನ ಕೋಟೆ ನಿರ್ಮಿಸಿ, ಅದರ ಎಲ್ಲಾ ದಿಕ್ಕಿನಲ್ಲಿ ಕೆರೆಗಳನ್ನು ಕಟ್ಟಿಸಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದರು.

ತರಗುಪೇಟೆ, ಚಿಕ್ಕಪೇಟೆ, ಅಕ್ಕಿಪೇಟೆ, ಅರಳೆಪೇಟೆ, ಬಳೇಪೇಟೆ, ಮುಂತಾದ ಹತ್ತಾರು ಪೇಟೆಗಳನ್ನು ನೆಲೆಗೊಳಿಸಿ ವೈವಿಧ್ಯಮಯ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕುಶಲಕರ್ಮಿಗಳನ್ನು ವ್ಯವಸ್ಥೆ ಮಾಡಿದ್ದು ನಗರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರಣವಾಯಿತು. ಹಾಗೂ ಬೆಂಗಳೂರು ವಿಜಯನಗರ ಸಾಮ್ರಾಜ್ಯದ ಕಾಲದ ಪ್ರಮುಖ ನಗರವೆನಿಸಿತು.

ಈ ನಗರದ ಶಿಸ್ತುಬದ್ಧ ನಿರ್ಮಾಣವನ್ನು ಕಂಡ ಬ್ರಿಟಿಷ್‌ ಅಧಿಕಾರಿಗಳು ಆಧುನಿಕ ನಗರ ನಿರ್ಮಾತೃಗಳು ನವನಗರಗಳನ್ನು ನಿರ್ಮಾಣ ಮಾಡುವ ರೀತಿಯಲ್ಲಿಯೇ ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಾಪಾರ ಮತ್ತು ಉತ್ಪಾದನೆಗೆ ಮಾತ್ರ ಗಮನ ಕೊಡದೆ ನಗರದ ಸುತ್ತ ದೇವಾಲಯಗಳು, ಕೃಷಿಗೆ ಪೂರಕವಾದ ಕೆರೆಗಳು, ಅಗ್ರಹಾರಗಳನ್ನು ನಿರ್ಮಿಸಿರುವುದು ಕೆಂಪೇಗೌಡರ ವಿಶಾಲದೃಷ್ಟಿಗೆ ಸಂಕೇತಗಳಂತಿವೆ.

ಕೆಂಪೇಗೌಡರು ಸ್ವಭಾವತಃ ಧಾರ್ಮಿಕ ವ್ಯಕ್ತಿಯಾಗಿದ್ದರು. ಹಾಗೂ ಎಲ್ಲಾ ಮತಧರ್ಮಗಳನ್ನು ಸಮಭಾವದಿಂದ ಕಂಡವರು. ಹೀಗಾಗಿ ಬೆಂಗಳೂರಿನಲ್ಲಿ ಹಲವು ಹೊಸ ದೇವಾಲಯಗಳನ್ನು ನಿರ್ಮಿಸುವುದರ ಜೊತೆಗೆ ಹಳೆಯ ದೇವಾಲಯಗಳನ್ನು ಜೀರ್ಣೋದ್ಧಾರ ಮತ್ತು ವಿಸ್ತರಣೆ ಮಾಡಿದರು. ಇಂತಹ ದೂರದೃಷ್ಟಿಯ ದೊರೆಯ ಆಶ್ರಯದಲ್ಲಿ ಬೆಂಗಳೂರು ನಗರವು ದಕ್ಷಿಣ ಭಾರತದ ಪ್ರಮುಖ ಮತ್ತು ಶ್ರೀಮಂತ ನಗರವಾಗಿ ಬೆಳೆಯಿತು.

ಅಷ್ಟೇ ಅಲ್ಲ, ಬೆಂಗಳೂರು ನಗರ ನಿರ್ಮಾಣವು ವಿಜಯನಗರ ಸಾಮ್ರಾಜ್ಯದ ಚರಿತ್ರೆಯಲ್ಲಿ ಒಂದು ಮಹತ್ವದ ಘಟನೆಯಾಯಿತು.ಅನೇಕ ಚಕ್ರವರ್ತಿಗಳು, ಸಾಮ್ರಾಟರು, ದೊಡ್ಡ ದೊಡ್ಡ ರಾಜಮನೆತನಗಳು ಕಟ್ಟಿದ ರಾಜಧಾನಿಗಳು, ಬೃಹತ್‌ ನಗರಗಳು ಇಂದು ಅಸ್ತಿತ್ವದಲ್ಲಿಲ್ಲ. ಆದರೆ ಕೆಂಪೇಗೌಡರು ಕಟ್ಟಿದ ಬೆಂಗಳೂರು ಈಗಲೂ ಉತ್ತರೋತ್ತವಾಗಿ ತಂತ್ರಜ್ಞಾನ ಮತ್ತು ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಲೇ ಇದೆ.

ಯಾವುದೇ ದೇಶ ತನ್ನ ಪ್ರಜೆಗಳ ಪ್ರತಿಭೆ ಕೌಶಲ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳದೇ ಹೋದರೆ, ಆ ದೇಶ ಎಷ್ಟೇ ಶ್ರೀಮಂತವಾದ ಸಂಸ್ಕೃತಿ, ಪರಂಪರೆಯನ್ನು ಹೊಂದಿರಲಿ, ಅದು ಅಭಿವೃದ್ಧಿಯ ಪಥದತ್ತ ಸಾಗಲಾರದು. ಯಾವ ನಾಯಕರಿಗೆ ದೇಶದ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳ ತಿಳಿವಳಿಕೆ ಇರುತ್ತದೋ ಅಂತಹ ನಾಯಕರು ಆ ಸಂಸ್ಕೃತಿ, ಪರಂಪರೆ ಹಾಗು ಮೌಲ್ಯಗಳ ಮೂಲಕವೇ ದೇಶವನ್ನು ಆಳ್ವಿಕೆ ಮಾಡುವ ಸಾಮಥ್ರ್ಯವನ್ನು ಗಳಿಸಿಕೊಳ್ಳುವರು.

ಅಂತಹ ತಿಳಿವಳಿಕೆ ಇರದ ನಾಯಕರು ಸತ್ವಹೀನರಾಗುವರು. ಇದನ್ನು ಚೆನ್ನಾಗಿ ಅರಿತಿದ್ದ ಕೆಂಪೇಗೌಡರು ತಮ ವ್ಯಕ್ತಿತ್ವ, ಚಾರಿತ್ರ್ಯಗಳಲ್ಲಿ ಈ ನೆಲದ ಸಂಸ್ಕೃತಿ, ಅಧ್ಯಾತ, ಪರಂಪರೆ, ಸಂಸ್ಕೃತಿ ಹಾಗು ಮೌಲ್ಯಗಳನ್ನು ರೂಢಿಸಿಕೊಂಡಿದ್ದರು. ಜ್ಞಾನ-ಕರ್ಮ ಯೋಗಗಳ ಸಂಗಮವಾಗಿದ್ದರು. ಜ್ಞಾನ-ಕರ್ಮಗಳು ಜೊತೆಜೊತೆಗೆ ಕೈಗೂಡಿಸಿ ನಡೆದಾಗಲಷ್ಟೇ ದೇಶವನ್ನು ಸಮೃದ್ಧಿಯ ದಿಕ್ಕಿನಲ್ಲಿ ಕರೆದೊಯ್ಯಲು ಸಾಧ್ಯ. ಇಂತಹ ದೊರೆಯನ್ನು ಐನೂರ ಹದಿನಾರನೆಯ ಜನದಿನದ ಸಂದರ್ಭದಲ್ಲಿ ರಾಜ್ಯದ ಜನರು ಕೃತಜ್ಞತೆಯಿಂದ ಸರಿಸುತ್ತಿರುವುದು ಸಂತೋಷ ತಂದಿದೆ.

RELATED ARTICLES

Latest News