ಬೆಂಗಳೂರು, ಜೂ.28- ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೃಷ್ಣರಾಜ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ.ಕೆಆರ್ಎಸ್ ಡ್ಯಾಂ ಭರ್ತಿಗೆ ಕೇವಲ 1 ಅಡಿ ಮಾತ್ರ ಬಾಕಿ ಉಳಿದಿದೆ. 124.80 ಗರಿಷ್ಠ ಅಡಿ ಎತ್ತರದ ಕೆಆರ್ಎಸ್ ಜಲಾಶಯದಲ್ಲಿ ಈಗ 123 ಅಡಿ ನೀರು ಭರ್ತಿಯಾಗಿ ಇನ್ನು ಒಂದು ಅಡಿ ಭರ್ತಿಯಾದರೆ ಕೆಆರ್ಎಸ್ ಜಲಾಶಯ ತುಂಬಿ ತುಳುಕಲಿದೆ. ಒಳಹರಿವಿನ ಪ್ರಮಾಣ 73 ಸಾವಿರ ಕ್ಯೂಸೆಕ್ಸ್ಗೆ ಏರಿಕೆಯಾಗಿದೆ.
ಕೆಆರ್ಎಸ್ ಜಲಾಶಯದ ಇಂದಿನ ನೀರಿನ ಮಟ್ಟ :
ಗರಿಷ್ಠ ಮಟ್ಟ 124.80 ಅಡಿ
ಇಂದಿನ ನೀರಿನ ಮಟ್ಟ 123.25 ಅಡಿ
ಗರಿಷ್ಠ 49.50 ಟಿಎಂಸಿ
ಪ್ರಸ್ತುತ ನೀರಿನ ಸಂಗ್ರಹ 47.311 ಟಿಎಂಸಿ ಇದೆ.
ಜೂನ್ ತಿಂಗಳಲ್ಲೇ ಜಲಾಶಯ ಭರ್ತಿಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿದೆ. ಜೂ.30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿಗೆ ಬಾಗಿನ ಅರ್ಪಣೆ ಮಾಡಲಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.