ಅಹಮದಾಬಾದ್, ಜೂ.28- ಗುಜರಾತ್ನ ಆಹಮದಾಬಾದ್ ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 242 ಜನರೊಂದಿಗೆ ಸಾವನ್ನಪ್ಪಿದ್ದ ಪ್ರಯಾಣಿಕನ ಕೊನೆಯ ಶವವನ್ನು ಪತ್ತೆ ಹಚ್ಚಲಾಗಿದ್ದು, ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 260 ಕೈ ತಲುಪಿದೆ.
ಕಟ್ ನಿವಾಸಿಯಾದ ಮೃತ ವ್ಯಕ್ತಿಯ ದೇಹವನ್ನು ಶನಿವಾರ ರಾತ್ರಿ ತಡವಾಗಿ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅಹಮದಾಬಾದ್ನಲ್ಲಿ ಏರ್ ಇಂಡಿಯಾ ಫೈಟ್ 171 ಅಪಘಾತಕ್ಕೀಡಾದ ಸ್ಥಳದಿಂದ ಪತ್ತೆಯಾದ ಎಲ್ಲಾ ಅವಶೇಷಗಳನ್ನು ಡಿಎನ್ಎ ಹೊಂದಾಣಿಕೆ ಅಥವಾ ಮುಖ ಗುರುತಿಸುವಿಕೆ ಬಳಸಿ ಗುರುತಿಸಲಾಗಿದೆ.
ಡಿಎನ್ಎ ಹೊಂದಾಣಿಕೆಯನ್ನು ಬಳಸಿಕೊಂಡು ಶನಿವಾರ ರಾತ್ರಿ ಪ್ರಯಾಣಿಕರೊಬ್ಬರ ಕೊನೆಯ ಶವವನ್ನು ಗುರುತಿಸಲಾಗಿದೆ. ವಿಮಾನ ಅವಘಾತದಲ್ಲಿ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 260, ಇದರಲ್ಲಿ 19 ಪ್ರಯಾಣಿಕರಲ್ಲದವರು ಸೇರಿದ್ದಾರೆ ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರಾಕೇಶ್ ಜೋಶಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಸ್ಥಳದಿಂದ ಯಾವುದೇ ಹೊಸ ಅವಶೇಷಗಳು ಪತ್ತೆಯಾಗಿಲ್ಲ.
ಇಲ್ಲಿಯವರೆಗೆ, 253 ಬಲಿಪಶುಗಳನ್ನು ಡಿಎನ್ಎ ಪರೀಕ್ಷೆಯ ಮೂಲಕ ಗುರುತಿಸಲಾಗಿದ್ದು, ಆರು ಜನರನ್ನು ಮುಖ ಗುರುತಿಸುವಿಕೆಯ ಮೂಲಕ ಗುರುತಿಸಲಾಗಿದೆ.ಜೂನ್ 12 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ಕ್ರೀಮ್ ಲೈನರ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು, ಅದರಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದರು. ಭಾರತೀಯ ಮೂಲದ 40 ವರ್ಷದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಮಾತ್ರ ಬದುಕುಳಿದ ಏಕೈಕ ವ್ಯಕ್ತಿಯಾಗಿ ಹೊರಹೊಮ್ಮಿದರು. ಅಪಘಾತದ ಪರಿಣಾಮ ಹತ್ತಿರದ ವೈದ್ಯಕೀಯ ಕಾಲೇಜಿನ ವಸತಿ ಕಟ್ಟಡವು ಧ್ವಂಸಗೊಂಡು, ನೆಲದ ಮೇಲೆ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಮೇಘನಿನಗರದ ಅಪಘಾತ ಸ್ಥಳದಿಂದ ಒಟ್ಟು 318 ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಧನಂಜಯ್ ದ್ವಿವೇದಿ ಅವರು, ಪ್ರಯಾಣಿಕರಲ್ಲದವರು ಸೇರಿದಂತೆ ಮೃತರ 250 ಸಂಬಂಧಿಕರು ಗುರುತಿಸುವಿಕೆಗಾಗಿ ಡಿಎನ್ಎ ಮಾದರಿಗಳನ್ನು ನೀಡಿದ್ದಾರೆ. ಸಂಬಂಧಿಕರ ಡಿಎನ್ಎ ಮಾದರಿಗಳನ್ನು ಅಹಮದಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್) ಸಂಗ್ರಹಿಸಲಾಗಿದ್ದರೂ, ಡಿಎನ್ಎ ಹೊಂದಾಣಿಕೆಯನ್ನು ಎಫ್ಎಸ್ಎಲ್ ಗಾಂಧಿನಗರ ಮತ್ತು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (ಎನ್ಎಫ್ಎಸ್ಯು) ನಡೆಸಲಾಗಿದೆ.
ಈ ರೀತಿಯ ಡಿಎನ್ಎ ಹೊಂದಾಣಿಕೆ ಪ್ರಕ್ರಿಯೆಯು ಸಾಮಾನ್ಯವಾಗಿ ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಆದರೆ 171 ರ ಅಪಘಾತದ ಸಂದರ್ಭದಲ್ಲಿ, ಕಾರ್ಯಸಾಧ್ಯವಾದ ಮಾದರಿಗಳ ಗುರುತಿಸುವಿಕೆಯನ್ನು ಸುಮಾರು ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗಿದೆ. ವಿಧಿವಿಜ್ಞಾನ ಗುರುತಿಸುವಿಕೆಗಾಗಿ ಡಿಎನ್ಎ ಮಾದರಿ ಸಂಗ್ರಹಣೆಯು ಎರಡು ಪ್ರಾಥಮಿಕ ವಿಧಾನಗಳನ್ನು ಅನುಸರಿಸುತ್ತದೆ.
ಮೊದಲ ವಿಧಾನವು ತಾಜಾ ರಕ್ತದಿಂದ ಮಾದರಿಗಳನ್ನು ಸಂಗ್ರಹಿಸುವುದನ್ನು ಒಳಗೊಂಡಿರುತ್ತದೆ, ಆದರೆ ಎರಡನೆಯ ವಿಧಾನವು ಸತ್ತ ವ್ಯಕ್ತಿಗಳ ಅವಶೇಷಗಳಿಂದ ಮಾದರಿಗಳನ್ನು ಸಂಗ್ರಹಿಸುವ ಅಗತ್ಯ ಹೊಂದಿರುತ್ತದೆ. ಮಾಲಿನ್ಯವನ್ನು ತಡೆಗಟ್ಟಲು ಹೆಚ್ಚಿನ ನಿಖರತೆ ಮತ್ತು ಎಚ್ಚರಿಕೆಯಿಂದ ನಿರ್ವಹಣೆ ಅಗತ್ಯವಿರುತ್ತದೆ.
- ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಅಪಾಯ
- ದತ್ತಾತ್ರೇಯ ಹೊಸಬಾಳೆ ಹೇಳಿಕೆ ಅಪ್ರಸ್ತುತ : ಗೃಹಸಚಿವ ಪರಮೇಶ್ವರ್
- ಕೋಡಿಶ್ರೀಗಳ ಚಿನ್ನಾಭರಣವಿದ್ದ ಬ್ಯಾಗ್ಗೆ ಕನ್ನ ಹಾಕಿದ್ದ ಖದೀಮನ ಬಂಧನ
- ಸರ್ ಸಿ.ವಿ.ರಾಮನ್ನಗರದಲ್ಲಿ ಕೆಂಪೇಗೌಡ ಉದ್ಯಾನವನ
- ಬಿಎಂಟಿಸಿ ನಿರ್ವಾಹಕರ ವಿರುದ್ಧ 3500 ಪ್ರಕರಣ ದಾಖಲು
ಡಿಎನ್ಎ ಹೊರತೆಗೆಯುವ ಪ್ರಕ್ರಿಯೆಯು ಎಚ್ಚರಿಕೆಯಿಂದ ಮಾದರಿ ತಯಾರಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಮೂಳೆ ಮಾದರಿಗಳನ್ನು ಸೂಕ್ಷ್ಮವಾಗಿ ಪುಡಿಮಾಡಲಾಗುತ್ತದೆ, ಆದರೆ ಹಲ್ಲಿನ ಮಾದರಿಗಳನ್ನು ಮೊದಲು ಸಣ್ಣ ತುಂಡುಗಳಾಗಿ ಒಡೆಯಲಾಗುತ್ತದೆ ಮತ್ತು ನಂತರ ಅದೇ ರೀತಿ ಪುಡಿ ಮಾಡಲಾಗುತ್ತದೆ. ಈ ಸವಾಲಿನ ಜೈವಿಕ ವಸ್ತುಗಳಿಂದ ಡಿಎನ್ಎ ಇಳುವರಿಯನ್ನು ಹೆಚ್ಚಿಸಲು ಇದು ನಿರ್ಣಾಯಕವಾಗಿದೆ ಎಂದು ಎನ್ಎಫ್ಎಸ್ಯುನಲ್ಲಿರುವ ಡಿಎನ್ಎ ಫೋರೆನ್ಸಿಕ್ಸ್ನ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥಭಾರ್ಗವ್ ಪಟೇಲ್ ಹೇಳಿದರು.
32 ವಿಜ್ಞಾನಿಗಳು ಮತ್ತು ಪಿಎಚ್ ಡಿ ವಿದ್ವಾಂಸರ ತಂಡವು ವಿಮಾನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳಿಂದ 150 ಕ್ಕೂ ಹೆಚ್ಚು ಡಿಎನ್ಎ ಮಾದರಿಗಳನ್ನು ಹೊಂದಾಣಿಕೆ ಉದ್ದೇಶಗಳಿಗಾಗಿ ನಿರ್ವಹಿಸಿದೆ ಮತ್ತು 125 ಕ್ಕೂ ಹೆಚ್ಚು ದೇಹಗಳನ್ನು ಯಶಸ್ವಿಯಾಗಿ ಗುರುತಿಸಿದೆ.