Saturday, June 28, 2025
Homeರಾಷ್ಟ್ರೀಯ | Nationalಸಂವಿಧಾನದ ಮೂಲ ಆಶಯ ಬದಲಿಸಲು ಇಂದಿರಾ ಗಾಂಧಿ ಸಂಚು ಮಾಡಿದ್ದರು : ಬಿಜೆಪಿ

ಸಂವಿಧಾನದ ಮೂಲ ಆಶಯ ಬದಲಿಸಲು ಇಂದಿರಾ ಗಾಂಧಿ ಸಂಚು ಮಾಡಿದ್ದರು : ಬಿಜೆಪಿ

Indira Gandhi had plotted to change the original intention of the Constitution: BJP

ನವದೆಹಲಿ, ಜೂ.28- ಆರ್‌ಎಸ್‌‍ಎಸ್‌‍ ಮತ್ತು ಬಿಜೆಪಿ ಸಂವಿಧಾನದ ಮೂಲ ಆಶಯವನ್ನು ಬದಲಾಯಿಸಲು ಸಂಚು ಹೂಡುತ್ತಿವೆ ಎಂಬ ಕಾಂಗ್ರೆಸ್‌‍ ಆರೋಪಕ್ಕೆ ಭಾರತೀಯ ಜನತಾ ಪಕ್ಷ ಸಾಕ್ಷಿ ಸಮೇತ ತಿರುಗೇಟು ನೀಡಿದೆ.

ತುರ್ತು ಪರಿಸ್ಥಿತಿ ಸಂದರ್ಭದ ಪತ್ರಿಕಾ ವರದಿ ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಬಿಜೆಪಿ ವಕ್ತಾರರು, ಇಂದಿರಾ ಗಾಂಧಿ ಸಂವಿಧಾನದ ಮೂಲ ಆಶಯವನ್ನೇ ಮಾರ್ಪಾಟು ಮಾಡಲು ಉದ್ದೇಶಿಸಿದ್ದರು. ಆದರೆ, ದೇಶವು ಅದರಿಂದ ಸ್ವಲ್ಪದರಲ್ಲೇ ಬಚಾವಾಯಿತು ಎಂದಿದ್ದಾರೆ.

ಭಾರತೀಯ ಸಂವಿಧಾನದಲ್ಲಿರುವ ಜಾತ್ಯತೀತ ಮತ್ತು ಸಮಾಜವಾದ ವಿಚಾರಗಳ ಬಗ್ಗೆ ಆರ್‌ಎಸ್‌‍ಎಸ್‌‍ ನಾಯಕ ದತ್ತಾತ್ರೇಯ ಹೊಸ ಬಾಳೆ ನೀಡಿರುವ ಹೇಳಿಕೆಯ ನಂತರ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಕಾಂಗ್ರೆಸ್‌‍ ವಾಗ್ದಾಳಿ ತೀವ್ರಗೊಳಿಸಿತ್ತು. ತುರ್ತು ಪರಿಸ್ಥಿತಿಯ ಕಾಲಘಟ್ಟದ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌‍ಗೆ ತೀಕ್ಷ್ಣವಾದ ತಿರುಗೇಟು ನೀಡಿದೆ.

ತುರ್ತು ಪರಿಸ್ಥಿತಿಯ ಕಾಲದಲ್ಲಿ ಸಂವಿಧಾನದ ಮೂಲ ಆಶಯವನ್ನೇ ಬದಲಾಯಿಸಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮುಂದಾಗಿದ್ದರು ಎಂಬ ಅಂದಿನ ಪತ್ರಿಕಾ ತುಣುಕನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌‍ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.ಸಂವಿಧಾನದ ಮೂಲ ಅಶಯವನ್ನು ಬದಲಾಯಿಸಲು ಇಂದಿರಾಗಾಂಧಿ ಮುಂದಾಗಿದ್ದರು ಎಂಬ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್‌ ಭಂಡಾರಿ ಸಾಮಾಜಿಕ ಮಾಧ್ಯಮ ಎಕ್‌್ಸನಲ್ಲಿ ಟೀಕಾ ಪ್ರಹಾರ ಮಾಡಿದ್ದಾರೆ.

RELATED ARTICLES

Latest News