Saturday, June 28, 2025
Homeಬೆಂಗಳೂರುಸರ್‌ ಸಿ.ವಿ.ರಾಮನ್‌ನಗರದಲ್ಲಿ ಕೆಂಪೇಗೌಡ ಉದ್ಯಾನವನ

ಸರ್‌ ಸಿ.ವಿ.ರಾಮನ್‌ನಗರದಲ್ಲಿ ಕೆಂಪೇಗೌಡ ಉದ್ಯಾನವನ

Kempegowda Park in Sir C.V.Ramannagar

ಬೆಂಗಳೂರು,ಜೂ.28- ನಾಡಪ್ರಭು ಕೆಂಪೇಗೌಡರ ಜಯಂತಿಯ ಪ್ರಯುಕ್ತ ಸರ್‌.ಸಿ.ವಿ.ರಾಮನ್‌ನಗರ ಕ್ಷೇತ್ರದ ಬಿಇಎಂಎಲ್‌ ವೃತ್ತದಲ್ಲಿ ಸ್ಥಳೀಯ ಶಾಸಕ ಎಸ್‌‍.ರಘು ಕೆಂಪೇಗೌಡ ಉದ್ಯಾನವನಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುವ ಈ ವೃತ್ತದಲ್ಲಿ ಸಾರ್ವಜನಿಕರಿಗೆ ಆಕರ್ಷಣೆ ಮಾಡುವಂತೆ ಈ ಪ್ರದೇಶವನ್ನು ಅಭಿವೃದ್ಧಿ ಮಾಡಲಾಗಿದ್ದು ಪ್ರಧಾನಿ ನರೇಂದ್ರಮೋದಿ ಈ ಸ್ಥಳಕ್ಕೆ ಬಂದು ಕೆಂಪೇಗೌಡರಿಗೆ ನಮಸ್ಕರಿಸಿ ಇಲ್ಲಿಂದಲೇ ಚುನಾವಣೆ ರ್ಯಾಲಿ ಆರಂಭಿಸಿದ್ದು ಅವಿಸಯಸರಣೀಯ.

ಹಾಗಾಗಿ ಈ ಪ್ರದೇಶವನ್ನು ಪ್ರವಾಸಿಗರ ಆಕರ್ಷಣೆ ಸ್ಥಳವನ್ನಾಗಿ ಮಾಡುವ ಬಹುದಿನಗಳ ಆಸೆ ಇಂದು ನನಸಾಗಿದೆ ಎಂದರು. ಪ್ರಯಾಣಿಕರ ಅನುಕೂಲಕ್ಕಾಗಿ ಡಾ.ರಾಜಕುಮಾರ್‌ ಬಸ್‌‍ ತಂಗುದಾಣ ನಿರ್ಮಾಣ ಮಾಡಲಾಗಿದೆ ಕೆಂಪೇಗೌಡರಿಗೆ ಮೆರುಗು ನೀಡುವ ಕಲಾಕೃತಿಗಳನ್ನು ಒಳಗೊಂಡಂತೆ ಸುಸರ್ಜಿತ ಉದ್ಯಾನವನಕ್ಕೆ ದೀಪಾಲಂಕಾರ ಜನರ ವಿಶ್ರಾಂತಿಗಾಗಿ
ಮೇಜುಗಳು ಕರ್ಷಣೀಯವಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಪರಿಸರ ಕಾಪಾಡಿದ ನಾಡ ನಿರ್ಮಾತೃಗೆ ಈ ಸ್ಥಳದಲ್ಲಿ ಗಿಡ ಮರ ನೆಟ್ಟು ಹಸಿರುಮಯವಾಗಿ ಕಂಗೊಳಿಸುವಂತೆ ಮಾಡಲಾಗಿದೆ. ಇಡೀ ಕ್ಷೇತ್ರಕ್ಕೆ ಮಿನುಗುವ ನಕ್ಷತ್ರವಿದ್ದಂತೆ ಕಂಗೊಳಿಸುತ್ತಿದೆ ಎಂದು ಅವರು ಬಣ್ಣಿಸಿದರು.

ಯಾವುದೇ ರಾಜಕೀಯ ಉದ್ದೇಶವಿಲ್ಲದೆ ನಿಸ್ವಾರ್ಥವಾಗಿ ಈ ಸೇವೆಯನ್ನು ಮಾಡಿರುವುದು ನನಗೆ ತುಂಬಾ ಸಂತೋಷ ಉಂಟುಮಾಡಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಕೆಂಪೇಗೌಡ ಅಭಿಮಾನಿಗಳು ಹಾಜರಿದ್ದರು.

RELATED ARTICLES

Latest News