Monday, June 30, 2025
Homeರಾಷ್ಟ್ರೀಯ | Nationalಪ್ರಧಾನಿ ಮೋದಿ 'ಮನ್‌ ಕಿ ಬಾತ್‌' 123ನೇ ಸಂಚಿಕೆ : ಇಲ್ಲಿದೆ ಹೈಲೈಟ್ಸ್

ಪ್ರಧಾನಿ ಮೋದಿ ‘ಮನ್‌ ಕಿ ಬಾತ್‌’ 123ನೇ ಸಂಚಿಕೆ : ಇಲ್ಲಿದೆ ಹೈಲೈಟ್ಸ್

PM Modi's 'Mann Ki Baat' 123rd Episode: Here are the Highlights

ನವದೆಹಲಿ,ಜೂ.29- ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಜನರು ಪ್ರಜಾಪ್ರಭುತ್ವವನ್ನು ಕೊಂದಿದ್ದಲ್ಲದೆ, ನ್ಯಾಯಾಂಗವನ್ನು ತಮ ಕೈಗೊಂಬೆಯಾಗಿ ಇಟ್ಟುಕೊಳ್ಳುವುದು ಅವರ ಗುರಿಯಾಗಿತ್ತು ಎಂದು ಪ್ರಧಾನಿ ನರೇಂದ್ರಮೋದಿ ಕಾಂಗ್ರೆಸ್‌‍ ಹೆಸರು ಹೇಳದೆ ಮತ್ತೆ ಟೀಕಾಪ್ರಹಾರ ಮಾಡಿದ್ದಾರೆ.

ತಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ 123ನೇ ಸಂಚಿಕೆಯಲ್ಲಿ ಅವರು, ತುರ್ತು ಪರಿಸ್ಥಿತಿ ಹೇರಿದವರು ಪ್ರಜಾಪ್ರಭುತ್ವವನ್ನು ಕೊಂದರು ಮಾತ್ರವಲ್ಲ, ನ್ಯಾಯಾಂಗವನ್ನು ತಮ ಕೈಗೊಂಬೆಯಾಗಿ ಇಟ್ಟುಕೊಳ್ಳುವುದು ಅವರ ಉದ್ದೇಶವಾಗಿತ್ತು. ಮಿಸಾ ಅಡಿಯಲ್ಲಿ, ಯಾರನ್ನಾದರೂ ನಿರಂಕುಶವಾಗಿ ಬಂಧಿಸಲಾಯಿತು, ಜನರನ್ನು ಹಿಂಸಿಸಲಾಯಿತು ಎಂದು ಕಿಡಿಕಾರಿದರು.

ಇತ್ತೀಚೆಗೆ ಭಾರತ 50 ವರ್ಷಗಳ ಹಿಂದಿನ ಕರಾಳ ಯುಗದ ತುರ್ತು ಪರಿಸ್ಥಿತಿಯನ್ನು ಪ್ರಸ್ತಾಪಿಸಿ, ಪ್ರಜಾಪ್ರಭುತ್ವವನ್ನು ಕೊಲೆ ಮಾಡಿ ದೇಶದ ಜನರಿಗೆ ಕಿರುಕುಳ ನೀಡಲಾಗಿತ್ತು. ತುರ್ತು ಪರಿಸ್ಥಿತಿಯು ರಾಷ್ಟ್ರಕ್ಕೆ ಕಠಿಣ ಅವಧಿಯಾಗಿತ್ತು ಎಂದರು.ಪ್ರಜಾಪ್ರಭುತ್ವದ ಉಳಿವು ಖಚಿತಪಡಿಸಿಕೊಳ್ಳುವುದು ನಮ ಕರ್ತವ್ಯ. ತುರ್ತು ಪರಿಸ್ಥಿತಿಯನ್ನು ಯಾವ ಭಾರತೀಯನೂ ಎಂದಿಗೂ ಮರೆಯುವುದಿಲ್ಲ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸಂಕ್ಷಿಪ್ತ ಸಂದೇಶವನ್ನು ಪ್ರಸಾರ ಮಾಡಿದ ಮೋದಿ, ಆ ಅವಧಿಯಲ್ಲಿ ಜನರು ಹೇಗೆ ಹಿಂಸಿಸಲ್ಪಟ್ಟರು ಎಂಬುದನ್ನು ವಿವರಿಸಿದರು.

ಆ ವರ್ಷಗಳಲ್ಲಿ ಪ್ರಜಾಪ್ರಭುತ್ವವು ಕರಾಳ ಅವಧಿಯನ್ನು ಪ್ರವೇಶಿಸಿತ್ತು. ಮಿಸಾ ಅಡಿಯಲ್ಲಿ ಯಾರನ್ನಾದರೂ ನಿರಂಕುಶವಾಗಿ ಬಂಧಿಸಲಾಗಿತ್ತು. ಹಿಂಸಿಸಲಾಗಿತ್ತು. ಭಾರತೀಯರು ಪ್ರಜಾಪ್ರಭುತ್ವದ ಮೇಲೆ ರಾಜಿ ಮಾಡಿಕೊಳ್ಳಲು ನಿರಾಕರಿಸಿದ್ದರು. ಅಂತಿಮವಾಗಿ ಜನರು ಗೆದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ತೆಗೆದು ಹಾಕಲಾಯಿತು ಎಂದು ಹೇಳಿದರು.ನಾವು ದೇಶವಾಸಿಗಳು ಈ ಸಂದರ್ಭದಲ್ಲಿ ಸಂವಿಧಾನ ಹತ್ಯೆ ದಿವಸ್‌‍ ಆಚರಿಸಿದ್ದೇವೆ ಮತ್ತು ತುರ್ತು ಪರಿಸ್ಥಿತಿಯ ವಿರುದ್ಧ ಧೈರ್ಯದಿಂದ ಹೋರಾಡಿದವರನ್ನು ನಾವು ಸರಿಸಬೇಕು. ಇದು ನಮ ಸಂವಿಧಾನವನ್ನು ರಕ್ಷಿಸಲು ಜಾಗರೂಕರಾಗಿರಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದರು.

ಜೂನ್‌ 21ರಂದು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಇದು 10 ವರ್ಷಗಳ ಹಿಂದೆ ಪ್ರಾರಂಭವಾಯಿತು. ಕಳೆದ 10 ವರ್ಷಗಳಲ್ಲಿ, ಪ್ರತಿ ವರ್ಷ ಅದರ ಸಂಪ್ರದಾಯವು ಮೊದಲಿಗಿಂತ ಹೆಚ್ಚು ಭವ್ಯವಾಗಿದೆ. ಇದು ಹೆಚ್ಚಿನ ಜನರು ತಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೆಲಂಗಾಣ, ಜಮು ಮತ್ತು ಕಾಶೀರ ಮತ್ತು ಸಶಸ್ತ್ರ ಪಡೆಗಳು, ಬುಡಕಟ್ಟು ವಿದ್ಯಾರ್ಥಿಗಳು ಮತ್ತು ದಿವ್ಯಾಂಗ ಜನರು ಸೇರಿದಂತೆ ಜನರು ಉತ್ಸಾಹದಿಂದ ಭಾಗವಹಿಸಿದ ಇತರ ರಾಜ್ಯಗಳನ್ನು ಉಲ್ಲೇಖಿಸಿದರು.
ದೀರ್ಘ ಸಮಯದ ನಂತರ ಕೈಲಾಸ-ಮಾನಸ ಸರೋವರ ಯಾತ್ರೆ ಪುನರಾರಂಭವಾಗಿದ್ದು, ಭಕ್ತರಿಗೆ ಮಹತ್ವದ ಕ್ಷಣವಾಗಿದೆ ಎಂದು ಪ್ರಧಾನಿ ಹೇಳಿದರು.ಜುಲೈ 3ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಯಾತ್ರಾರ್ಥಿಗಳು ಮತ್ತೊಮೆ ಈ ಪವಿತ್ರ ಪ್ರಯಾಣವನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಈ ಯಾತ್ರೆಗಳನ್ನು ಕೈಗೊಳ್ಳಲಿರುವವರಿಗೆ ನನ್ನ ಶುಭಾಶಯಗಳು ಎಂದು ಹೇಳಿದರು. ಬಹಳ ಸಮಯದ ನಂತರ, ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭಗೊಂಡಿದೆ. ಪವಿತ್ರ ಅಮರನಾಥ ಯಾತ್ರೆ ಜುಲೈ 3ರಿಂದ ಪ್ರಾರಂಭವಾಗಲಿದ್ದು, ಸಾವನ್‌(ಶ್ರಾವಣ) ಮಾಸ ಸಮೀಪಿಸುತ್ತಿದೆ. ನಾವು ಜಗನ್ನಾಥ ಯಾತ್ರೆಯನ್ನೂ ವೀಕ್ಷಿಸಿದ್ದೇವೆ. ಈ ತೀರ್ಥಯಾತ್ರೆಗಳು ಏಕ್‌ ಭಾರತ್‌, ಶ್ರೇಷ್ಠ ಭಾರತ್‌ನ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದರು.

ಈಗ ಜಾಗತಿಕ ಸಂಸ್ಥೆಯು ಚರ್ಚಿಸುತ್ತಿರುವ ದೇಶದ ಸಾಧನೆಗಳ ಬಗ್ಗೆ ನಾನು ನಿಮಗೆಲ್ಲರಿಗೂ ಹೇಳಲು ಬಯಸುತ್ತೇನೆ. ಮೊದಲನೆಯದು ನಮ ಆರೋಗ್ಯಕ್ಕೆ ಸಂಬಂಧಿಸಿದೆ. ಭಾರತದ ಹಲವು ಭಾಗಗಳಲ್ಲಿ ಟ್ರಾಕೋಮಾ ಸಾಮಾನ್ಯವಾಗಿದ್ದ ಕಾಲವಿತ್ತು. ಟ್ರಾಕೋಮಾವನ್ನು ತೊಡೆದುಹಾಕಲು ನಾವು ನಿರ್ಧರಿಸಿದ್ದೇವೆ. ಡಬ್ಲ್ಯುಎಚ್‌ಒ ಭಾರತವನ್ನು ಟ್ರಾಕೋಮಾ ಮುಕ್ತ ಎಂದು ಘೋಷಿಸಿದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಭಾರತೀಯ ಜನಸಂಖ್ಯೆಯ ಶೇಕಡಾ 64 ಕ್ಕಿಂತ ಹೆಚ್ಚು ಜನರು ಒಂದಲ್ಲ ಒಂದು ರೀತಿಯ ಸಾಮಾಜಿಕ ರಕ್ಷಣಾ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದು, 95 ಕೋಟಿಗೂ ಹೆಚ್ಚು ಭಾರತೀಯರು ಈಗ ಕೆಲವು ಸಾಮಾಜಿಕ ಭದ್ರತಾ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ, 2015 ರಲ್ಲಿ ಸರ್ಕಾರಿ ಯೋಜನೆಗಳು 25 ಕೋಟಿಗಿಂತ ಕಡಿಮೆ ಜನರನ್ನು ತಲುಪಿವೆ ಎಂದು ವಿವರಿಸಿದರು. ಭಾರತದ ಬಾಹ್ಯಾಕಾಶ ಯಾತ್ರೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಶುಭಾಂಶು ಶುಕ್ಲಾ ಅವರ ಕೊಡುಗೆಯನ್ನು ಶ್ಲಾಘಿಸಿದರು, ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಅವರ ಪ್ರಯತ್ನಗಳನ್ನು ಗುರುತಿಸಿದರು.

RELATED ARTICLES

Latest News