ಬೇಲೂರು,ಜು.2- ಮಗುವಿನೊಂದಿಗೆ ಆಟವಾಡುತ್ತಿದ್ದಾಗಲೇ ತಂದೆಗೆ ಹೃದಯಾಘಾತವಾಗಿ ನಿಧನವಾಗಿರುವ ಘಟನೆ ತಾಲ್ಲೂಕಿನ ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಾದಿಹಳ್ಳಿ ಗ್ರಾಮದ ರವಿಕುಮಾರ್ (30) ಮೃತಪಟ್ಟ ದುರ್ದೈವಿ.ನಿನ್ನೆ ಸಂಜೆ ಮಾದಿಹಳ್ಳಿ ಗ್ರಾಮದಿಂದ ಹೊರಟು ಪತ್ನಿಯ ತವರಾದ ತಾಲ್ಲೂಕಿನ ಯಕಶೆಟ್ಟಿಹಳ್ಳಿ ಗ್ರಾಮಕ್ಕೆ ತೆರಳಿ ಪತ್ನಿಯೊಂದಿಗೆ ಮಾತನಾಡಿ ನಂತರ 9 ತಿಂಗಳ ಮಗುವಿನೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು.
ಕೂಡಲೇ ಎದೆನೋವು ಕಾಣಿಸಿಕೊಂಡು ಹಠಾತ್ತನೆ ಕುಸಿದುಬಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃಷಿಕರಾದ ರವಿಕುಮಾರ್ ಮದುವೆಯಾಗಿ 2 ವರ್ಷವಾಗಿತ್ತು. ಇತ್ತೀಚೆಗಷ್ಟೇ ಮಗುವಾಗಿದೆ.
ಇವರ ಅಕಾಲಿಕ ನಿಧನದಿಂದ ಕುಟುಂಬ ಸದಸ್ಯರಿಗೆ ಬರಸಿಡಿಲು ಅಪ್ಪಳಿಸಿದಂತಾಗಿದ್ದು, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ದಿನದಿಂದ ದಿನಕ್ಕೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
- ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ : ಬಳ್ಳಾರಿ ಕಾರ್ಪೋರೇಟರ್ ಮನೆ ಮೇಲೆ ಸಿಬಿಐ ದಾಳಿ
- ದೇಶದಲ್ಲಿ ಅಸಹನೆ, ಧರ್ಮಾಂಧತೆ ಹೆಚ್ಚಾಗಿದೆ : ಸಚಿವ ಎಚ್.ಸಿ.ಮಹದೇವಪ್ಪ ಬೇಸರ
- ಭವಿಷ್ಯವಾಣಿಗಳನ್ನು ಮೀರಿಸಿ ಭಾರತ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ : ಭಾಗವತ್
- ಈ ಬಾರಿ ಶಿಕ್ಷಕರಿಗಿಲ್ಲ ದಸರಾ ರಜೆ
- ಅಂಬರೀಷ್ಗೂ ‘ಕರ್ನಾಟಕ ರತ್ನ’ ನೀಡುವಂತೆ ನಟಿ ತಾರಾ ಆಗ್ರಹ