ಬೆಂಗಳೂರು, ಜು.3-ಭೀಕರವಾಗಿ ಕೊಲೆಯಾದ ನಿವೃತ್ತ ಡಿಜಿಪಿ ಓಂಪ್ರಕಾಶ್ ಅವರ ಮಗಳು ನಂದಿನಿ ಪಾರ್ಲರ್ ಗೆ ಹೋಗಿದ್ದಾಗ ದಾಂದಲೆ ನಡೆಸಿದ್ದಾರೆ.ಕಳೆದ ಸೋಮವಾರ ಓಂಪ್ರಕಾಶ್ ರವರ ಮಗಳು ಕೃತಿಕಾ ಅವರು ಮನೆ ಸಮೀಪದ ನಂದಿನಿ ಪಾರ್ಲರ್ ಬಳಿ ಹೋಗಿದ್ದು ಏನೂ ಖರೀದಿಸಿಲ್ಲ. ಮಳಿಗೆಯಲ್ಲಿದ್ದ ಮಾಲೀಕನನ್ನು ದಿಟ್ಟಿಸಿ ನೋಡುತ್ತಿದ್ದಳು.
ಕೃತಿಕಾಳನ್ನು ಗಮನಿಸಿದ ಮಾಲೀಕ ಏಕೆ ಹೀಗೆ ನೋಡುತ್ತಿದ್ದೀರಾ ಎಂದು ಕೇಳಿದಾಗ ಕೋಪಗೊಂಡ ಆಕೆ ಏಕಾಏಕಿ ಮಳಿಗೆಯಲ್ಲಿದ್ದ ತಿಂಡಿಗಳ ಡಬ್ಬಿಗಳನ್ನು ಒಡೆದು ಹಾನಿ ಮಾಡಿ, ನಂದಿನಿ ಮಳಿಗೆ ಮಾಲೀಕನ ಮೇಲೂ ಹಲ್ಲೆ ನಡೆಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಎನ್ಸಿಆರ್ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.ನಿವೃತ್ತ ಡಿಜಿಪಿ ಓಂಪ್ರಕಾಶ್ ರವರನ್ನು ಕೊಲೆ ಮಾಡಿದ ಆರೋಪದ ಮೇಲೆ ತಾಯಿ ಜೈಲಿನಲ್ಲಿದ್ದಾರೆ. ಅಣ್ಣ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ.
ಹಾಗಾಗಿ ಮನೆಯಲ್ಲಿ ಕೃತಿಕಾ ಒಬ್ಬಳೇ ಇರುವುದರಿಂದ ಆಕೆಗೆ ಒಂದು ರೀತಿ ಒಂಟಿತನ ಕಾಡುತ್ತಿದೆ.ಕೃತಿಕಾಳ ವರ್ತನೆ ನೋಡಿ ಸುತ್ತಮುತ್ತಲಿನ ನಿವಾಸಿಗಳು ಭಯ ಭೀತರಾಗಿದ್ದಾರೆ.
- ಬೈಕ್ ಅಪಘಾತದಲ್ಲಿ ಯೋಗ ಗುರು ವಚನಾನಂದ ಶ್ರೀಗಳ ಸಹೋದರ ಸಾವು
- ಹಾಸನದಲ್ಲಿ ನಿಲ್ಲದ ಹೃದಯಾಘಾತ ಸಾವಿನ ಸರಣಿ, ಮೃತರ ಸಂಖ್ಯೆ 31ಕ್ಕೆ ಏರಿಕೆ
- ಹೃದಯಘಾತಕ್ಕೆ ಕೊರೊನಾ ಲಸಿಕೆ ಕಾರಣ ಎಂಬ ಸಿಎಂ ಹೇಳಿಕೆ ತಪ್ಪು ; ಮಜುಂದಾರ್ ಶಾ
- ಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿದ್ದ ಬಿಬಿಎಂಪಿ ಸಿಬ್ಬಂದಿಗಳ ಅಮಾನತು
- ಸಚಿವ ಕೆ.ಎನ್. ರಾಜಣ್ಣ ಅವರಿಗೆ ನೋಟಿಸ್ ನೀಡುವಂತೆ ಕಾಂಗ್ರೆಸ್ ಶಾಸಕರು ಆಗ್ರಹ