Saturday, July 12, 2025
Homeರಾಜ್ಯಮಹಾರಾಷ್ಟ್ರ : ಬೀಡ್‌ನಲ್ಲಿ ಹೆಚ್ಚಿದ ಬಾಲ್ಯ ವಿವಾಹ, ಗರ್ಭಿಣಿಯಾದ 14 ಬಾಲಕಿಯರು, ತಾಯಿಯಾದ 7 ಅಪ್ರಾಪ್ತರು

ಮಹಾರಾಷ್ಟ್ರ : ಬೀಡ್‌ನಲ್ಲಿ ಹೆಚ್ಚಿದ ಬಾಲ್ಯ ವಿವಾಹ, ಗರ್ಭಿಣಿಯಾದ 14 ಬಾಲಕಿಯರು, ತಾಯಿಯಾದ 7 ಅಪ್ರಾಪ್ತರು

7 births, 14 pregnancies: Underage brides in Beed expose Maharashtra's legal gaps

ಮುಂಬೈ,ಜು.11– ಮಹಾರಾಷ್ಟ್ರದ ಬೀಡ್‌ ಜಿಲ್ಲೆಯು ಕಳೆದ ಏಪ್ರಿಲ್‌ 2024ರಿಂದ ಮಾರ್ಚ್‌ 2025ರ ನಡುವೆ ನಡೆದ ಬಾಲ್ಯ ವಿವಾಹಗಳಲ್ಲಿ 14 ಬಾಲಕಿಯರು ಗರ್ಭಿಣಿಯಾಗಿದ್ದು, ಈ ಪೈಕಿ ಏಳು ಮಂದಿ ಈಗಾಗಲೇ ಮಕ್ಕಳಿಗೆ ಜನ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಪ್ರಕಾಶ್‌ ಅಬಿತ್ಕರ್‌ ಆತಂಕಕಾರಿ ಮಾಹಿತಿ ನೀಡಿದ್ದಾರೆ.

ಕಠಿಣ ಕಾನೂನುಗಳ ಹೊರತಾಗಿಯೂ, ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಬಾಲ್ಯವಿವಾಹ ಇನ್ನೂ ಆಳವಾಗಿ ಬೇರೂರಿದೆ. ಗರ್ಭಧಾರಣೆಯನ್ನು ಅಧಿಕೃತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳಾಗಿ ದಾಖಲಿಸಲಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಮದುವೆ ಎಂದು ಕರೆಯಲ್ಪಡುವುದನ್ನು ಲೆಕ್ಕಿಸದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗಿನ ಯಾವುದೇ ಲೈಂಗಿಕ ಸಂಬಂಧಗಳು ಭಾರತೀಯ ಕಾನೂನಿನಡಿ ಕಾನೂನುಬಾಹಿರವೆಂದು ಅನೇಕ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಸೂಚಿಸುತ್ತಾರೆ. ಈ 14 ಗರ್ಭಧಾರಣೆಗಳನ್ನು ಅಧಿಕೃತವಾಗಿ ಎಣಿಸಲಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಪ್ರಕರಣಗಳು ದಾಖಲಾಗುವುದೇ ಇಲ್ಲ ಅಥವಾ ಸರ್ಕಾರಿ ದಾಖಲೆಗಳನ್ನು ತಲುಪುವುದಿಲ್ಲವಾದ್ದರಿಂದ ಇದರ ಸಂಖ್ಯೆ ಹೆಚ್ಚಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಾಲ್ಯ ವಿವಾಹಗಳ ಮೇಲಿನ ಶಿಸ್ತುಕ್ರಮವನ್ನು ಬಲಪಡಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ರ ಅಡಿಯಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಅಂತಹ ಪ್ರಕರಣಗಳನ್ನು ವರದಿ ಮಾಡಲು ಮತ್ತು ತಡೆಯಲು ಸೂಚನೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಳಮಟ್ಟದಲ್ಲಿ ಬಿಗಿಯಾದ ನಿಗಾ ಇಡಲು, ರಾಜ್ಯಾದ್ಯಂತ ಪ್ರತಿ ಹಳ್ಳಿಯಲ್ಲಿ ಗ್ರಾಮ ಸೇವಕರನ್ನು ಬಾಲ್ಯ ವಿವಾಹ ತಡೆಗಟ್ಟುವ ಅಧಿಕಾರಿಗಳಾಗಿ ಘೋಷಿಸಲಾಗಿದೆ. ಅವರಿಗೆ ಸಹಾಯ ಮಾಡಲು ಅಂಗನವಾಡಿ ಕಾರ್ಯಕರ್ತರನ್ನು ನೇಮಿಸಲಾಗಿದೆ. ನಗರ ಪ್ರದೇಶಗಳಲ್ಲಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕರನ್ನು ಈಗ ಮುಖ್ಯ ಮತ್ತು ಸಹಾಯಕ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಹೆಚ್ಚುವರಿಯಾಗಿ ಪ್ರತಿ ಜಿಲ್ಲೆಯಲ್ಲಿ ಈಗ ಮೀಸಲಾದ ಮಕ್ಕಳ ರಕ್ಷಣಾ ಕೋಶವಿದೆ. ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಗ್ರಾಮ ಸಮುದಾಯ ಭವನಗಳು ಜಾಗೃತಿ ಮೂಡಿಸಲು ಕಡ್ಡಾಯ ಬಾಲ್ಯ ವಿವಾಹ ತಡೆಗಟ್ಟುವ ಪ್ರತಿಜ್ಞೆ ಸಮಾರಂಭಗಳನ್ನು ನಡೆಸುವಂತೆ ಕೇಳಿಕೊಳ್ಳಲಾಗಿದೆ.

ಆದಾಗ್ಯೂ ಈ ಕ್ರಮಗಳು ಕಾಗದದ ಮೇಲಿದ್ದರೂ, ಬೀಡ್‌ ಜಿಲ್ಲೆಯ ಇತ್ತೀಚಿನ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗಲು ಬಡತನ ಮತ್ತು ಹುಡುಗಿಯರಿಗೆ ಶಿಕ್ಷಣದ ಕೊರತೆಯು ಬಾಲ್ಯವಿವಾಹಗಳಿಗೆ ಉತ್ತೇಜನ ನೀಡುತ್ತಲೇ ಇದೆ ಎಂದು ಸ್ಥಳೀಯ ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಿದರೆ ಸಾಲದು ಆಳವಾಗಿ ಬೇರೂರಿರುವ ಇಂತಹ ಸಾಮಾಜಿಕ ಪದ್ಧತಿಗಳನ್ನು ತೊಡೆದು ಹಾಕಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಅಬಿತ್ಕರ್‌ ಹೇಳಿದ್ದಾರೆ.

RELATED ARTICLES

Latest News