Monday, July 14, 2025
Homeರಾಷ್ಟ್ರೀಯ | Nationalಶ್ರಿಂಗ್ಲಾ, ಉಜ್ವಲ್‌, ಸದಾನಂದನ್‌, ಮೀನಾಕ್ಷಿ ರಾಜ್ಯಸಭೆಗೆ

ಶ್ರಿಂಗ್ಲಾ, ಉಜ್ವಲ್‌, ಸದಾನಂದನ್‌, ಮೀನಾಕ್ಷಿ ರಾಜ್ಯಸಭೆಗೆ

Mumbai Blasts Lawyer, Ex Foreign Secretary Among 4 To Get Rajya Sabha Pass

ನವದೆಹಲಿ, ಜು. 13 (ಪಿಟಿಐ) ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾ, 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ವಿಶೇಷ ಸಾರ್ವಜನಿಕ ಅಭಿಯೋಜಕ ಉಜ್ವಲ್‌ ನಿಕಮ್‌‍, ಕೇರಳ ಬಿಜೆಪಿ ನಾಯಕಿ ಸಿ. ಸದಾನಂದನ್‌ ಮಾಸ್ಟರ್‌ ಮತ್ತು ಇತಿಹಾಸಕಾರಿಣಿ ಮೀನಾಕ್ಷಿ ಜೈನ್‌ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ, ರಾಷ್ಟ್ರಪತಿಗಳು ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.ಭಾರತದ ಸಂವಿಧಾನದ ವಿಧಿ 80 ರ ಷರತ್ತು (1) ರ ಉಪ-ಷರತ್ತು (ಎ) ನಿಂದ ನೀಡಲಾದ ಅಧಿಕಾರವನ್ನು ಚಲಾಯಿಸಿ, ಆ ವಿಧಿಯ ಷರತ್ತು (3) ರೊಂದಿಗೆ ಓದಿ, ನಾಮನಿರ್ದೇಶಿತ ಸದಸ್ಯರ ನಿವೃತ್ತಿಯಿಂದ ಉಂಟಾದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಷ್ಟ್ರಪತಿಗಳು ಈ ಕೆಳಗಿನ ವ್ಯಕ್ತಿಗಳನ್ನು ರಾಜ್ಯಗಳ ಮಂಡಳಿಗೆ ನಾಮನಿರ್ದೇಶನ ಮಾಡಿದ್ದಾರೆ.

ಉಜ್ವಲ್‌ ದೇವರಾವ್‌ ನಿಕಮ್‌‍, ಸಿ. ಸದಾನಂದನ್‌ ಮಾಸ್ಟರ್‌, ಹರ್ಷವರ್ಧನ್‌ ಶ್ರಿಂಗ್ಲಾ ಮತ್ತು ಡಾ. ಮೀನಾಕ್ಷಿ ಜೈನ್‌‍, ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ರಾಷ್ಟ್ರಪತಿಗಳು ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ವ್ಯಕ್ತಿಗಳಾದ 12 ಜನರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುತ್ತಾರೆ.

RELATED ARTICLES

Latest News