ಬೆಂಗಳೂರು,ಜು.24-ನಗರದ ಬಸ್ ನಿಲ್ದಾಣದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತರು, ಅವುಗಳ ಮೂಲ ಪತ್ತೆಯ ತನಿಖೆಗಾಗಿ 6 ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಜಿಲೆಟಿನ್ ಮತ್ತು ಡಿಟೋನೇಟರ್ಗಳನ್ನು ಯಾವ ಸ್ಥಳಗಳಿಂದ ತಂದು ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಇಡಲಾಗಿದೆ ಎಂಬ ಬಗ್ಗೆ ಸಿಸಿಬಿ, ಇಂಟೆಲಿಜೆನ್ಸ್ , ಎಟಿಸಿ ತಂಡಗಳು ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಮೇಲ್ನೋಟಕ್ಕೆ ಈ ಸ್ಪೋಟಕ ವಸ್ತುಗಳು ತಿರುಪುರದಲ್ಲಿ ತಯಾರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಸ್ಪೋಟಕ ವಸ್ತುಗಳು ತಯಾರಾದ ಜಾಗ ಮತ್ತು ಖರೀದಿಸಿದ ವ್ಯಕ್ತಿಯ ಬಗ್ಗೆ ಈ ತಂಡಗಳು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಜಿಲೆಟಿನ್ ಕಡ್ಡಿಗಳು ದೊರೆತ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೇರಾಗಳನ್ನು ಪರಿಶೀಲಿಸುತ್ತಿದ್ದಾರೆ.
ಬಸ್ ನಿಲ್ದಾಣದ ಬಳಿ 6 ಜಿಲೆಟಿನ್ ಕಡ್ಡಿಗಳು ಮತ್ತು 1 ಡಿಟೋನೇಟರ್ ಪತ್ತೆಯಾಗಿತ್ತು. ಈ ವಸ್ತುಗಳನ್ನು ಈ ಜಾಗಕ್ಕೆ ತಂದ ವ್ಯಕ್ತಿ ಭಯದಿಂದ ಇಟ್ಟು ಹೋಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಜಿಲೆಟಿನ್ ಮೇಲಿದ್ದ ವಿಳಾಸದ ಆಧಾರದ ಮೇಲೆ ತನಿಖೆ ತೀವ್ರಗೊಳಿಸಿದ್ದಾರೆ.
ಚಲನವಲನ ಸೆರೆ: ಬಸ್ ನಿಲ್ದಾಣದಲ್ಲಿರುವ ಸಿಸಿ ಕ್ಯಾಮೇರಾದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಸಂಪೂರ್ಣ ಚಲನವಲನ ಸೆರೆಯಾಗಿದೆ.ಆ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
- ಎಂಪೈರ್ ಹೋಟೆಲ್ನ ಕಬಾಬ್ ಅನ್ಸೇಫ್ ಅಂತೆ..!
- ತಂದೆಯನ್ನು ಕೃಷ್ಣರಾಜ ಒಡೆಯರ್ಗೆ ಹೋಲಿಸಿದ ಯತೀಂದ್ರಗೆ ಯದುವೀರ್ ತಿರುಗೇಟು
- ನಟ ದರ್ಶನ್ಗೆ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಎಸ್ಕಾರ್ಟ್ : ವಿವಿಐಪಿ ಭದ್ರತೆಗೆ ಆಕ್ಷೇಪ
- ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡುತ್ತಿದೆ CM-DCM ಕಚೇರಿ ಅಧಿಕಾರಿಗಳ ಜಟಾಪಟಿ
- ನಿವೃತ್ತಿ ನಂತರ ಯಾವುದೇ ಹುದ್ದೆ ಸ್ವೀಕರಿಸಲ್ಲ : ಸಿಜೆಐ ಗವಾಯಿ