ಲುಧಿಯಾನ,ಜು.28– ಪಿಕಪ್ ವಾಹನವು ಕಾಲುವೆಗೆ ಉರಳಿ ನಾಲ್ವರು ಸಾವನ್ನಪ್ಪಿರುವ ಘಟನೆ ಪಂಜಾಬ್ನ ಲುಧಿಯಾನ ಜಿಲ್ಲೆಯ ಜಾಗೇರಾ ಸೇತುವೆ ಬಳಿ ನಡೆದಿದೆ.ಹಿಮಾಚಲ ಪ್ರದೇಶದ ಮಾತಾ ನೈನಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ಸುಮಾರು 25 ಭಕ್ತರ ಗುಂಪು ವಾಪಸಾಗುವ ವೇಳೆ ರಾತ್ರಿ ಸಿರ್ಹಿಂದ್ ಕಾಲುವೆಗೆ ಬಿದ್ದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ.ಕಾಲುವೆಯ ದಂಡೆಯಲ್ಲಿ ಮತ್ತೊಂದು ವಾಹನವನ್ನು ಹಿಂದಿಕ್ಕುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದೆ ಉಪ ಪೊಲೀಸ್ ಆಯುಕ್ತ ಹಿಮಾಂಶು ಜೈನ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜ್ಯೋತಿ ಯಾದವ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
ಹೆಚ್ಚಿನ ಭಕ್ತರನ್ನು ರಕ್ಷಿಸಲಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಆದಾಗ್ಯೂ, ಅಧಿಕಾರಿಗಳ ಪ್ರಕಾರ, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ.
ಈವರೆಗೆ ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
- BREKING : ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಇಲ್ಲಿದೆ ಪುರಸ್ಕೃತರ ಪಟ್ಟಿ
- ಡೇಟಿಂಗ್ ಚೀಟಿಂಗ್ : ಮಹಿಳೆಯ ಅಂದಕ್ಕೆ ಮರುಳಾಗಿ 32 ಲಕ್ಷ ರೂ. ಹಣ ಕಳೆದುಕೊಂಡ ವೃದ್ಧ..!
- ಆನ್ಲೈನ್ ಚಟಕ್ಕೆ ಬಿದ್ದು ಅನ್ನ ಹಾಕಿದ ಮನೆಗೆ ಖನ್ನ ಹಾಕಿದ ಮನೆಗೆಲಸದಾಕೆ
- ಡಿಸಿಎಂ ಡಿ.ಕೆ. ಶಿವಕುಮಾರ್ ಕನಸಿನ ಸುರಂಗ ಮಾರ್ಗ ಯೋಜನೆಗೆ ಎದುರಾಯ್ತು ವಿಘ್ನ
- ಡಾಲರ್ ಎದುರು 21 ಪೈಸೆ ಕುಸಿತ ಕಂಡ ರೂಪಾಯಿ
