ದೊಡ್ಡಬಳ್ಳಾಪುರ,ಜು.29- ದಾಳಿಗೆ ಬಂದ ಚಿರತೆ ಸಾಕು ನಾಯಿಗಳ ಆರ್ಭಟಕ್ಕೆ ಬೆದರಿ ಪರಾರಿಯಾಗಿರುವ ಘಟನೆ ತಾಲೂಕಿನ ಮಾಕಳಿ ಬಳಿ ನಡೆದಿದೆ.ಬೆಂಗಳೂರು ಮೂಲದ ಸುರೇಂದ್ರ ಎನ್ನುವವರಿಗೆ ಸೇರಿದ ತೋಟದಲ್ಲಿರುವ ಸಾಕು ನಾಯಿಗಳ ಮೇಲೆ ಚಿರತೆ ದಾಳಿ ನಡೆಸಲು ಪದೇ ಪದೇ ಪ್ರಯತ್ನ ನಡೆಸಿದೆ. ಆದರೆ ನಾಯಿಗಳ ಆರ್ಭಟಕ್ಕೆ ಚಿರತೆಯ ದಾಳಿ ಯತ್ನ ವಿಫಲವಾಗಿದೆ.
ಈ ದೃಶ್ಯ ತೋಟದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ದೊಡ್ಡಬಳ್ಳಾಪುರ ತಾಲೂಕಿನ ಘಾಟಿ, ಮಾಕಳಿ, ಉಜ್ಜನಿ, ಹುಲುಕುಡಿ ಬೆಟ್ಟದ ಸಾಲಿನಲ್ಲಿ ವನ್ಯಜೀವಿಗಳು ಹೆಚ್ಚಾಗಿದ್ದು, ಇತ್ತೀಚಿಗೆ ಬೆಟ್ಟಕ್ಕೆ ಸಮೀಪದ ತೋಟಗಳಿಗೆ ನುಗ್ಗಿ ಹಾವಳಿ ಸೃಷ್ಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
- ಬೆಂಗಳೂರಲ್ಲಿ ಹೆಚ್ಚುತ್ತಲೇ ಇವೆ ರೋಡ್ರೇಜ್ ಪ್ರಕರಣಗಳು
- ಒಂಟಿ ಮಹಿಳೆಯರ ಸರ ಎಗರಿಸುತ್ತಿದ್ದ ಕುಖ್ಯಾತ ಐದು ಮಂದಿ ಸರಗಳ್ಳರ ಬಂಧನ
- ಕನ್ನಡ ಭಾಷೆ ಮೇಲ್ದರ್ಜೆಗೆ ಹೊಸ ನೀತಿ : ಸಿಎಂ ಸಿದ್ದರಾಮಯ್ಯ
- ಕಲಬುರಗಿ ಜಲ್ಲೆಯ ಸಮಸ್ತ ಅಭಿವೃದ್ದಿಗೆ ನೀಲಿ ನಕ್ಷೆ ರೆಡಿಯಾಗಿದೆ : ಸಚಿವ ಪ್ರಿಯಾಂಕ್ ಖರ್ಗೆ
- ಆಂಧ್ರಪ್ರದೇಶದ ಶ್ರೀಕಾಕುಳಂ ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ, 10 ಮಂದಿ ಸಾವು
