ಬೆಂಗಳೂರು,ಜು.31-ಕೌಟುಂಬಿಕ ಕಲಹದಿಂದ ಮನನೊಂದ ಪತ್ನಿ ತನ್ನ ಕರಳ ಕುಡಿಗೆ ವಿಷ ಕುಡಿಸಿ ನಂತರ ತಾನೂ ಕುಡಿದು ಆತಹತ್ಯೆಗೆ ಯತ್ನಿಸಿದ್ದು, ದುರದೃಷ್ಟವಶಾತ್ ಮಗು ಮೃತಪಟ್ಟಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ಒಂದು ವರ್ಷ ಎಂಟು ತಿಂಗಳ ಹೆಣ್ಣು ಮಗು ಮೃತಪಟ್ಟಿದ್ದು, ತಾಯಿ ಚಂದ್ರಿಕಾ (26) ಸ್ಥಿತಿ ಗಂಭೀರವಾಗಿದೆ.ತಿಗಳರಪಾಳ್ಯದಲ್ಲಿ ಲೋಕೇಶ್ – ಚಂದ್ರಿಕಾ ದಂಪತಿ ವಾಸವಾಗಿದ್ದು,
ಇವರಿಗೆ ಒಂದು ಮಗುವಿದೆ. ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಜಗಳವಾಗಿದೆ. ನಿನ್ನೆ ಲೋಕೇಶ್ ಅವರು ಕೆಲಸಕ್ಕೆ ಹೋಗಿದ್ದಾಗ, ಗಂಡನ ಮೇಲಿನ ಕೋಪಕ್ಕೆ ಚಂದ್ರಿಕಾ ಕ್ರಿಮಿನಾಶಕವನ್ನು ಟೀ ಯಲ್ಲಿ ಬೆರೆಸಿ ಅದನ್ನು ಮೊದಲು ಮಗುವಿಗೆ ಕುಡಿಸಿ ನಂತರ ತಾನೂ ಸೇವಿಸಿದ್ದಾರೆ.
ಹೊಟ್ಟೆ ನೋವಿನಿಂದ ಚಂದ್ರಿಕಾ ಕೂಗಾಡುತ್ತಿದ್ದಾಗ ಅಕ್ಕಪಕ್ಕದವರು ಬಂದು ನೋಡಿ ತಕ್ಷಣ ತಾಯಿ ಮಗುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.ವೈದ್ಯರು ಮಗುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಚಂದ್ರಿಕಾ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಈ ಬಗ್ಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
- ಮನೆಗಳ್ಳತನ : ಇಬ್ಬರು ರೌಡಿ ಸೇರಿ ಮೂವರ ಸೆರೆ, 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
- ಮುಸಲ್ಮಾನರ ವಿಷಯಗಳು ಇಲ್ಲದಿದ್ದರೆ ಬಿಜೆಪಿ ರಾಜಕೀಯ ಮಾಡಲು ಸಾಧ್ಯವಿಲ್ಲ : ಸಂತೋಷ್ಲಾಡ್ ಕಿಡಿ
- ಕ್ರಿಶ್ಚಿಯನ್ ಧರ್ಮದ ಜತೆ ಜಾತಿ ಸೇರ್ಪಡೆ : ತೀವ್ರಗೊಂಡ ವಿವಾದ, ರಾಜ್ಯಪಾಲರಿಗೆ ಬಿಜೆಪಿ ದೂರು
- ಮತ್ತೆ ಮುನ್ನೆಲೆಗೆ ಬಂದ ಪರಿಶಿಷ್ಟ ಪಂಗಡದ ಪಟ್ಟಿಗೆ ಕುರುಬ ಜನಾಂಗ ಸೇರ್ಪಡೆ ವಿವಾದ
- BREAKING : ಮಾಲೂರು ಶಾಸಕ ಕಾಂಗ್ರೆಸ್ ನಂಜೇಗೌಡ ಆಯ್ಕೆ ಅಸಿಂಧು, ಕೋರ್ಟ್ ಮಹತ್ವದ ತೀರ್ಪು