ಬೆಂಗಳೂರು,ಅ.1- ಪದಭೂಷಣ ಡಾ.ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ(92)ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಗಾಜನೂರಿನ ಮನೆಯಲ್ಲಿ ವಾಸವಾಗಿದ್ದ ನಾಗಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಇಂದು ಕೊನೆಯುಸಿರೆಳೆದಿದ್ದಾರೆ.
ಶಿವಣ್ಣ ದಂಪತಿ ಇತೀಚೆಗಷ್ಟೇ ನಾಗಮ ಅವರನ್ನ ಭೇಟಿಯಾಗಿದ್ದರು.ಸದ್ಯಗೋವಾದಲ್ಲಿರುವ ನಟ ಶಿವಣ್ಣ ಬೆಂಗಳೂರಿನತ್ತ ಬರುತ್ತಿದ್ದಾರೆ ಕುಟುಂಬ ಮೂಲಗಳು ತಿಳಿಸಿವೆ . ಸದ್ಯ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನಿತ್ ರಾಜ್ಕುಮಾರ್ ಹಾಗು ಕುಟುಂಬ ಸದಸ್ಯರು ಗಾಜಾನುರಿಗೆ ತೆರಳಿದ್ದಾರೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ ಹಲವರು ಕಲಾವಿದರು ನಾಗಮ ನಿಧನಕ್ಕೆ ಕಂಬನಿ ಮಡಿದಿದ್ದಾರೆ.
ಡಾ.ರಾಜ್ಕುಮಾರ್ ಅವರಿಗೆ ಅಚ್ಚುಮೆಚ್ಚನ ಸಹೋದರಿಯಾಗಿದ್ದ ನಾಗಮ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದರು,ಕುಟುಂಬದ ಆಧಾರವಾಗಿದ್ದರು.ಪುನಿತ್ ರಾಜ್ಕುಮಾರ್ರನ್ನು ಅಡಿಸಿ ಬೆಳೆಸಿದ್ದರು,ಪುನಿತ್ ನಿಧನದ ವೇಳೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.ಚಿತ್ರರಂಗದ ಗಣ್ಯರು,ರಾಜ್ ಅಭಿಮಾನಿಗಳು ಸಹ ಈ ಗಾಜನೂರಿನತ್ತ ತೆರಳುತ್ತಿದ್ದಾರೆ.
- ವಿಚಾರಣೆಗೆ ಹಾಜರಾಗುವಂತೆ ಮಹೇಶ್ ತಿಮರೋಡಿ ಮನೆಗೆ ನೋಟೀಸ್ ಅಂಟಿಸಿದ ಪೊಲೀಸರು
- ಕಸದ ಲಾರಿ ಚಾಲಕರ ಪ್ರತಿಭಟನೆ, ಗಬ್ಬೆದ್ದು ನಾರಲಿದೆ ಸಿಲಿಕಾನ್ ಸಿಟಿ ಬೆಂಗಳೂರು
- ರಾಜ್ಯದಲ್ಲಿ ಸೆ.24ರವರೆಗೆ ಮುಂದುವರೆಯಲಿದೆ ಮಳೆ
- ಕೇರಳ ವಿಧಾನಸಭೆಯ ಕಲಾಪಗಳ ಮಧ್ಯೆಯೇ ಸಚಿವ ಶಿವನ್ಕುಟ್ಟಿ ಅಸ್ವಸ್ಥ
- ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಕ್ಕೆ ಯುವಕ ಆತ್ಮಹತ್ಯೆ