Sunday, August 17, 2025
Homeಜಿಲ್ಲಾ ಸುದ್ದಿಗಳು | District Newsಮಂಡ್ಯ | Mandyaಚಿನ್ನದ ಅಂಗಡಿ ಕಳ್ಳತನ ತಡೆಯಲು ಹೋದ ಹೋಟೆಲ್‌ ಮಾಲೀಕನನ್ನುಇರಿದು ಕೊಂದ ದುಷ್ಕರ್ಮಿಗಳು

ಚಿನ್ನದ ಅಂಗಡಿ ಕಳ್ಳತನ ತಡೆಯಲು ಹೋದ ಹೋಟೆಲ್‌ ಮಾಲೀಕನನ್ನುಇರಿದು ಕೊಂದ ದುಷ್ಕರ್ಮಿಗಳು

Hotel owner stabbed to death by miscreants who had gone to stop a gold shop robbery

ಮಂಡ್ಯ,ಆ.17- ಚಿನ್ನದ ಅಂಗಡಿಯಲ್ಲಿನ ಕಳುವು ಮಾಡಲು ಬಂದ ದುಷ್ಕರ್ಮಿಗಳನ್ನು ತಡೆಯಲು ಹೋದ ಹೋಟೆಲ್‌ ಮಾಲೀಕನನ್ನುಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮಳವಳಿ ್ಳತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ಕಿರುಗಾವಲು ಗ್ರಾಮದ ನಿವಾಸಿ ಹೋಟೆಲ್‌ ನಡೆಸುತ್ತಿದ್ದ ಮಹಾದೇವಪ್ಪ (75) ಕೊಲೆಗೀಡಾದ ವ್ಯಕ್ತಿ.

ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕಳೆದ ವಾರ ಸರಣಿ ಕಳ್ಳತನ ನಡೆದಿದ್ದು ಆರೋಪಿ ಬಂಧಿಸಿವುದರ ಒಳಗೆ ಗ್ರಾಮದ ಮುಖ್ಯ ವೃತ್ತದ ಬಳಿ ಇರುವ ಮಹಾಲಕ್ಷ್ಮಿ ಜ್ಯುಯಲರಿ ಹಾಗೂ ಬ್ಯಾಂಕರ್‌ರ‍ಸಅಂಗಡಿ ಬೀಗ ಮುರಿದು ನಾಲ್ಕೈದು ಮಂದಿ ದುಷ್ಕರ್ಮಿಗಳು ಕಳುವು ಮಾಡುತ್ತಿರುವಾಗ ಶಬ್ದ ಕೇಳಿ ಆಗಷ್ಟೇ ಹೋಟೆಲ್‌ ಬಾಗಿಲು ತೆಗೆದಿದ್ದ ಮಹಾದೇವಪ್ಪ ದುಷ್ಕರ್ಮಿಗಳನ್ನು ತಾರು ಎಂದು ಪ್ರಶ್ನಿಸಿದ್ದಾರೆ.

ನಂತರ ಹಿಡಿಯಲು ಹೋದಾಗ ಮಹಾದೇವಪ್ಪ ಅವರ ಮೇಲೆ ಎರಗಿದ ದುಷ್ಕರ್ಮಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದರ ಜೊತೆಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 150 ಗ್ರಾಂ ಚಿನ್ನ 2 ಕೆ ಜಿ ಬೆಳ್ಳಿ .ಹಿತ್ತಾಳೆ, ಪದಾರ್ಥಗಳ ಜೊತೆಗೆ ಸುಮಾರು 30 ಸಾವಿರ ಮೌಲ್ಯದ ಕೃತಕ ಚಿನ್ನದ ಒಡವೆಗಳನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಜೊತೆಗೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಹಾರ್ಡ್‌ ಡಿಸ್ಕ್‌ ಗಳನ್ನು ಸಹ ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಚಿನ್ನದ ಅಂಗಡಿ ಮಾಲೀಕ ಶೇಷರಾವ್‌ ತಿಳಿಸಿದ್ದಾರೆ.

ಸುದ್ದಿ ತಿಳಿದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚವರಿ ಪೊಲೀಸ್‌‍ ವರಿಷ್ಠಾಧಿಕಾರಿ ತಿಮ್ಮಯ್ಯ, ಗಂಗಾಧರ್‌ ಸ್ವಾಮಿ,ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್‌, ಪಿಎಸ್‌‍ಐ ರವಿಕುಮಾರ್‌ ಭೇಟೆ ನೀಡಿ ಪರಿಶೀಲನೆ ನಡೆಸಿದ್ದಾರೆಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Latest News