ನವದೆಹಲಿ,ಆ.21-ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಗಂಭೀರ ದೈಹಿಕ ಗಾಯಗಳಾಗಿದ್ದು, ದಾಳಿಯ ನಂತರ ಅವರು ಆಘಾತ ಸ್ಥಿತಿಯಲ್ಲಿದ್ದರು ಆದರೆ ಅವರು ತಮ ನಿವಾಸದಿಂದಲೇ ಕೆಲಸ ಮಾಡುತ್ತಿದ್ದರು ಎಂದು ಸಚಿವ ಕಪಿಲ್ ಮಿಶ್ರಾ ತಿಳಿಸಿದ್ದಾರೆ.
ಗುಪ್ತಾ ಮೇಲಿನ ದಾಳಿಯನ್ನು ಯೋಜಿತ ಪಿತೂರಿಯ ಎಂದು ಅವರು ಪುನರುಚ್ಚರಿಸಿದ್ದು , ಆರೋಪಿಯು ಗಂಭೀರ ಅಪರಾಧಗಳ ಇತಿಹಾಸ ಹೊಂದಿರುವ ವೃತ್ತಿಪರ ಅಪರಾಧಿ ಎಂದು ಹೇಳಿದ್ದಾರೆ.
ಮನೆಯಲ್ಲಿ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಅವರಿಗೆ ವಿಶ್ರಾಂತಿ ಬೇಕು. ಅವರ ದೈಹಿಕ ಗಾಯಗಳು ಗಂಭೀರವಾಗಿವೆ ಮತ್ತು ಅವರು ಆಘಾತದ ಸ್ಥಿತಿಯಲ್ಲಿದ್ದಾರೆ ಎಂದು ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.
ಆರೋಪಿಯ ವಿರುದ್ಧ ಕೊಲೆ ಯತ್ನ ಮತ್ತು ಕಳ್ಳಸಾಗಣೆ ಆರೋಪ ಸೇರಿದಂತೆ ಒಂಬತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ಹೇಳಿದ್ದಾರೆ. ದಾಳಿಯನ್ನು ಯೋಜಿತ ರೀತಿಯಲ್ಲಿ ನಡೆಸಲಾಗಿದೆ, ಆರೋಪಿ ದಾಳಿ ನಡೆಸಿದಾಗ ಅವರ ಫೋನ್ನಿಂದ ವಶಪಡಿಸಿಕೊಂಡ ನಂತರ ಅದರಲ್ಲಿದ್ದ ಎರಡು ವೀಡಿಯೊಗಳು ಇದನ್ನು ಸಾಬೀತುಪಡಿಸುತ್ತವೆ ಎಂದು ಅವರು ಹೇಳಿದರು.
- ದೆಹಲಿ ಸಿಎಂ ರೇಖಾ ಗುಪ್ತಾಗೆ ಝಡ್+ ಭದ್ರತೆ
- ಏರ್ಶೋಗೆ ಅನುಮತಿ ನೀಡಿದ ರಾಜನಾಥ್ಸಿಂಗ್ಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
- ಮಾಜಿ ಪ್ರಧಾನಿ ಹೆಚ್ಡಿಡಿ ನಿವಾಸಕ್ಕೆ ಎನ್ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ ಭೇಟಿ
- ಐಸಿಸ್ ಉಗ್ರರಿಗೆ ವರದಾನವಾದ ಸಿರಿಯಾ, ಆಫ್ರಿಕಾ ಅಸ್ಥಿರತೆ
- ಶಾಂತಿ ಸೌಹಾರ್ದತೆಯಿಂದ ಗೌರಿ ಗಣೇಶ -ಈದ್ ಮಿಲಾದ್ ಹಬ್ಬ ಆಚರಿಸಿ : ಡಿಸಿಪಿ ಸಜೀತ್