ಬೆಂಗಳೂರು,ಆ.22- ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಆರ್.ರಾಮಯ್ಯ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು.ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಆರ್.ರಾಮಯ್ಯ ನಿಧನರಾಗಿರುವುದನ್ನು ಸದನಕ್ಕೆ ವಿಷಾದದಿಂದ ತಿಳಿಸಿದರು.
ಆರ್.ರಾಮಯ್ಯ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ 1946 ರ ಮೇ 22ರಂದು ಜನಿಸಿದ್ದರು. ವಿಶ್ವವಿದ್ಯಾಲಯದ ಮಟ್ಟದವರೆಗೆ ವಿದ್ಯಾಭ್ಯಾಸ ಮಾಡಿದ್ದ ಶ್ರೀಯುತರು ವೃತ್ತಿಯಲ್ಲಿ ಕೃಷಿಕರಾಗಿದ್ದರು.
ಅಮೆಚೂರ್ ಕಲಾವಿದರಾಗಿದ್ದ ಅವರು 1985ರಲ್ಲಿ ಹಿರಿಯೂರು ಕ್ಷೇತ್ರದಿಂದ ಎಂಟನೇ ವಿಧಾನಸಭೆಗೆ ಚುನಾಯಿತರಾಗಿದ್ದರು ಎಂದು ಸರಿಸಿದರು.ಹಿರಿಯ ಸಜ್ಜನ ರಾಜಕಾರಣಿ ಆರ್.ರಾಮಯ್ಯ ಅವರು ನಿನ್ನೆ ನಿಧನ ಹೊಂದಿರುತ್ತಾರೆ. ಅವರ ಆತಕ್ಕೆ ಚಿರ ಶಾಂತಿ ಕೋರುವುದಾಗಿ ಅವರು ತಿಳಿಸಿದರು.ಬಳಿಕ ಸದನದ ಮೌನಾಚರಣೆ ಸಲ್ಲಿಸುವ ಮೂಲಕ ರಾಮಯ್ಯ ಅವರ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು.
- ಅಮೆರಿಕದ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
- ಶೇ.5.5 ರಷ್ಟು ಶುಲ್ಕದೊಂದಿಗೆ ಬೆಂಗಳೂರಿನಲ್ಲಿರುವ ‘ಬಿ’ ಖಾತೆಗಳನ್ನು ‘ಎ’ ಖಾತೆಗಳಾಗಿ ಪರಿವರ್ತನೆ : ಡಿಕೆಶಿ
- ನಾನು ಕ್ರಿಕೆಟ್ ಫಾಲೋವರ್ ಅಷ್ಟೇ..ಫ್ಯಾನ್ ಅಲ್ಲ : ಸಿಎಂ ಸಿದ್ದರಾಮಯ್ಯ
- ಕ್ರಿಕೆಟ್ಗೆ ವಿದಾಯ ಘೋಷಿಸಿದ ಭಾರತ ಮಹಿಳಾ ತಂಡದ ಗೌಹರ್ ಸುಲ್ತಾನ
- ಕೊಲಂಬಿಯಾದಲ್ಲಿ ಕಾರ್ ಬಾಂಬ್ ಮತ್ತು ಪೊಲೀಸ್ ಹೆಲಿಕಾಪ್ಟರ್ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ 13 ಮಂದಿ ಬಲಿ