Monday, August 25, 2025
Homeರಾಷ್ಟ್ರೀಯ | Nationalಎಲ್‌ಪಿಜಿ ಟ್ಯಾಂಕ್‌ ಸ್ಫೋಟಗೊಂಡು 7 ಮಂದಿ ಸಜೀವ ದಹನ

ಎಲ್‌ಪಿಜಿ ಟ್ಯಾಂಕ್‌ ಸ್ಫೋಟಗೊಂಡು 7 ಮಂದಿ ಸಜೀವ ದಹನ

7 killed, 15 hurt as LPG tanker explodes after collision in Punjab's Mandiala

ಜಲಂಧರ್‌,ಆ.24- ಹೋಶಿಯಾರ್ಪುರ-ಜಲಂಧರ್‌ ರಸ್ತೆಯ ಮಂಡಿಯಾಲ ಅಡ್ಡಾ ಬಳಿ ಪಿಕಪ್‌ ವಾಹನಕ್ಕೆ ಡಿಕ್ಕಿ ಹೊಡೆದು ಎಲ್‌ಪಿಜಿ ಟ್ಯಾಂಕರ್‌ ಸ್ಫೋಟಗೊಂಡಿರುವ ಘಟನೆ ತಡರಾತ್ರಿ ನಡೆದಿದ್ದು, ದುರಂತದಲ್ಲಿ ಏಳು ಜನರು ಸಾವನ್ನಪ್ಪಿದ್ದು 15 ಮಂದಿಗೆ ಸುಟ್ಟಗಾಯಗಳಾಗಿವೆ.

ಮೃತರನ್ನು ಸುಖ್‌ಜೀತ್‌ ಸಿಂಗ್‌ (ಚಾಲಕ), ಬಲ್ವಂತ್‌ ರೈ, ಧರ್ಮೇಂದರ್‌ ವರ್ಮಾ, ಮಂಜಿತ್‌ ಸಿಂಗ್‌, ವಿಜಯ್‌, ಜಸ್ವಿಂದರ್‌ ಕೌರ್‌ ಮತ್ತು ಆರಾಧನಾ ವರ್ಮಾ ಎಂದು ಗುರುತಿಸಲಾಗಿದೆ.ಬಲ್ವಂತ್‌ ಸಿಂಗ್‌, ಹರ್ಬನ್‌್ಸ ಲಾಲ್‌, ಅಮರಜೀತ್‌ ಕೌರ್‌, ಸುಖಜೀತ್‌ ಕೌರ್‌, ಜ್ಯೋತಿ, ಸುಮನ್‌, ಗುರುಮುಖ್‌ ಸಿಂಗ್‌, ಹರ್‌ಪ್ರೀತ್‌ ಕೌರ್‌, ಕುಸುಮಾ, ಭಗವಾನ್‌ ದಾಸ್‌‍, ಲಾಲಿ ವರ್ಮಾ, ಸೀತಾ, ಅಜಯ್‌, ಸಂಜಯ್‌, ರಾಘವ್‌ ಮತ್ತು ಪೂಜಾ ಅವರುಗಳು ಗಾಯಾಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದು, ಇವರಲ್ಲಿ ಕೆಲವರು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ) ಮತ್ತು 324(4) (ಆಸ್ತಿಗೆ ಹಾನಿ ಉಂಟುಮಾಡುವ ದುಷ್ಕೃತ್ಯ)ರಡಿ ಎಫ್‌ಐಆರ್‌ ದಾಖಲಿಸಲಾಗಿದೆ.
ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದು, ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪಂಜಾಬ್‌ ರಾಜ್ಯಪಾಲ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್‌ ಚಂದ್‌ ಕಟಾರಿಯಾ ಘಟನೆಗೆ ದುಃಖ ವ್ಯಕ್ತಪಡಿಸಿ, ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಅನೇಕರಿಗೆ ಗಾಯಗಳನ್ನುಂಟು ಮಾಡಿದ ದುರಂತದ ಬಗ್ಗೆ ತಿಳಿದು ತುಂಬಾ ನೋವಾಗಿದೆ. ಈ ವಿನಾಶಕಾರಿ ಅಪಘಾತದಲ್ಲಿ ತಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.

ಪರಿಹಾರ ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಡಿಯಾಲ ಮತ್ತು ಪಕ್ಕದ ಹಳ್ಳಿಗಳ ನಿವಾಸಿಗಳು ಮೂರು ಗಂಟೆಗಳಿಗೂ ವಾಹನಗಳನ್ನು ತಡೆದು ಹೆಚ್ಚು ಕಾಲ ಧರಣಿ ನಡೆಸಿದ್ದಾರೆ.ಎಸ್‌‍ಡಿಎಂ ಗುರುಸಿಮ್ರನ್‌ಜೀತ್‌ ಕೌರ್‌ ಅವರು, ಪರಿಹಾರ ನೀಡಲಾಗುವುದು ಮತ್ತು ಹೊಣೆಗಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಗಿದೆ.

ಸಂಪುಟ ಸಚಿವ ಡಾ. ರವಜೋತ್‌ ಸಿಂಗ್‌, ಶಾಸಕ ಬ್ರಾಮ್‌ ಶಂಕರ್‌ ಜಿಂಪಾ, ಸಂಸದ ರಾಜ್‌ ಕುಮಾರ್‌ ಚಬ್ಬೇವಾಲ್‌ ಮತ್ತು ಜಿಲ್ಲಾಧಿಕಾರಿ ಆಶಿಕಾ ಜೈನ್‌ ಅವರು ಮೃತರ ಕುಟುಂಬಗಳಿಗೆ ಸ್ವಾಂತ್ವಾನ ಹೇಳಿದ್ದಾರೆ.ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಕನಿಷ್ಠ 1 ಕೋಟಿ ರೂ. ಪರಿಹಾರ ನೀಡಬೇಕು, ಹಾನಿಗೊಳಗಾದ ಮನೆಗಳು ಮತ್ತು ಅಂಗಡಿಗಳಿಗೆ ಸಂಪೂರ್ಣ ನಷ್ಟಭರಿಸಬೇಕೆಂದು ಎಂದು ಪಂಜಾಬ್‌ ಕಾಂಗ್ರೆಸ್‌‍ ಮುಖ್ಯಸ್ಥ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ ಅವರು ಆಗ್ರಹಿಸಿದ್ದಾರೆ.

RELATED ARTICLES

Latest News