ಹನೂರು, ಆ.31– ತಾಲ್ಲೂಕಿನ ಗುಳ್ಳದ ಬಯಲು ಬಳಿಯ ಕೃಷಿ ಜಮೀನಿನ ನೀರಿನ ಹೊಂಡದಲ್ಲಿ ಪುರುಷ ಹಾಗೂ ಮಹಿಳೆಯ ಶವ ಪತ್ತೆಯಾಗಿದೆ. ಮೃತರನ್ನು ಮೀನಾಕ್ಷಿ (38) ಹಾಗೂ ರವಿ (40) ಎಂದು ಗುರುತಿಸಲಾಗಿದೆ.
ಇವರನ್ನು ಕೊಲೆ ಮಾಡಲಾಗಿದೆಯೇ ಅಥವಾ ಆತಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಹನೂರು ಠಾಣೆ ಪೊಲೀಸರು ತಿಳಿಸಿದ್ದಾರೆ.ಇಂದು ಬೆಳಗ್ಗೆ ರೈತರೊಬ್ಬರು ತಮ ಜಮೀನಿಗೆ ಬಂದು ನೋಡಿದಾಗ ಇಬ್ಬರ ಶವಗಳು ತೇಲುತ್ತಿದ್ದವು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಅವರು ಶವಗಳನ್ನು ಮೇಲೆತ್ತಿದ್ದಾಗ ಇವರಿಬ್ಬರು ಇದೇ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಶವದ ಮೇಲೆ ಗಾಯದ ಗುರುತುಗಳಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಇವರಿಬ್ಬರಿಗೂ ವಿವಾಹವಾಗಿದ್ದು, ಇಲ್ಲಿಗೆ ಹೇಗೆ ಬಂದರು ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಾರೆ.
- ಕೇವಲ 4 ನಿಮಿಷದಲ್ಲಿ ನೆಪೋಲಿಯನ್ ಕಿರೀಟದ ಆಭರಣಗಳನ್ನು ಕದ್ದ ಕಳ್ಳನ ಕೈಚಳಕಕ್ಕೆ ಫಿದಾ ಆದ ಸಚಿವೆ..!
- ಓಲಾ ಕಂಪನಿ ನೌಕರ ಆತ್ಮಹತ್ಯೆ ಪ್ರಕರಣ : ಕಂಪನಿ ಸಿಇಓ, ಹಿರಿಯ ಅಧಿಕಾರಿ ವಿರುದ್ಧ ಎಫ್ಐಆರ್
- ದೀಪಾವಳಿ ಮೊದಲ ದಿನವೇ ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ
- ಆರ್ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ : ಸರ್ಕಾರದ ವಿರುದ್ಧ ಶೆಟ್ಟರ್ ವಾಗ್ದಾಳಿ
- ಹಾಸನಾಂಬ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಭೀಕರ ಅಫಘಾತ : ಇಬ್ಬರ ಸಾವು