ಬೆಳ್ತಂಗಡಿ,ಸೆ.5– ಬುರುಡೆ ಪ್ರಕರಣ ಸಂಬಂಧ ಹೋರಾಟಗಾರ ಜಯಂತ್ ಟಿ ಅವರನ್ನು ಎಸ್ಐಟಿ ಇಂದು ಬೆಳಗಿನ ಜಾವದವರೆಗೂ ವಿಚಾರಣೆ ನಡೆಸಿ, ಹಲವು ಮಾಹಿತಿಗಳನ್ನು ಪಡೆದುಕೊಂಡಿದೆ.
ನಿನ್ನೆ ಸಂಜೆ ವಿಚಾರಣೆಗೆ ಜಯಂತ್ ಒಂದು ಬ್ಯಾಗ್ ಜೊತೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಹಾಜರಾದರು. ಎಸ್ಐಟಿ ಅಧಿಕಾರಿಗಳು ಇಂದು ಬೆಳಗಿನ ಜಾವ 2.30ರವರೆಗೂ ವಿಚಾರಣೆ ಮಾಡಿ, ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ವಾಪಸ್ ಕಳುಹಿಸಿದ್ದಾರೆ.
ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಸಂದ್ರದ ಬಾಡಿಗೆ ಮನೆಯಲ್ಲಿ ವಾಸವಿರುವ ಜಯಂತ್ ಮನೆಯಲ್ಲಿ ಎಸ್ಐಟಿ ಇತ್ತೀಚೆಗೆ ಮಹಜರು ನಡೆಸಿ ಅವರ ಕುಟುಂಬ ಸದಸ್ಯರ ಮೊಬೈಲ್ಗಳನ್ನು ವಶಕ್ಕೆ ಪಡೆದಿದೆ. ಆ ಸಂದರ್ಭದಲ್ಲಿ ಜಯಂತ್ ಮನೆಯಲ್ಲಿರಲಿಲ್ಲ.ಬುರುಡೆ ಚಿನ್ನಯ್ಯ ಮಲ್ಲಸಂದ್ರದ ಜಯಂತ್ ಟಿ ಅವರ ಮನೆಯಲ್ಲಿ ಎರಡು ದಿನ ಬುರುಡೆ ಜೊತೆ ತಂಗಿದ್ದನೆಂಬ ಮಾಹಿತಿ ಮೇರೆಗೆ ಅವರ ಮನೆ ಮಹಜರು ನಡೆಸಲಾಯಿತು.
ಮಾರನೇ ದಿನ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ನಲ್ಲಿರುವ ಸರ್ವೀಸ್ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ತಂಗಿದ್ದಾಗಿ ಚಿನ್ನಯ್ಯ ಹೇಳಿದ್ದರಿಂದ ಆ ಅಪಾರ್ಟ್ಮೆಂಟ್ನಲ್ಲೂ ಸಹ ಎಸ್ಐಟಿ ಮಹಜರು ನಡೆಸಿ ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿದೆ.
ನಿನ್ನೆ ಸಂಜೆ ಜಯಂತ್ ಟಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸೂಚಿಸಿದ್ದರಿಂದ ಬ್ಯಾಗ್ನಲ್ಲಿ ಕೆಲವೊಂದು ದಾಖಲಾತಿಗಳನ್ನು ಇಟ್ಟುಕೊಂಡು ವಿಚಾರಣೆಗೆ ಹಾಜರಾಗಿದ್ದರು.
- ಬೆಂಗಳೂರಲ್ಲಿ ಸ್ಪೋಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ತನಿಖೆಗೆ ಆಗ್ರಹ
- ಎ-ಖಾತಾ ಪರಿವರ್ತನೆ ನೆಪದಲ್ಲಿ ಲೂಟಿ ಮಾಡುತ್ತಿದೆ ಸರ್ಕಾರ : ಹೆಚ್ಡಿಕೆ ಆರೋಪ
- ಅದಾನಿ ಗ್ರೂಪ್ಗೆ ಲಾಭ ಮಾಡಿಕೊಡಲು ಎಲ್ಐಸಿ ಹಣ ದುರುಪಯೋಗ ; ಜೈರಾಮ್ ರಮೇಶ್ ಆರೋಪ
- ಶಬರಿಮಲೆ ಚಿನ್ನ ನಷ್ಟ ಪ್ರಕರಣ : ಬೆಂಗಳೂರು, ಬಳ್ಳಾರಿಯಲ್ಲಿ ಕೇರಳ ಎಸ್ಐಟಿ ಶೋಧ
- ಯಶವಂತಪುರದ ಗಾಂಧಿಪಾರ್ಕ್ನಲ್ಲಿ ಡಿಕೆಶಿ ಬೆಂಗಳೂರು ನಡಿಗೆ, ನಾಗರಿಕರ ಅಹವಾಲು ಆಲಿಸಿದ ಡಿಸಿಎಂ
