Sunday, September 21, 2025
Homeರಾಜ್ಯಚುನಾವಣಾ ಆಯೋಗದಿಂದ ತನಿಖೆಗೆ ಅಸಹಕಾರ : ಪ್ರಿಯಾಂಕ್‌ ಖರ್ಗೆ ಕಿಡಿ

ಚುನಾವಣಾ ಆಯೋಗದಿಂದ ತನಿಖೆಗೆ ಅಸಹಕಾರ : ಪ್ರಿಯಾಂಕ್‌ ಖರ್ಗೆ ಕಿಡಿ

Election Commission's non-cooperation with investigation: Priyank Kharge

ಬೆಂಗಳೂರು, ಸೆ.21- ಅಳಂದ ಕ್ಷೇತ್ರದಲ್ಲಿನ ಮತಗಳ್ಳತನದ ಬಗ್ಗೆ ಚುನಾವಣಾ ಆಯೋಗದ ಜೊತೆ ಕಾಂಗ್ರೆಸ್‌‍ ನಾಯಕರ ವಾದ ಪ್ರತಿವಾದಗಳು ಮುಂದುವರೆದಿದ್ದು, ಸಿಐಡಿ ತನಿಖೆಗೆ ಅಗತ್ಯವಾದ ಮಾಹಿತಿಯನ್ನು ಒದಗಿಸದೆ ಚುನಾವಣಾ ಆಯೋಗ ಸುಳ್ಳು ಹೇಳುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಪುನರುಚ್ಚರಿಸಿದ್ದಾರೆ.

ಎರಡು ದಿನಗಳ ಹಿಂದೆ ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಬಿ.ಆರ್‌. ಪಾಟೀಲ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಆಯೋಗದ ಮುಂದೆ ಗಂಭೀರ ಪ್ರಶ್ನೆಗಳನ್ನು ಇಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ ಕಲಬುರಗಿ ಜಿಲ್ಲೆಯ ಎಸ್‌‍ಪಿ ಅವರಿಗೆ 2023ರ ಸೆ. 6 ರಂದು ತನಿಖೆಗೆ ಅಗತ್ಯವಾಗಿರುವ ಮಾಹಿತಿಗಳನ್ನು ನೀಡಲಾಗಿದೆ ಎಂದು ತಿಳಿಸಿತ್ತು.

- Advertisement -

ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸಲ್ಲಿಕೆಯಾಗಿದ್ದ ಅರ್ಜಿ ನಮೂನೆಗೆ ಆಕ್ಷೇಪಣೆ ಸಲ್ಲಿಸಿದವರ ವಿವರ, ಕ್ರಮಸಂಖ್ಯೆ, ಮತದಾರರ ಗುರುತಿನ ಚೀಟಿಯ ಸಂಖ್ಯೆ, ಲಾಗಿನ್‌ ಆಗಲು ಬಳಸಲಾದ ಮೊಬೈಲ್‌ ಸಂಖ್ಯೆ, ಪ್ರಕ್ರಿಯೆಗಳಿಗೆ ಒದಗಿಸಲಾದ ಮೊಬೈಲ್‌ ಸಂಖ್ಯೆ, ಐಪಿ ಅಡ್ರೆಸ್‌‍, ಅರ್ಜಿದಾರರ ಸ್ಥಳ, ಸಲ್ಲಿಕೆಯಾದ ದಿನಾಂಕ ಮತ್ತು ಸಮಯ ಬಳಕೆದಾರರ ಲಾಗಿನ್‌ ಸೃಷ್ಟಿಯಾದ ದಿನಾಂಕ ಎಲ್ಲವನ್ನೂ ಒದಗಿಸಲಾಗಿದೆ. ಜೊತೆಗೆ ತನಿಖೆಗೆ ಅಗತ್ಯವಾದ ಇತರ ಮಾಹಿತಿಗಳನ್ನು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಒದಗಿಸಿದ್ದಾರೆ ಎಂದು ಆಯೋಗ ಸ್ಪಷ್ಟನೆ ನೀಡಿತ್ತು.

ಇದನ್ನು ತಳ್ಳಿ ಹಾಕಿರುವ ಪ್ರಿಯಾಂಕ್‌ ಖರ್ಗೆ ಆಯೋಗ ಸ್ಪಷ್ಟವಾಗಿ ಸುಳ್ಳು ಹೇಳುತ್ತಿದೆ. ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಕಚೇರಿಯ ಅಧಿಕಾರಿ 2025ರ ಮಾರ್ಚ್‌ 14 ರಂದು ನೆನಪಿನ ಓಲೆಯನ್ನು ಬರೆದು ಅದರಲ್ಲಿ ಬಿ.ಆರ್‌. ಪಾಟೀಲ್‌ ಅವರ ದೂರು, ಎಡಿಜಿಪಿ ಕಾನೂನು ಸುವ್ಯವಸ್ಥೆ ಅವರ ಪತ್ರ ಸೇರಿದಂತೆ 17 ಪತ್ರ ವ್ಯವಹಾರಗಳ ಮಾಹಿತಿಯನ್ನು ನಮೂದಿಸಿದ್ದಾರೆ.
2023ರಲ್ಲಿ ಎಲ್ಲಾ ದಾಖಲೆಗಳನ್ನು ನೀಡಿದ್ದರೆ, 2025ರಲ್ಲಿ ರಾಜ್ಯ ಚುನಾವಣಾಧಿಕಾರಿ ನೆನಪಿನ ಓಲೆ ಬರೆದು ಮಾಹಿತಿ ನೀಡಲು ಅನುಮತಿ ಕೇಳಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಸಿಐಡಿಯ ಸೈಬರ್‌ ಕ್ರೈಂ ಅಧಿಕಾರಿಗಳು ಎನ್‌ವಿಎಸ್‌‍ಪಿ ಮತ್ತು ವಿಎಚ್‌ಎ ಅಪ್ಲಿಕೇಶನ್‌ಗಳ ವೇದಿಕೆಯಲ್ಲಿ ಓಟಿಪಿ ಅಥವಾ ಮಲ್ಟಿಫ್ಯಾಕ್ಟರ್ಸ್‌ ಸೌಲಭ್ಯಗಳನ್ನು ವಿಸ್ತರಿಸಲಾಗಿತ್ತೇ? ಓಟಿಪಿ ಹಾಗೂ ಅಧಿಕೃತ ಅರ್ಜಿದಾರರ ವಿವರಗಳು ಓಟಿಪಿ ರವಾನಿಸಲಾದ ಮೊಬೈಲ್‌ ಸಂಖ್ಯೆ ಅರ್ಜಿದಾರರು ನೀಡಿದ ಮೊಬೈಲ್‌ ಸಂಖ್ಯೆ ಸೇರಿದಂತೆ 5 ಪ್ರಮುಖ ಅಂಶಗಳನ್ನು ಒದಗಿಸುವಂತೆ ಆಗ್ರಹಿಸಿದ್ದರು,

1872ರ ಭಾರತೀಯ ಸಾಕ್ಷ್ಯ ಅಧಿನಿಯಮ 65ಬಿ ಅಡಿಯಲ್ಲಿ ಈ ಎಲ್ಲಾ ಸಾಕ್ಷ್ಯ ಪುರಾವೆಗಳನ್ನು ಒದಗಿಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿತ್ತು. ಆದರೆ ಈವರೆಗೂ ತನಿಖೆಗೆ ಅಗತ್ಯವಾದ ಮಾಹಿತಿ ನೀಡಿಲ್ಲ, ಬದಲಾಗಿ ಸುಳ್ಳು ಹೇಳಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

RELATED ARTICLES

Latest News