Tuesday, September 23, 2025
Homeರಾಜ್ಯಬುರುಡೆ ಗ್ಯಾಂಗ್‌ಗೆ ಹಣಕಾಸು ಸಹಾಯ ಮಾಡಿದ್ದ 11 ಮಂದಿಗೆ ನೋಟೀಸ್‌‍

ಬುರುಡೆ ಗ್ಯಾಂಗ್‌ಗೆ ಹಣಕಾಸು ಸಹಾಯ ಮಾಡಿದ್ದ 11 ಮಂದಿಗೆ ನೋಟೀಸ್‌‍

Notices to 11 people who helped the Burude gang financially

ಬೆಳ್ತಂಗಡಿ,ಸೆ.23- ಎಸ್‌‍ಐಟಿ ತನಿಖೆಯನ್ನು ಚುರುಕುಗೊಳಿಸಿದ್ದು, ಬುರುಡೆ ಗ್ಯಾಂಗ್‌ಗೆ ಹಣಕಾಸು ಸಹಾಯ ಮಾಡಿದ್ದ 11 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದೆ.

ಪ್ರಮುಖವಾಗಿ ಚಿನ್ನಯ್ಯ ಹಾಗೂ ಪತ್ನಿಯ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದವರ ಬಗ್ಗೆ ಎಸ್‌‍ಐಟಿ ಮಾಹಿತಿ ಕಲೆ ಹಾಕಿದ್ದಲ್ಲದೇ ಆತನ ಕುಟುಂಬದ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಯ ಮಾಹಿತಿಗಳನ್ನು ಪಡೆದು ಪರಿಶೀಲಿಸುತ್ತಿದೆ. ಮಹಿಳೆಯರ ಖಾತೆಯಿಂದಲೂ ಚಿನ್ನಯ್ಯನ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಯಾಗಿರುವುದು ಎಸ್‌‍ಐಟಿ ತನಿಖೆಯಲ್ಲಿ ಬಯಲಾಗಿದೆ.

- Advertisement -

ಬುರುಡೆ ಪ್ರಕರಣದಲ್ಲಿ ಶಾಮೀಲಾಗಿರುವ ಕಾಣದ ಕೈಗಳ ಪತ್ತೆ ಬಗ್ಗೆ ಎಸ್‌‍ಐಟಿ ತನಿಖೆ ನಡೆಸುತ್ತಿದ್ದು ಮಹತ್ವದ ಬೆಳವಣಿಗೆ ಸಾಧಿಸಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರು ಸೇರಿದಂತೆ 11 ಜನರಿಗೆ ಎಸ್‌‍ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದ್ದು, ಈಗಾಗಲೇ 6 ಮಂದಿಯನ್ನು ವಿಚಾರಣೆ ನಡೆಸಿದ್ದಾರೆ.

ಕಳೆದ ಒಂದು ವರ್ಷದಿಂದ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಎಸ್‌‍ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ತನಿಖೆ ಆಳಕ್ಕೆ ಇಳಿಯುತ್ತಿದ್ದಂತೆ ಪ್ರಕರಣದಲ್ಲಿ ಇನ್ನಷ್ಟು ಮಂದಿ ಹಣಕಾಸಿನ ನೆರವು ನೀಡಿರುವ ಬಗ್ಗೆಯೂ ಮಾಹಿತಿ ಸಿಕ್ಕಿದ್ದು, ಅವರಿಗೂ ಎಸ್‌‍ಐಟಿ ನೋಟಿಸ್‌‍ ನೀಡುವ ಸಾಧ್ಯತೆಗಳಿವೆ.ಈಗಾಗಲೇ ಷಡ್ಯಂತ್ರದ ಬಗ್ಗೆ ಹಲವರ ಪಾತ್ರದ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ.

RELATED ARTICLES

Latest News