ರಾಂಚಿ, ಸೆ.29- ಚುನಾವಣೆಯ ಸಮಯದಲ್ಲಿ ಜೆಎಂಎಂ ಶಾಸಕ ದಶರಥ್ ಗಗ್ರೈ ನಕಲಿ ಗುರುತಿನ ಚೀಟಿ ಬಳಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆಗೆ ಜಾರ್ಖಂಡ್ ಮುಖ್ಯ ಚುನಾವಣಾ ಅಧಿಕಾರಿ ಕೆ.ರವಿಕುಮಾರ್ ಆದೇಶಿಸಿದ್ದಾರೆ.ಖರ್ಸವಾನ್ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಗಗ್ರೈ ಅವರ ಗುರುತಿನ ಚೀಟಿ ಅಸಲಿಯತ್ತು ಪ್ರಶ್ನಿಸಿ ಲಾಲ್ಜಿ ರಾಮ್ ಟಿಯು ಎಂಬವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಇದರಿಂದಾಗಿ ಪ್ರಕರಣ ಬಗ್ಗೆ ಸೆರೈಕೆಲಾ-ಖಾರ್ಸವಾನ್ ಪ್ರದೇಶದ ಉಪ ಆಯುಕ್ತರಿಗೆ ತನಿಖೆ ನಡೆಸಿ ವರದಿ ನೀಡಲು ಸಿಇಒ ಸೂಚಿಸಿದ್ದಾರೆ.ದೂರುದಾರರು ಧಿಕಾರದಲ್ಲಿರುವವರ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಶಾಸಕರು ಟೕಕಿ ಆರೋಪವನ್ನು ತಳ್ಳಿಹಾಕಿದರು. ದೂರುದಾರರ ಅಫಿಡವಿಟ್ ದೂರನ್ನು ನಾನು ಸೆರೈಕೆಲಾ-ಖಾರ್ಸವಾನ್ ಉಪ ಆಯುಕ್ತ ನಿತೀಶ್ ಕುಮಾರ್ ಸಿಂಗ್ ಅವರಿಗೆ ಪರಿಶೀಲಿಸಲು ಕಳುಹಿಸಿದ್ದೇನೆ ಎಂದು ಸಿಇಒ ಹೇಳಿದರು.
ಚುನಾವಣೆಗಳು ಮುಗಿದು ಫಲಿತಾಂಶಗಳು ಘೋಷಣೆಯಾದ ನಂತರ ಶಾಸಕರನ್ನು ಒಳಗೊಂಡ ವಿವಾದಗಳನ್ನು ಸಂಬಂಧಪಟ್ಟ ರಾಜ್ಯಪಾಲರು ಪರಿಹರಿಸಬೇಕಾಗುತ್ತದೆ, ಆದರೆ ಸಂಸದರನ್ನು ಒಳಗೊಂಡ ವಿವಾದಗಳನ್ನು ರಾಷ್ಟ್ರಪತಿಗಳು ನಿಭಾಯಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಮಾಜಿ ಸೈನಿಕ ಎಂದು ಹೇಳಿಕೊಳ್ಳುವ ಲಾಲ್ಜಿ ರಾಮ್ ಟಿಯು, ದಶರಥ್ ಗಗ್ರೈ ಹೆಸರಿನಲ್ಲಿ ಪ್ರಸ್ತುತ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ವಾಸ್ತವವಾಗಿ, ನಿಜವಾದ ದಶರಥ್ ಗಗ್ರೈ ಅವರ ಹಿರಿಯ ಸಹೋದರ ರಾಮಕೃಷ್ಣ ಗಗ್ರೈ ಎಂದು ಆರೋಪಿಸಿದ್ದಾರೆ.