Thursday, October 9, 2025
Homeಬೆಂಗಳೂರುಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ಮೇಲೆ ಸಿಸಿ ಕ್ಯಾಮೆರಾಗಳ ಹದ್ದಿನ ಕಣ್ಣು

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ಮೇಲೆ ಸಿಸಿ ಕ್ಯಾಮೆರಾಗಳ ಹದ್ದಿನ ಕಣ್ಣು

CC cameras keep a close eye on traffic violations in Bengaluru

ಬೆಂಗಳೂರು, ಅ. 9- ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಬಿದ್ದೇ ಬೀಳುತ್ತದೆ ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌‍ ಆಯುಕ್ತರಾದ ಕಾರ್ತಿಕ್‌ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ.

ಱಈ ಸಂಜೆೞ ಜೊತೆ ಮಾತನಾಡಿದ ಅವರು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ನಗರದಾದ್ಯಂತ ಪ್ರಮುಖ ವೃತ್ತಗಳಲ್ಲಿ 105 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಮುಂದಿನ ವರ್ಷದ ಆರಂಭದಲ್ಲಿ ಇನ್ನಷ್ಟು ಈ ರೀತಿಯ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅವರು ವಿವರಿಸಿದರು.

ಇವುಗಳಲ್ಲದೆ ನಗರದ 500ಕ್ಕೂ ಹೆಚ್ಚು ವೃತ್ತಗಳಲ್ಲಿ ಸಾಮಾನ್ಯ ಸಿಸಿ ಕ್ಯಾಮೆರಾಗಳನ್ನು ಹಾಕಲಾಗಿದೆ.ಈ ಕ್ಯಾಮೆರಾಗಳ ಪ್ರದರ್ಶನವನ್ನು ನಮ ಸಿಬ್ಬಂದಿ ಟಿಎಂಸಿಯಲ್ಲೇ ಕುಳಿತು ವೀಕ್ಷಣೆ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಮಾಡಿ ಅವರುಗಳಿಗೆ ನೋಟಿಸ್‌‍ ನೀಡುತ್ತಾರೆ.

ಈಗ ನಾವು ನಗರದಾದ್ಯಂತ ಅಳವಡಿಸಿರುವ ಎಲ್ಲ ಕ್ಯಾಮೆರಾಗಳು ಸುಸ್ಥಿತಿಯಲ್ಲಿದ್ದು ದಿನದ 24 ಗಂಟೆಗಳ ಕಾಲ ಕಾರ್ಯವಹಿಸುತ್ತಿವೆ. ಒಂದು ವೇಳೆ ಈ ಕ್ಯಾಮೆರಾಗಳು ಕೆಟ್ಟು ಹೋದರೆ ಅಥವಾ ಸ್ಥಗಿತವಾದರೆ ಒಂದೆರಡು ನಿಮಿಷಗಳಲ್ಲೇ ಟಿಎಂಸಿಯಲ್ಲಿರುವ ನಮ ಮಾನಿಟರ್‌ ಸಿಸ್ಟಮ್‌ನಲ್ಲಿ ಗೊತ್ತಾಗುತ್ತದೆ. ಯಾವ ಕ್ಯಾಮೆರಾದಿಂದ ನಮ ಮಾನಿಟರ್‌ ಸಿಸ್ಟಮ್‌ಗೆ ಡೇಟಾ ಬರುತ್ತಿಲ್ಲವೆಂದು ತಕ್ಷಣ ಗೊತ್ತಾಗುತ್ತದೆ. ಆಗ ನಮ ಸಿಬ್ಬಂದಿ ಕ್ಯಾಮೆರಾಗಳ ನಿರ್ವಹಣೆ ಹೊಣೆ ಹೊತ್ತಿರುವ ಖಾಸಗಿ ಸಂಸ್ಥೆಗೆ ತಿಳಿಸುತ್ತಾರೆ.

ವಿಷಯ ತಿಳಿದ ಸಂಸ್ಥೆಯವರು ಅತಿ ಶೀಘ್ರದಲ್ಲೇ ಅವುಗಳನ್ನು ಸರಿಪಡಿಸುತ್ತಾರೆ. ಸ್ಥಗಿತಗೊಂಡಿರುವ ಕ್ಯಾಮೆರಾಗಳನ್ನು 24 ಗಂಟೆ ಒಳಗೆ ಸರಿಪಡಿಸದಿದ್ದರೆ ಆಗ ಸಂಸ್ಥೆಗೆ ಮುಲಾಜಿಲ್ಲದೆ ದಂಡ ಹಾಕುತ್ತೇವೆ ಎಂದು ಜಂಟಿ ಆಯುಕ್ತರು ಹೇಳಿದರು.

ನಗರದ ಬಹುತೇಕ ಪ್ರಮುಖ ಸರ್ಕಲ್‌ ಮತ್ತು ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಿದ್ದೇವೆ. ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್‌‍ ಕಮೀಷನರೇಟ್‌ ವ್ಯಾಪ್ತಿಗೆ ಹೊಸದಾಗಿ 3 ಪೊಲೀಸ್‌‍ ಠಾಣೆಗಳು ಸೇರಿವೆ. ಈ ಠಾಣೆಗಳ ವ್ಯಾಪ್ತಿಯ ಕೆಲವು ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳಿಲ್ಲ. ಮುಂದಿನ ದಿನಗಳಲ್ಲಿ ಆ ಪ್ರದೇಶಗಳಲ್ಲಿ ಹಂತ ಹಂತವಾಗಿ ಅಳವಡಿಸುತ್ತೇವೆ.
ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಲವಾರು ಕ್ರಮಕೈಗೊಂಡಿದ್ದೇವೆ. ನಾನ್‌ ಪೀಕ್‌ ಅವರ್ಸ್‌ಗಳಲ್ಲಿ ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ನಗರದ ಕೆಲವು ರಸ್ತೆಗಳಲ್ಲಿ ಸಿಂಕ್ರೋನೈಸ್ಟ್‌ ಸಿಗ್ನಲ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಅನಗತ್ಯ ನಿಲುಗಡೆ ತಪ್ಪುತ್ತದೆ ಎಂದು ಕಾರ್ತಿಕ್‌ರೆಡ್ಡಿ ತಿಳಿಸಿದರು.

ಮತ್ತೆ ನಗರದ 1194 ರಸ್ತೆಗಳಲ್ಲಿ ನೋ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ತರಲು ಹೊಸ ಯೋಜನೆ ಒಂದನ್ನು ರೂಪಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಓಲಾ, ಊಬರ್‌ ಮುಂತಾದ ಸಂಸ್ಥೆಗಳ ಜೊತೆ ಚರ್ಚೆ ಸಹ ನಡೆಸಿದ್ದೇವೆ.ಪದೇ ಪದೇ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನ ನಿಲ್ಲಿಸುವ ಓಲಾ, ಊಬರ್‌ ಚಾಲಕರ ವಿರುದ್ಧ ಅವರ ಸಂಸ್ಥೆಯವರೇ ಕ್ರಮಕೈಗೊಳ್ಳಲಿದ್ದಾರೆ. ಈ ವಾಹನಗಳಿಗೆ ಜಿಪಿಎಸ್‌‍ ಅಳವಡಿಸುವುದರಿಂದ ಪತ್ತೆ ಹಚ್ಚುವುದು ಸುಲಭ.

ಇವುಗಳಲ್ಲದೆ ಸುಗಮ ಸಂಚಾರಕ್ಕಾಗಿ ಯುರೋಪ್‌ ದೇಶಗಳಿರುವ ಕೆಲವು ವ್ಯವಸ್ಥೆಗಳನ್ನು ನಗರದಲ್ಲಿ ಅಳವಡಿಸಲು ಸಹ ಯೋಚಿಸುತ್ತಿದ್ದೇವೆ. ಬಹಳ ಮುಖ್ಯವಾಗಿ ಕಟ್ಟುನಿಟ್ಟಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಪ್ರತಿ ವಾಹನ ಸವಾರರು ಅಥವಾ ಚಾಲಕರು ಚಾಲನೆ ಮಾಡಿದರೆ ಮತ್ತು ಪಾದಚಾರಿಗಳೂ ಸಹ ಶಿಸ್ತಿನಿಂದ ನಡೆದುಕೊಂಡರೆ ಮಾತ್ರ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಹುದು ಎಂದು ಹೇಳುತ್ತಾರೆ ಜಂಟಿ ಆಯುಕ್ತರಾದ ಕಾರ್ತಿಕ್‌ರೆಡ್ಡಿ.

RELATED ARTICLES

Latest News