Monday, October 13, 2025
Homeರಾಷ್ಟ್ರೀಯ | Nationalಕರೂರು ಕಾಲ್ತುಳಿತ ಪ್ರಕರಣದ ಕುರಿತು ಸಿಬಿಐ ತನಿಖೆ ಮೇಲುಸ್ತುವಾರಿಗೆ ಸಮಿತಿ ನೇಮಕ ಮಾಡಿದ ಸುಪ್ರೀಂ

ಕರೂರು ಕಾಲ್ತುಳಿತ ಪ್ರಕರಣದ ಕುರಿತು ಸಿಬಿಐ ತನಿಖೆ ಮೇಲುಸ್ತುವಾರಿಗೆ ಸಮಿತಿ ನೇಮಕ ಮಾಡಿದ ಸುಪ್ರೀಂ

Supreme Court appoints committee to monitor CBI probe into Karur stampede case

ನವದೆಹಲಿ, ಅ.13– ತಮಿಳುನಾಡಿನ ಸೂಪರ್‌ ಸ್ಟಾರ್‌ ವಿಜಯ್‌ ಭಾಷಣದ ವೇಳೆ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 41 ಅಮಾಯಕರು ಪ್ರಾಣ ಕಳೆದುಕೊಂಡ ಘಟನೆ ಸತ್ಯಾಸತ್ಯತೆ ಆರಿಯಲು ಸುಪ್ರೀಂ ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದೆ.

ನ್ಯಾಯಾಧೀಶರಾದ ಜೆ ಕೆ ಮಹೇಶ್ವರಿ ಮತ್ತು ಎನ್‌ ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು ಸಿಬಿಐ ತನಿಖೆಯನ್ನು ಮೇಲ್ವಿಚಾರಣೆ ಮಾಡುವ ಸಮಿತಿಯ ಮುಖ್ಯಸ್ಥರನ್ನಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಅಜಯ್‌ ರಸ್ತೋಗಿ ಅವರನ್ನು ನೇಮಿಸಿದೆ.
ತಮಿಳು ನಟ ವಿಜಯ್‌ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ ಮತ್ತು ಇತರರು ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 10 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಸೆಪ್ಟೆಂಬರ್‌ 27 ರ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆಗೆ ನಿರಾಕರಿಸಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಬಿಜೆಪಿ ನಾಯಕಿ ಉಮಾ ಆನಂದನ್‌ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಸಿಜೆಐ ನೇತೃತ್ವದ ಪೀಠ ಒಪ್ಪಿಕೊಂಡಿತು.

ತಮಿಳುನಾಡಿನ ಬಿಜೆಪಿ ನಾಯಕ ಜಿ ಎಸ್‌‍ ಮಣಿ ಕೂಡ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.ಟಿವಿಕೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆಯನ್ನು ಕೋರಿದೆ, ತಮಿಳುನಾಡು ಪೊಲೀಸ್‌‍ ಅಧಿಕಾರಿಗಳು ಮಾತ್ರ ನಡೆಸಿದರೆ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ವಾದಿಸಿದೆ.

ತಮಿಳುನಾಡು ಪೊಲೀಸ್‌‍ ಅಧಿಕಾರಿಗಳನ್ನು ಮಾತ್ರ ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌‍ಐಟಿ) ರಚಿಸುವಂತೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಟಿವಿಕೆ ತನ್ನ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು.

ಕೆಲವು ದುಷ್ಕರ್ಮಿಗಳು ಪೂರ್ವ ಯೋಜಿತ ಪಿತೂರಿಯಿಂದ ಕಾಲ್ತುಳಿತಕ್ಕೆ ಕಾರಣರಾಗಿದ್ದಾರೆ ಎಂದು ಅದು ಆರೋಪಿಸಿದೆ.ಘಟನೆಯ ನಂತರ ಪಕ್ಷ ಮತ್ತು ನಟ-ರಾಜಕಾರಣಿ ಸ್ಥಳದಿಂದ ಹೊರಟು ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ ಎಂಬ ಹೈಕೋರ್ಟ್‌ನ ಕಟುವಾದ ಹೇಳಿಕೆಯನ್ನು ಸಹ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಈ ಹಿಂದೆ, ರ್ಯಾಲಿಯಲ್ಲಿ 27,000 ಜನರು ಭಾಗವಹಿಸಿದ್ದರು, ಇದು ನಿರೀಕ್ಷಿತ 10,000 ಭಾಗವಹಿಸುವವರ ಸಂಖ್ಯೆಗಿಂತ ಸುಮಾರು ಮೂರು ಪಟ್ಟು ಹೆಚ್ಚು, ಮತ್ತು ದುರಂತಕ್ಕೆ ವಿಜಯ್‌ ಸ್ಥಳವನ್ನು ತಲುಪುವಲ್ಲಿ ಏಳು ಗಂಟೆಗಳ ವಿಳಂಬವೂ ಕಾರಣವಾಗಿತ್ತು ಎಂದು ಪೊಲೀಸರು ದೂಷಿಸಿದ್ದರು.

RELATED ARTICLES

Latest News