Saturday, October 18, 2025
Homeರಾಷ್ಟ್ರೀಯ | Nationalಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ : ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ ಬಂಧನ

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ : ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ ಬಂಧನ

Sabarimala Temple gold theft row: Key accused and sponsor Unnikrishnan Potty arrested

ತಿರುವನಂತಪುರಂ,ಅ.17– ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಇಂದು ಬೆಂಗಳೂರು ಮೂಲದ ಉದ್ಯಮಿ,ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿಯನ್ನು ಬಂಧಿಸಿದೆ. ಪುಲಿಮಠದಲ್ಲಿರುವ ಅವರ ನಿವಾಸದಿಂದ ಆರೋಪಿಯನ್ನು ಬಂಧಿಸಿತಿರುವನಂತಪುರಂನ ಎಸ್‌‍ಐಟಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ನಂತರ, ಪೊಟ್ಟಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಮಧ್ಯಾಹ್ನದ ವೇಳೆಗೆ ಪತ್ತನಂತಿಟ್ಟಕ್ಕೆ ಕರೆದುಕೊಂಡು ಹೋಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ವಿವರವಾದ ವಿಚಾರಣೆಗಾಗಿ ಪೊಟ್ಟಿಯನ್ನು ಕಸ್ಟಡಿಗೆ ನೀಡಲು ಎಸ್‌‍ಐಟಿ ಕೋರಲಿದೆ.
ಕೇರಳ ಹೈಕೋರ್ಟ್‌ ನಿರ್ದೇಶನದ ಮೇರೆಗೆ ರಚಿಸಲಾದ ಎಸ್‌‍ಐಟಿ ಪ್ರಸ್ತುತ ಎರಡು ಪ್ರಕರಣಗಳ ತನಿಖೆ ನಡೆಸುತ್ತಿದೆ – ಒಂದು ದ್ವಾರಪಾಲಕ ವಿಗ್ರಹಗಳಿಂದ ಕಾಣೆಯಾದ ಚಿನ್ನ ಮತ್ತು ಇನ್ನೊಂದು ಶ್ರೀಕೋವಿಲ್‌ ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ನಷ್ಟಕ್ಕೆ ಸಂಬಂಧಿಸಿದೆ.

2019 ರಲ್ಲಿ ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರದ ತಟ್ಟೆಗಳು ಮತ್ತು ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳನ್ನು ವಿದ್ಯುಲ್ಲೇಪಿಸುವಿಕೆಗಾಗಿ ಪಾಟಿಗೆ ಹಸ್ತಾಂತರಿಸುವಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸದಸ್ಯರು ಮತ್ತು ಅಧಿಕಾರಿಗಳ ಭಾಗಿಯಾಗಿರುವ ಬಗ್ಗೆಯೂ ಎಸ್‌‍ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ, ಟಿಡಿಬಿ ವಿಜಿಲೆನ್‌್ಸವಿಂಗ್‌ ಪಾಟಿಯನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿತ್ತು ಮತ್ತು ಅದರ ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ಅವರ ಹೇಳಿಕೆಯನ್ನು ದಾಖಲಿಸಿತ್ತು. ಎಸ್‌‍ಐಟಿ ತನ್ನ ತನಿಖೆಯನ್ನು ಮುಕ್ತಾಯಗೊಳಿಸಲು ಹೈಕೋರ್ಟ್‌ ಆರು ವಾರಗಳ ಗಡುವನ್ನು ನಿಗದಿಪಡಿಸಿದೆ.

RELATED ARTICLES

Latest News