Saturday, October 18, 2025
Homeರಾಷ್ಟ್ರೀಯ | Nationalಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಕೋಟಾಕ್ಕೆ ಹೈಕೋರ್ಟ್‌ ತಡೆಯಾಜ್ಞೆ ; ಬೀದಿಗಿಳಿದ ತೆಲಂಗಾಣ ಜನ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಕೋಟಾಕ್ಕೆ ಹೈಕೋರ್ಟ್‌ ತಡೆಯಾಜ್ಞೆ ; ಬೀದಿಗಿಳಿದ ತೆಲಂಗಾಣ ಜನ

42% OBC quota in local body polls: Supreme Court dismisses Telangana's plea against HC order

ಹೈದರಾಬಾದ್‌, ಅ. 18 (ಪಿಟಿಐ) ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗಳಿಗೆ ಶೇ.42 ರಷ್ಟು ಕೋಟಾ ನೀಡುವುದಕ್ಕೆ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆಯನ್ನು ವಿರೋಧಿಸಿ ತೆಲಂಗಾಣದಲ್ಲಿ ಇಂದು ಬಂದ್‌ ಆಚರಿಸಲಾಗುತ್ತಿದೆ.

ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಆಂದೋಲನಕ್ಕೆ ಬೆಂಬಲ ನೀಡಿವೆ.ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಎಲ್ಲಾ ವಲಯಗಳು ಬಂದ್‌ಗೆ ಸಹಕರಿಸುವಂತೆ ಕೋರಲಾಗಿದೆ.ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಸಿಗಳಿಗೆ ಶೇ. 42 ರಷ್ಟು ಮೀಸಲಾತಿ ನೀಡುವ ಸರ್ಕಾರಿ ಆದೇಶದ ವಿರುದ್ಧ ತೆಲಂಗಾಣ ಹೈಕೋರ್ಟ್‌ ಅಕ್ಟೋಬರ್‌ 9 ರಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.

ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ನಾಯಕರು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌‍ ಡಿಪೋಗಳ ಮುಂದೆ ವಾಹನಗಳು ಹೊರಬರದಂತೆ ಧರಣಿ ನಡೆಸುತ್ತಿದ್ದಾರೆ.ಬಿಜೆಪಿ ಲೋಕಸಭಾ ಸದಸ್ಯ ಎತಲಾ ರಾಜೇಂದರ್‌ ಇಲ್ಲಿನ ಜುಬಿಲಿ ಬಸ್‌‍ ನಿಲ್ದಾಣದಲ್ಲಿ ಬಂದ್‌ನಲ್ಲಿ ಭಾಗವಹಿಸಿದ್ದರು.ಟಿಜಿಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಬಸ್‌‍ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಬೆಳಗಿನ ಜಾವ ಸೇವೆಗಳಲ್ಲಿ ಕೆಲವು ಅಡಚಣೆಗಳು ಕಂಡುಬಂದಿವೆ ಎಂದು ಹೇಳಿದರು.

ತೆಲಂಗಾಣ ಹಿಂದುಳಿದ ವರ್ಗಗಳ ಜಂಟಿ ಕ್ರಿಯಾ ಸಮಿತಿ ನೀಡಿದ ಬಂದ್‌ ಕರೆಗೆ ತೆಲಂಗಾಣದಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಶುಕ್ರವಾರ ಬೆಂಬಲ ನೀಡಿದೆ.ಬಿಜೆಪಿ ಮತ್ತು ಬಿಆರ್‌ಎಸ್‌‍ ಕೂಡ ಬಂದ್‌ ಕರೆಗೆ ತಮ್ಮ ಬೆಂಬಲವನ್ನು ನೀಡಿವೆ.ಅಕ್ಟೋಬರ್‌ 18 ರಂದು ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಆಯೋಜಿಸಲಾಗಿರುವ ಬಿಸಿ ಬಂದ್‌ನಲ್ಲಿ ಎಲ್ಲರೂ – ಸಾರ್ವಜನಿಕರು ಮತ್ತು ಎಲ್ಲಾ ಸಮುದಾಯಗಳು – ಭಾಗವಹಿಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಸಿ ಜೆಎಸಿ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಆರ್‌. ಕೃಷ್ಣಯ್ಯ ಅವರು ಈ ಹಿಂದೆ ಬಂದ್‌ಗೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳಿಂದ ಬೆಂಬಲ ಕೋರಿದ್ದರು.

ತೆಲಂಗಾಣ ಪೊಲೀಸ್‌‍ ಮಹಾನಿರ್ದೇಶಕ ಬಿ. ಶಿವಧರ್‌ ರೆಡ್ಡಿ ಅವರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಶಾಂತಿಯುತವಾಗಿ ಬಂದ್‌ ಆಚರಿಸುವಂತೆ ಎಲ್ಲಾ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.ಬಂದ್‌ ಹೆಸರಿನಲ್ಲಿ ಯಾರಾದರೂ ಅಹಿತಕರ ಅಥವಾ ಕಾನೂನುಬಾಹಿರ ಚಟುವಟಿಕೆಗಳನ್ನು ಆಶ್ರಯಿಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

RELATED ARTICLES

Latest News