Sunday, October 19, 2025
Homeಇದೀಗ ಬಂದ ಸುದ್ದಿನ್ಯಾಮತಿಯ ಎಸ್‌‍ಬಿಐ ಬ್ಯಾಂಕ್‌ ಕಳವು ಪ್ರಕರಣ ಸುಖಾಂತ್ಯ, ಗ್ರಾಹಕರು ನಿರಾಳ

ನ್ಯಾಮತಿಯ ಎಸ್‌‍ಬಿಐ ಬ್ಯಾಂಕ್‌ ಕಳವು ಪ್ರಕರಣ ಸುಖಾಂತ್ಯ, ಗ್ರಾಹಕರು ನಿರಾಳ

Nyamathi's SBI bank robbery case

ದಾವಣಗೆರೆ,ಅ.19- ನ್ಯಾಮತಿಯ ಎಸ್‌‍ಬಿಐ ಬ್ಯಾಂಕ್‌ನಲ್ಲಿ ನಡೆದಿದ್ದ 17 ಕೆಜಿ ಚಿನ್ನ ಕಳ್ಳತನ ಪ್ರಕರಣ ಸುಖಾಂತ್ಯ ಕಂಡಿದ್ದು,ಅಧಿಕಾರಿಗಳು , ಗ್ರಾಹಕರು ನಿರಾಳರಾಗಿದ್ದಾರೆ. ದರೋಡೆಯಾಗಿದ್ದ ಗ್ರಾಹಕರ ಅಡವಿಟ್ಟಿದ್ದ ಬಂಗಾರವನ್ನುಸಂಪೂರ್ಣ ವಶಪಡಿಸಿಕೊಂಡು ಪೊಲೀಸರು ಬ್ಯಾಂಕ್‌ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಕಳೆದ ಅಕ್ಟೋಬರ್‌ 2024ರ 28ರಂದು ದಿಪಾವಳಿ ಸಂದರ್ಭದಲ್ಲಿ ನಡೆದಿದ್ದ ಭಾರಿ ಬ್ಯಾಂಕ್‌ ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿತ್ತು. ಸಂಚು ಮಾಡಿ ಎಸ್‌‍ಬಿಐ ಬ್ಯಾಂಕಿನಿಂದ 12.95 ಕೋಟಿ ರೂ. ಮೌಲ್ಯದ 509 ಜನ ಗ್ರಾಹಕರ, 17 ಕೆಜಿಗೂ ಅಧಿಕ ಚಿನ್ನಾಭರಣ ದರೋಡೆ ಮಾಡಲಾಗಿತ್ತು ಖತರ್ನಾಕ್‌ ಕಳ್ಳರು ಬ್ಯಾಂಕ್‌‍ನಲ್ಲಿ ಪ್ರಮುಖ ಸಾಕ್ಷಿಯಾಗಬಲ್ಲ ಸಿಸಿ ಟಿವಿ ಕ್ಯಾಮೆರಾ ಡಿವಿಆರ್‌ ತೆಗೆದುಕೊಂಡು, ಸುಳಿವು ಸಿಗದಂತೆ ಇಡಿ ಬ್ಯಾಂಕ್‌ ತುಂಬೆಲ್ಲಾ ಕಾರದ ಪುಡಿ ಎಸೆದಿದ್ದರು.ಪಕ್ಕಾ ಸಿನಿಮಾ ಶೈಲಿಯಲ್ಲಿ ಭಾರಿ ಮ್ರಮಾಣದದ ಚಿನ್ನ ಕಳುವಾಗಿತ್ತು ಇದರಿಂದ ಗ್ರಾಹಕರು ಅಕ್ಷರಶಃ ಕಂಗಾಲಾಗಿದ್ದರು.

ದಾವಣಗೆರೆ ಪೊಲೀಸರು ಚಲಬಿಡದೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಸಂಪೂರ್ಣ ಬಂಗಾರ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕ್ರಿಯೆ ಮುಗಿದ ಹಿನ್ನಲೆ ಪೊಲೀಸರು ಗ್ರಾಹಕರ ಸಮುಖದಲ್ಲಿ ಎಲ್ಲ ಬಂಗಾರವನ್ನು ಬ್ಯಾಂಕ್‌‍ಗೆ ಹಸ್ತಾಂತರ ಮಾಡಿದ್ದಾರೆ.

ಪೊಲೀಸರು ಹಸ್ತಾಂತರ ಮಾಡುತ್ತಿದ್ದಂತೆ ಸೇರಿದ್ದ ಎಸ್‌‍ಬಿಐ ಗ್ರಾಹಕರು, ಕಳ್ಳತನ ನಡೆದ ದಿನ ತಮ ಕುಟುಂಬದ ಪರಿಸ್ಥಿತಿ ನೆನೆದು ಭಾವುಕರಾಗಿದ್ದಾರೆ. ಈಗ ಬ್ಯಾಂಕ್‌ ಅಧೕಕಾರಿಗಳು ಸಾಲದ ಹಣ ನೀಡಿ ಅಡವಿಟ್ಟ ಚಿನ್ನವನ್ನು ವಾಪಸ್‌‍ ನೀಡಲು ಮುಂದಾಗಿದೆ.

RELATED ARTICLES

Latest News