ಕನಕಪುರ, ಅ. 26- ಆಸ್ತಿಯ ವ್ಯಾಮೋಹಕ್ಕೆ 60 ವರ್ಷಗಳ ಹಿಂದೆ ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ನೋಂದಣಿ ಮಾಡಿಕೊಂಡು ಆಸ್ತಿ ಪರಭಾರೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರ ವಿರುದ್ಧ ರಾಮನಗರ ಐಜೂರು ಪೋಲೀಸ್ ಠಾಣೆಯಲ್ಲಿ 4 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಕನಕಪುರ ಮತ್ತು ಹಾರೋಹಳ್ಳಿ ತಾಲ್ಲೂಕಿನಲ್ಲಿ ಭೂಮಿಯ ಬೆಲೆ ಗಗನಕ್ಕೆ ಏರಿರುವ ಹಿನ್ನಲೆಯಲ್ಲಿ ಯಾರದೋ ಆಸ್ತಿಯನ್ನು ಮತ್ಯಾರೋ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡುಲಾಗುತ್ತಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಆಸ್ತಿಗೆ ಸಂಬಂಧಿಸಿದ ಹೊಂಬಾಳೆಗೌಡರ 5ನೇ ಮಗ ಬಸವೇಗೌಡ ಪತ್ರಿಕಾಗೋಷ್ಠಿಯಲ್ಲಿ ದಾಖಲಾತಿಗಳನ್ನು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹಾರೋಹಳ್ಳಿ ಹೋಬಳಿ ಚಿಕ್ಕಕಲ್ಬಾಳು ಗ್ರಾಮದ ಚಿಕ್ಕಹುಚ್ಚೇಗೌಡ, ರವಿಕುಮಾರ್, ಪುಟ್ಟಬಸವೇಗೌಡ, ಪಾರ್ವತಮ ನವರ ವಿರುದ್ಧ ಪೋಲೀಸರು ಇದೊಂದು ಗಂಭೀರ ಅಪರಾಧವಾಗಿದ್ದು ನಕಲಿ ದಾಖಲೆ ಅಥವಾ ಬದಲಿ ವ್ಯಕ್ತಿಗಳ ಮೂಲಕ ಆಸ್ತಿ ನೋಂದಣಿ ಮಾಡಿರುವ ಹಾಗೂ ಮೋಸ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ ಎಂಬ ವಿವರಗಳನ್ನು ನೀಡಿದರು.
ಚಿಕ್ಕಕಲ್ಬಾಳು ಗ್ರಾಮದ ಹುಚ್ಚೇಗೌಡರಿಗೆ ಸೇರಿದ ಸರ್ವೆ ನಂ.82/3ರಲ್ಲಿ 33 ಗುಂಟೆ, 87/7ರಲ್ಲಿ 17 ಗುಂಟೆ, 87/9ರಲ್ಲಿ 16 ಗುಂಟೆ, 119/3ರಲ್ಲಿ 5 ಗುಂಟೆ ಒಟ್ಟು 1.32 ಎಕರೆ ಜಮೀನನ್ನು ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸಿ ಜಮೀನನ್ನು ನೊಂದಣಿ ಮಾಡಿಸಿಕೊಳ್ಳಲಾಗಿದೆ. ಜಮೀನಿನ ಮಾಲೀಕ ಹುಚ್ಚೇಗೌಡ ಎಂಬುವವರಿಗೆ ಚಿಕ್ಕಮಾರಕ್ಕ ಹಾಗೂ ಮಾವತೂರಮ ಇಬ್ಬರು ಪತ್ನಿಯರು ಮೃತಪಟ್ಟಿರುತ್ತಾರೆ.
ಎರಡನೇ ಪತ್ನಿ ಮಾವತೂರಮನ 7 ಮಕ್ಕಳಲ್ಲಿ 4ನೇ ಮಗ ಚಿಕ್ಕಹುಚ್ಚೇಗೌಡ ನಾನೇ ಹುಚ್ಚೇಗೌಡನೆಂದು ನಕಲಿ ದಾಖಲೆ ಸೃಷ್ಟಿಸಿ (ಆಧಾರ್ ಕಾರ್ಡ್ ಎಡಿಟ್) ಮಾಡಿ ಪುಟ್ಟಬಸವೇಗೌಡ ಮತ್ತು ರವಿಕುಮಾರ್ ಇಬ್ಬರೂ ಸೇರಿ 60 ವರ್ಷಗಳ ಹಿಂದೆ ಮೃತಪಟ್ಟಿರುವ ನಮ ತಾತ ಹುಚ್ಚೇಗೌಡರ ಹೆಸರಿನಲ್ಲಿರುವ ಜಮೀನನ್ನು ತಮದಾಗಿಸಿಕೊಳ್ಳಲು ನಮ ದೊಡ್ಡಪ್ಪನಾದ ಚಿಕ್ಕಹುಚ್ಚೇಗೌಡ ಆಧಾರ್ಕಾರ್ಡ್ನ್ನು ಹುಚ್ಚೇಗೌಡ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಕನಕಪುರದಲ್ಲಿ ನೋಂದಣಿ ಮಾಡಿಸಿಕೊಂಡರೆ ಬಹಿರಂಗವಾಗುವ ಹಿನ್ನಲೆಯಲ್ಲಿ ರಾಮನಗರಕ್ಕೆ ತೆರಳಿ ಸಬ್ರಿಜಿಸ್ಟರ್ ಕಚೇರಿಯಲ್ಲಿ ತಮ ಹೆಸರಿಗೆ ವಿಭಾಗಪಟ್ಟಿಯನ್ನು ಮಾಡಿ ರಿಜಿಸ್ಟರ್ ಮಾಡಿಕೊಂಡು ಪರಭಾರೆ ಮಾಡಿಕೊಂಡಿದ್ದಾರೆ.
ವಿಭಾಗ ಪತ್ರ ಮಾಡಿಕೊಂಡು ರವಿಕುಮಾರ್ ತನ್ನ ಪತ್ನಿಯ ಹೆಸರಿಗೆ ದಾನ ಪತ್ರ ಮಾಡಿರುವುದಾಗಿ ಆರೋಪಿಸಿದರು. ನಮ ತಾತ ಹುಚ್ಚೇಗೌಡರಿಗೆ 5 ಮಂದಿ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳಾದ ಚಿಕ್ಕಹುಚ್ಚೇಗೌಡ ಮತ್ತು ಹೊಂಬಾಳೇಗೌಡ ಇಬ್ಬರು ಮಕ್ಕಳ ಕುಟುಂಬಸ್ಥರ ಸದಸ್ಯರಿಗೆ ಬರಬೇಕಾಗಿದ್ದ ಆಸ್ತಿಯನ್ನು ರವಿಕುಮಾರ್ ಒಬ್ಬರೇ ತಮದಾಗಿಸಿಕೊಂಡಿದ್ದಾರೆ.
ಈ ವಿಷಯ ಗೊತ್ತಾದ ಕೂಡಲೇ ನಾನು ರಾಮನಗರದಲ್ಲಿ ದೂರು ದಾಖಲಿಸಿದ್ದೇನೆ, ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಿತ್ರಾರ್ಜಿತ ಆಸ್ತಿಯನ್ನು ಪತ್ನಿಯ ಹೆಸರಿಗೆ ಅನಧಿಕೃತವಾಗಿ ದಾನ ಪತ್ರದ ಮೂಲಕ ನೊಂದಣಿ ಮಾಡಿಸಿಕೊಂಡಿರುವ ರವಿಕುಮಾರ್ ಸೇರಿದಂತೆ ಮತ್ತಿತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
